ಆದೇಶ ಮರುಪರಿಶೀಲನೆಗೆ ಅವಕಾಶ ಇರಬೇಕು ಎಂಬ ಅರ್ಜಿಗಳ ಪರಿಶೀಲನೆಗಾಗಿ ಲೋಕಪಾಲ ಅಧ್ಯಕ್ಷ ಪಿನಾಕಿ ಚಂದ್ರಘೋಶ್ ಅವರು ತ್ರಿಸದಸ್ಯರ ಸಮಿತಿಯನ್ನು ಅ. 6.2020ರಲ್ಲಿ ರಚಿಸಿದ್ದರು. ನ್ಯಾಯಮೂರ್ತಿಗಳಾದ ಅಭಿಲಾಶಾ ಕುಮಾರಿ, ಡಿ.ಕೆ.ಜೈನ್ ಮತ್ತು ಐ.ಪಿ.ಗೌತಮ್ ಅವರಿದ್ದ ಸಮಿತಿಯು, ನಿಯಮ ತಿದ್ದುಪಡಿ ಮಾಡಬೇಕು ಎಂಬುದನ್ನು ಸರ್ಕಾರ ಪರಿಶೀಲಿಸಬಹುದು ಎಂದು ಶಿಫಾರಸು ಮಾಡಿತ್ತು.