‘ತೈಲ ಬೆಲೆ ಏರಿಕೆಯು ಆರ್ಥಿಕವಾಗಿ ಇತರ ಅನೇಕ ಪರಿಣಾಮಗಳನ್ನು ಉಂಟುಮಾಡುತ್ತವೆ. ಅಗತ್ಯ ವಸ್ತುಗಳು ದುಬಾರಿಯಾಗುತ್ತವೆ. ಜನಸಾಮಾನ್ಯರಿಗೆ ಇಂಥ ಶಿಕ್ಷೆಯನ್ನೇಕೆ ಕೊಡಬೇಕು? ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು, ಮಾತ್ರವಲ್ಲ ಡೀಸೆಲ್ ಹಾಗೂ ಪೆಟ್ರೋಲ್ ಅನ್ನು ಜಿಎಸ್ಟಿ ವ್ಯಾಪ್ತಿಯೊಳಗೆ ತರಬೇಕು’ ಎಂದು ಡಿಎಂಕೆಯ ಟಿ.ಆರ್. ಬಾಲು ಒತ್ತಾಯಿಸಿದರು.