<p><strong>ಮಹಾಕುಂಭ ನಗರ:</strong> ಜಗತ್ತಿನ ಅತಿ ದೊಡ್ಡ ಕಾರ್ಯಕ್ರಮ ಮಹಾಕುಂಭ ಮೇಳವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಉದ್ದೇಶದಿಂದ ‘ಒಂದು ಪ್ಲೇಟ್, ಒಂದು ಬ್ಯಾಗ್’ ಅಭಿಯಾನವನ್ನು ಆರ್ಎಸ್ಎಸ್ ಆರಂಭಿಸಿದೆ.</p><p>ಪ್ಲಾಸ್ಟಿಕ್ ಚೀಲಗಳು ಮತ್ತು ಬಿಸಾಡುವ ವಸ್ತುಗಳನ್ನು ತಪ್ಪಿಸಲು ಬಟ್ಟೆ ಚೀಲಗಳು, ಸ್ಟೀಲ್ ಪ್ಲೇಟ್ಗಳು ಮತ್ತು ಸ್ಟೀಲ್ ಗ್ಲಾಸ್ಗಳನ್ನು ವಿತರಿಸಲಾಗುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಕೃಷ್ಣ ಗೋಪಾಲ್ ತಿಳಿಸಿದ್ದಾರೆ. </p><p>ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ಗೋಪಾಲ್ ಅವರು, ‘ಪ್ಲಾಸ್ಟಿಕ್ ಮುಕ್ತ ಸಮಾಜವನ್ನು ನಿರ್ಮಿಸಲು ಎಲ್ಲರ ಪ್ರಯತ್ನ ಅಗತ್ಯ. ಹೀಗಾಗಿ ಎಲ್ಲರೂ ಬಟ್ಟೆಯ ಚೀಲವನ್ನು ಬಳಸಿ’ ಎಂದು ಒತ್ತಾಯಿಸಿದ್ದಾರೆ.</p><p>‘ಭೇಟಿ ನೀಡುವವರಿಗೆ ಬಟ್ಟೆಯ ಚೀಲಗಳನ್ನು ನೀಡಲಾಗುತ್ತಿದೆ. ಈಗಾಗಲೇ ಆರು ಕೇಂದ್ರಗಳ ಮೂಲಕ 70 ಸಾವಿರ ಜನರಿಗೆ ನೀಡಲಾಗಿದೆ. ದೇಶದಾದ್ಯಂತ ಒಟ್ಟು 2 ಲಕ್ಷ ಸ್ಟೀಲ್ ಪ್ಲೇಟ್ಗಳನ್ನು ಸಂಗ್ರಹಿಸಲಾಗಿದೆ. ಈ ಸ್ಟೀಲ್ ಪ್ಲೇಟ್ ಮತ್ತು ಗ್ಲಾಸ್ಗಳನ್ನು ಎಲ್ಲಾ ಸಮುದಾಯದ ಅಡುಗೆ ಮಾಡುವವರಿಗೆ ಮತ್ತು ಆಹಾರದ ಮಳಿಗೆಗಳನ್ನು ಇಟ್ಟುಕೊಂಡವರಿಗೆ ಹಂಚಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.</p><p>ಜ.14 ರಂದು ಸಂಕ್ರಾಂತಿಯ ಶುಭಗಳಿಗೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ‘ಅಮೃತ ಸ್ನಾನ’ ಕೈಗೊಂಡು, ಪರಿಸರ ಸ್ನೇಹಿ ವಸ್ತುಗಳ ಬಳಕೆಯನ್ನು ಅಳವಡಿಸಿಕೊಳ್ಳಿ, ಏಕ ಬಳಕೆ ಪ್ಲಾಸ್ಟಿಕ್ ಬಳಕೆಯನ್ನು ತಪ್ಪಿಸಿ ಎಂದು ಭಕ್ತಾದಿಗಳಿಗೆ ಮನವಿ ಮಾಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹಾಕುಂಭ ನಗರ:</strong> ಜಗತ್ತಿನ ಅತಿ ದೊಡ್ಡ ಕಾರ್ಯಕ್ರಮ ಮಹಾಕುಂಭ ಮೇಳವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಉದ್ದೇಶದಿಂದ ‘ಒಂದು ಪ್ಲೇಟ್, ಒಂದು ಬ್ಯಾಗ್’ ಅಭಿಯಾನವನ್ನು ಆರ್ಎಸ್ಎಸ್ ಆರಂಭಿಸಿದೆ.</p><p>ಪ್ಲಾಸ್ಟಿಕ್ ಚೀಲಗಳು ಮತ್ತು ಬಿಸಾಡುವ ವಸ್ತುಗಳನ್ನು ತಪ್ಪಿಸಲು ಬಟ್ಟೆ ಚೀಲಗಳು, ಸ್ಟೀಲ್ ಪ್ಲೇಟ್ಗಳು ಮತ್ತು ಸ್ಟೀಲ್ ಗ್ಲಾಸ್ಗಳನ್ನು ವಿತರಿಸಲಾಗುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಕೃಷ್ಣ ಗೋಪಾಲ್ ತಿಳಿಸಿದ್ದಾರೆ. </p><p>ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ಗೋಪಾಲ್ ಅವರು, ‘ಪ್ಲಾಸ್ಟಿಕ್ ಮುಕ್ತ ಸಮಾಜವನ್ನು ನಿರ್ಮಿಸಲು ಎಲ್ಲರ ಪ್ರಯತ್ನ ಅಗತ್ಯ. ಹೀಗಾಗಿ ಎಲ್ಲರೂ ಬಟ್ಟೆಯ ಚೀಲವನ್ನು ಬಳಸಿ’ ಎಂದು ಒತ್ತಾಯಿಸಿದ್ದಾರೆ.</p><p>‘ಭೇಟಿ ನೀಡುವವರಿಗೆ ಬಟ್ಟೆಯ ಚೀಲಗಳನ್ನು ನೀಡಲಾಗುತ್ತಿದೆ. ಈಗಾಗಲೇ ಆರು ಕೇಂದ್ರಗಳ ಮೂಲಕ 70 ಸಾವಿರ ಜನರಿಗೆ ನೀಡಲಾಗಿದೆ. ದೇಶದಾದ್ಯಂತ ಒಟ್ಟು 2 ಲಕ್ಷ ಸ್ಟೀಲ್ ಪ್ಲೇಟ್ಗಳನ್ನು ಸಂಗ್ರಹಿಸಲಾಗಿದೆ. ಈ ಸ್ಟೀಲ್ ಪ್ಲೇಟ್ ಮತ್ತು ಗ್ಲಾಸ್ಗಳನ್ನು ಎಲ್ಲಾ ಸಮುದಾಯದ ಅಡುಗೆ ಮಾಡುವವರಿಗೆ ಮತ್ತು ಆಹಾರದ ಮಳಿಗೆಗಳನ್ನು ಇಟ್ಟುಕೊಂಡವರಿಗೆ ಹಂಚಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.</p><p>ಜ.14 ರಂದು ಸಂಕ್ರಾಂತಿಯ ಶುಭಗಳಿಗೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ‘ಅಮೃತ ಸ್ನಾನ’ ಕೈಗೊಂಡು, ಪರಿಸರ ಸ್ನೇಹಿ ವಸ್ತುಗಳ ಬಳಕೆಯನ್ನು ಅಳವಡಿಸಿಕೊಳ್ಳಿ, ಏಕ ಬಳಕೆ ಪ್ಲಾಸ್ಟಿಕ್ ಬಳಕೆಯನ್ನು ತಪ್ಪಿಸಿ ಎಂದು ಭಕ್ತಾದಿಗಳಿಗೆ ಮನವಿ ಮಾಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>