<p><strong>ಭುವನೇಶ್ವರ:</strong> ಆನೆ ಹಾಗೂ ಮಾನವ ಸಂಘರ್ಷ ತಪ್ಪಿಸಲು ತರಬೇತಿ ಪಡೆದ ನಾಲ್ಕು ಕುಮ್ಕಿ ಆನೆಗಳನ್ನು ಕಳುಹಿಸುವಂತೆ ಒಡಿಶಾ ಸರ್ಕಾರವು ತಮಿಳನಾಡನ್ನು ಕೋರಿದೆ.</p><p>ಆನೆ ಮತ್ತು ಮಾನವ ಸಂಘರ್ಷ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಒಡಿಶಾ ಸರ್ಕಾರ ಹಲವು ಸವಾಲುಗಳನ್ನು ಎದುರಿಸಿದೆ. ಈ ಕುರಿತಂತೆ ಒಡಿಶಾದ ಅರಣ್ಯ ಇಲಾಖೆಯ ಸಹ ಮುಖ್ಯ ಕಾರ್ಯದರ್ಶಿ ಸತ್ಯವ್ರತಾ ಸಾಹು ಅವರು ತಮಿಳುನಾಡು ಅರಣ್ಯ ಇಲಾಖೆಯ ಅಧಿಕಾರಿ ಸುಪ್ರಿಯಾ ಸಾಹು ಅವರಿಗೆ ಪತ್ರ ಬರೆದು ಕೋರಿದ್ದಾರೆ.</p><p>ಕುಮ್ಕಿ ಆನೆಗಳನ್ನು ನಿಯೋಜಿಸುವ ಮೂಲಕ ಆನೆ–ಮಾನವ ಸಂಘರ್ಷಕ್ಕೆ ಕಾರಣವಾದ ಬೆಳೆ ನಾಶ, ಮನುಷ್ಯ ವಾಸ ಸ್ಥಳಕ್ಕೆ ದಾಳಿ ಮತ್ತು ಆನೆಗಳ ಅಸಹಜ ಸಾವು ತಡೆಗಟ್ಟಲು ನೆರವಾಗಲಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.</p><p>’ಈ ಕುಮ್ಕಿ ಆನೆಗಳು ಒಡಿಶಾಕ್ಕೆ ಆಸ್ತಿಗಳಾಗಲಿವೆ. ಮನುಷ್ಯರು ಮತ್ತು ವನ್ಯಜೀವಿಗಳ ಹಿತದೃಷ್ಟಿಯಲ್ಲಿ ಇರುವ ಸಮಸ್ಯೆಯನ್ನು ತಗ್ಗಿಸುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ತರಬೇತಿ ಪಡೆದ ನಾಲ್ಕು ಆನೆಗಳು ಮತ್ತು ಮಾವುತರನ್ನು ಕಳುಹಿಸಬೇಕು. ಸ್ಥಳೀಯ ಮಾವುತರು ತರಬೇತಿ ಪಡೆಯುವವರೆಗೂ ತಮಿಳುನಾಡಿನ ಮಾವುತರ ನೆರವು ಪಡೆಯಲಾಗುವುದು’ ಎಂದು ಸಾಹು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ:</strong> ಆನೆ ಹಾಗೂ ಮಾನವ ಸಂಘರ್ಷ ತಪ್ಪಿಸಲು ತರಬೇತಿ ಪಡೆದ ನಾಲ್ಕು ಕುಮ್ಕಿ ಆನೆಗಳನ್ನು ಕಳುಹಿಸುವಂತೆ ಒಡಿಶಾ ಸರ್ಕಾರವು ತಮಿಳನಾಡನ್ನು ಕೋರಿದೆ.</p><p>ಆನೆ ಮತ್ತು ಮಾನವ ಸಂಘರ್ಷ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಒಡಿಶಾ ಸರ್ಕಾರ ಹಲವು ಸವಾಲುಗಳನ್ನು ಎದುರಿಸಿದೆ. ಈ ಕುರಿತಂತೆ ಒಡಿಶಾದ ಅರಣ್ಯ ಇಲಾಖೆಯ ಸಹ ಮುಖ್ಯ ಕಾರ್ಯದರ್ಶಿ ಸತ್ಯವ್ರತಾ ಸಾಹು ಅವರು ತಮಿಳುನಾಡು ಅರಣ್ಯ ಇಲಾಖೆಯ ಅಧಿಕಾರಿ ಸುಪ್ರಿಯಾ ಸಾಹು ಅವರಿಗೆ ಪತ್ರ ಬರೆದು ಕೋರಿದ್ದಾರೆ.</p><p>ಕುಮ್ಕಿ ಆನೆಗಳನ್ನು ನಿಯೋಜಿಸುವ ಮೂಲಕ ಆನೆ–ಮಾನವ ಸಂಘರ್ಷಕ್ಕೆ ಕಾರಣವಾದ ಬೆಳೆ ನಾಶ, ಮನುಷ್ಯ ವಾಸ ಸ್ಥಳಕ್ಕೆ ದಾಳಿ ಮತ್ತು ಆನೆಗಳ ಅಸಹಜ ಸಾವು ತಡೆಗಟ್ಟಲು ನೆರವಾಗಲಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.</p><p>’ಈ ಕುಮ್ಕಿ ಆನೆಗಳು ಒಡಿಶಾಕ್ಕೆ ಆಸ್ತಿಗಳಾಗಲಿವೆ. ಮನುಷ್ಯರು ಮತ್ತು ವನ್ಯಜೀವಿಗಳ ಹಿತದೃಷ್ಟಿಯಲ್ಲಿ ಇರುವ ಸಮಸ್ಯೆಯನ್ನು ತಗ್ಗಿಸುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ತರಬೇತಿ ಪಡೆದ ನಾಲ್ಕು ಆನೆಗಳು ಮತ್ತು ಮಾವುತರನ್ನು ಕಳುಹಿಸಬೇಕು. ಸ್ಥಳೀಯ ಮಾವುತರು ತರಬೇತಿ ಪಡೆಯುವವರೆಗೂ ತಮಿಳುನಾಡಿನ ಮಾವುತರ ನೆರವು ಪಡೆಯಲಾಗುವುದು’ ಎಂದು ಸಾಹು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>