<p><strong>ನವದೆಹಲಿ</strong>: ಚಂಡೀಗಢದಲ್ಲಿ 2024ರಲ್ಲಿ ನಡೆದಿದ್ದ ಗ್ರನೇಡ್ ದಾಳಿ ಕೃತ್ಯದ ಸಂಬಂಧ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ಸಂಘಟನೆಯ ನಾಲ್ವರು ಉಗ್ರರ ವಿರುದ್ಧ ಎನ್ಐಎ ಆರೋಪಪಟ್ಟಿ ದಾಖಲಿಸಿದೆ.</p>.<p>ಪಾಕಿಸ್ತಾನ ಮೂಲದ ಉಗ್ರ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂದಾ, ಅಮೆರಿಕ ಮೂಲದ ಹರ್ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಸ್ಸಿ ಈ ನಾಲ್ವರು ಉಗ್ರರಲ್ಲಿ ಸೇರಿದ್ದಾರೆ ಎಂದು ಎನ್ಐಎ ಹೇಳಿಕೆಯಲ್ಲಿ ತಿಳಿಸಿದೆ.</p>.<p>ಇಲ್ಲಿನ ವಿಶೇಷ ಎನ್ಐಎ ಕೋರ್ಟ್ನಲ್ಲಿ, ಈ ನಾಲ್ವರ ವಿರುದ್ಧ ಕಾನೂನುಬಾಹಿರ ಚಟುವಟಿಕೆ (ನಿಯಂತ್ರಣ) ಕಾಯ್ದೆ (ಯುಎಪಿಎ) ಮತ್ತು ಇತರೆ ಸಂಬಂಧಿತ ಕಾಯ್ದೆಗಳಡಿ ಆರೋಪಪಟ್ಟಿ ದಾಖಲಿಸಲಾಗಿದೆ.</p>.<p>ಉಲ್ಲೇಖಿತ ಗ್ರನೇಡ್ ದಾಳಿ ಕೃತ್ಯದಲ್ಲಿ ರಿಂದಾ ಮತ್ತು ಪಸ್ಸಿ ಪ್ರಮುಖ ಸಂಚುಕೋರರಾಗಿದ್ದರು. ದಾಳಿ ನಡೆಸಲು ಈ ಇಬ್ಬರು ಅಗತ್ಯ ಸಾರಿಗೆ ಸೌಲಭ್ಯ, ಹಣಕಾಸು, ಶಸ್ತ್ರಾಸ್ತ್ರಗಳ ನೆರವು ಒದಗಿಸಿದ್ದರು ಎಂದು ತಿಳಿಸಿದೆ.</p>.<p>ಪಂಜಾಬ್ ಪೊಲೀಸ್ನ ನಿವೃತ್ತ ಅಧಿಕಾರಿಯೊಬ್ಬರನ್ನು ಗುರಿಯಾಗಿಸಿ ಸೆಪ್ಟೆಂಬರ್ 2024ರಲ್ಲಿ ದಾಳಿ ನಡೆದಿತ್ತು. ಈ ಕೃತ್ಯಕ್ಕೆ ಪ್ರಮುಖ ಆರೋಪಿಗಳು ಸ್ಥಳೀಯರಾದ ರೋಹನ್ ಮಾಸಿಹ್ ಮತ್ತು ವಿಶಾಲ್ ಮಾಸಿಹ್ ಅವರ ನೆರವು ಪಡೆದಿದ್ದರು. ಈ ಇಬ್ಬರ ನೇರ ಸೂಚನೆಯಂತೆ ದಾಳಿ ನಡೆದಿತ್ತು ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಚಂಡೀಗಢದಲ್ಲಿ 2024ರಲ್ಲಿ ನಡೆದಿದ್ದ ಗ್ರನೇಡ್ ದಾಳಿ ಕೃತ್ಯದ ಸಂಬಂಧ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ಸಂಘಟನೆಯ ನಾಲ್ವರು ಉಗ್ರರ ವಿರುದ್ಧ ಎನ್ಐಎ ಆರೋಪಪಟ್ಟಿ ದಾಖಲಿಸಿದೆ.</p>.<p>ಪಾಕಿಸ್ತಾನ ಮೂಲದ ಉಗ್ರ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂದಾ, ಅಮೆರಿಕ ಮೂಲದ ಹರ್ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಸ್ಸಿ ಈ ನಾಲ್ವರು ಉಗ್ರರಲ್ಲಿ ಸೇರಿದ್ದಾರೆ ಎಂದು ಎನ್ಐಎ ಹೇಳಿಕೆಯಲ್ಲಿ ತಿಳಿಸಿದೆ.</p>.<p>ಇಲ್ಲಿನ ವಿಶೇಷ ಎನ್ಐಎ ಕೋರ್ಟ್ನಲ್ಲಿ, ಈ ನಾಲ್ವರ ವಿರುದ್ಧ ಕಾನೂನುಬಾಹಿರ ಚಟುವಟಿಕೆ (ನಿಯಂತ್ರಣ) ಕಾಯ್ದೆ (ಯುಎಪಿಎ) ಮತ್ತು ಇತರೆ ಸಂಬಂಧಿತ ಕಾಯ್ದೆಗಳಡಿ ಆರೋಪಪಟ್ಟಿ ದಾಖಲಿಸಲಾಗಿದೆ.</p>.<p>ಉಲ್ಲೇಖಿತ ಗ್ರನೇಡ್ ದಾಳಿ ಕೃತ್ಯದಲ್ಲಿ ರಿಂದಾ ಮತ್ತು ಪಸ್ಸಿ ಪ್ರಮುಖ ಸಂಚುಕೋರರಾಗಿದ್ದರು. ದಾಳಿ ನಡೆಸಲು ಈ ಇಬ್ಬರು ಅಗತ್ಯ ಸಾರಿಗೆ ಸೌಲಭ್ಯ, ಹಣಕಾಸು, ಶಸ್ತ್ರಾಸ್ತ್ರಗಳ ನೆರವು ಒದಗಿಸಿದ್ದರು ಎಂದು ತಿಳಿಸಿದೆ.</p>.<p>ಪಂಜಾಬ್ ಪೊಲೀಸ್ನ ನಿವೃತ್ತ ಅಧಿಕಾರಿಯೊಬ್ಬರನ್ನು ಗುರಿಯಾಗಿಸಿ ಸೆಪ್ಟೆಂಬರ್ 2024ರಲ್ಲಿ ದಾಳಿ ನಡೆದಿತ್ತು. ಈ ಕೃತ್ಯಕ್ಕೆ ಪ್ರಮುಖ ಆರೋಪಿಗಳು ಸ್ಥಳೀಯರಾದ ರೋಹನ್ ಮಾಸಿಹ್ ಮತ್ತು ವಿಶಾಲ್ ಮಾಸಿಹ್ ಅವರ ನೆರವು ಪಡೆದಿದ್ದರು. ಈ ಇಬ್ಬರ ನೇರ ಸೂಚನೆಯಂತೆ ದಾಳಿ ನಡೆದಿತ್ತು ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>