<p><strong>ಕೋಲ್ಕತ್ತ (ಪಿಟಿಐ): ‘...</strong>ಚದುರಿದ ಮೋಡಗಳು ಸಣ್ಣ ಸಣ್ಣ ಮಳೆ ತರಿಸುತ್ತವೆ, ನಾವು ಕೇಳಿದ ಸಣ್ಣ ಸಣ್ಣ ಕಥೆಗಳು ಪ್ರೀತಿ ಅರಳಿಸುತ್ತವೆ...’ ‘...ಪ್ರೀತಿಯೇ ಎಲ್ಲಾ ಗಳಿಗೆಯಲ್ಲೂ ನೀನು ಇರಬೇಕು, ಎಲ್ಲಾ ಗಳಿಗೆಯಲ್ಲೂ ನೀನು ನನ್ನ ಮನದಲ್ಲಿರುತ್ತೀಯೇ...’</p>.<p>– ಈ ಬಂಗಾಳಿ ಕವಿತೆಗಳ ಸಾಲುಗಳು ರೈಲು ಕಂಬಿಗಳ ಮೇಲೆ ಅನಾಥವಾಗಿ ಬಿದ್ದಿದ್ದವು. ಕೋರಮಂಡಲ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಕರೊಬ್ಬರು ರಚಿಸಿದ ಕವಿತೆಗಳಿವು. ಪ್ರಯಾಣದುದ್ದಕ್ಕೂ ಪ್ರಯಾಣಿಕನ ಕವಿ ಭಾವನೆಗಳು ಹಾಳೆಗಳ ಮೇಲೆ ಪದಗಳ ರೂಪ ಪಡೆದುಕೊಂಡಿದ್ದವು.</p>.<p>'ಪ್ರಯಾಣಿಕನ ಡೈರಿಯೊಂದರ ಹಾಳೆಗಳು ಕಂಬಿಯ ಮೇಲೆ ಬಿದ್ದಿದ್ದವು. ಇದರಲ್ಲಿ ಆನೆ, ಮೀನುಗಳ ಚಿತ್ರಗಳನ್ನೂ ಬಿಡಿಸಲಾಗಿತ್ತು. ಈ ವರೆಗೂ ಈ ಕವಿತೆಗಳನ್ನು ರಚಿಸಿದವರ ಸಂಬಂಧಿಕರು ನಮ್ಮ ಬಳಿ ಬಂದಿಲ್ಲ. ಈ ಕವಿತೆಗಳನ್ನು ಯಾರು ಬರೆದಿದ್ದಾರೆ ಎಂದೂ ತಿಳಿದಿಲ್ಲ’ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.</p>.<p>ಕವಿತೆಗಳಿದ್ದ ಹಾಳೆಗಳು ಕಂಬಿಯ ಮೇಲೆ ಬಿದ್ದಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ‘ಬದುಕು ಎಷ್ಟು ಕ್ಷಣಿಕ’ ಎಂಬಂಥ ಕಮೆಂಟ್ಗಳನ್ನು ನೆಟ್ಟಿಗರು ಮಾಡುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ (ಪಿಟಿಐ): ‘...</strong>ಚದುರಿದ ಮೋಡಗಳು ಸಣ್ಣ ಸಣ್ಣ ಮಳೆ ತರಿಸುತ್ತವೆ, ನಾವು ಕೇಳಿದ ಸಣ್ಣ ಸಣ್ಣ ಕಥೆಗಳು ಪ್ರೀತಿ ಅರಳಿಸುತ್ತವೆ...’ ‘...ಪ್ರೀತಿಯೇ ಎಲ್ಲಾ ಗಳಿಗೆಯಲ್ಲೂ ನೀನು ಇರಬೇಕು, ಎಲ್ಲಾ ಗಳಿಗೆಯಲ್ಲೂ ನೀನು ನನ್ನ ಮನದಲ್ಲಿರುತ್ತೀಯೇ...’</p>.<p>– ಈ ಬಂಗಾಳಿ ಕವಿತೆಗಳ ಸಾಲುಗಳು ರೈಲು ಕಂಬಿಗಳ ಮೇಲೆ ಅನಾಥವಾಗಿ ಬಿದ್ದಿದ್ದವು. ಕೋರಮಂಡಲ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಕರೊಬ್ಬರು ರಚಿಸಿದ ಕವಿತೆಗಳಿವು. ಪ್ರಯಾಣದುದ್ದಕ್ಕೂ ಪ್ರಯಾಣಿಕನ ಕವಿ ಭಾವನೆಗಳು ಹಾಳೆಗಳ ಮೇಲೆ ಪದಗಳ ರೂಪ ಪಡೆದುಕೊಂಡಿದ್ದವು.</p>.<p>'ಪ್ರಯಾಣಿಕನ ಡೈರಿಯೊಂದರ ಹಾಳೆಗಳು ಕಂಬಿಯ ಮೇಲೆ ಬಿದ್ದಿದ್ದವು. ಇದರಲ್ಲಿ ಆನೆ, ಮೀನುಗಳ ಚಿತ್ರಗಳನ್ನೂ ಬಿಡಿಸಲಾಗಿತ್ತು. ಈ ವರೆಗೂ ಈ ಕವಿತೆಗಳನ್ನು ರಚಿಸಿದವರ ಸಂಬಂಧಿಕರು ನಮ್ಮ ಬಳಿ ಬಂದಿಲ್ಲ. ಈ ಕವಿತೆಗಳನ್ನು ಯಾರು ಬರೆದಿದ್ದಾರೆ ಎಂದೂ ತಿಳಿದಿಲ್ಲ’ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.</p>.<p>ಕವಿತೆಗಳಿದ್ದ ಹಾಳೆಗಳು ಕಂಬಿಯ ಮೇಲೆ ಬಿದ್ದಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ‘ಬದುಕು ಎಷ್ಟು ಕ್ಷಣಿಕ’ ಎಂಬಂಥ ಕಮೆಂಟ್ಗಳನ್ನು ನೆಟ್ಟಿಗರು ಮಾಡುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>