ಮೇನಕಾ ಅವರ ಆರೋಪಗಳ ಬಗ್ಗೆ ಪಿಟಿಐಗೆ ಪ್ರತಿಕ್ರಿಯಿಸಿರುವ ಸಚಿವರು, ‘ನರಭಕ್ಷಕ ಹುಲಿಗಳನ್ನು ಕೊಲ್ಲಲು ಆದೇಶಿಸುವ ಹಕ್ಕು ಸಂಬಂಧಿಸಿದ ಸಚಿವರು ಅಥವಾ ಸಚಿವಾಲಯಕ್ಕೆ ಇದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್ಟಿಸಿಎ) ಮಾರ್ಗಸೂಚಿ ಪ್ರಕಾರವೇ ಈ ಕಾರ್ಯಾಚರಣೆ ನಡೆದಿದೆ. ಇದು ಸರಿಯಲ್ಲ ಎನಿಸಿದರೆ ಅವರು ಎನ್ಟಿಸಿಯ ಮಾರ್ಗಸೂಚಿಗಳಿಗೇ ಬದಲಾವಣೆ ತರುವಂತೆ ಸೂಚಿಸಬಹುದು. ಹುಲಿ ಕೊಂದ ಶಾರ್ಪ್ ಶೂಟರ್ ವಿರುದ್ಧ ಕ್ರಿಮಿನಲ್ ಅಪರಾಧದ ಪ್ರಕರಣಗಳಿದ್ದರೆ ಆತನನ್ನು ಬಂಧಿಸುವಂತೆ ಮೇನಕಾ ಅವರೇ ಆದೇಶಿಸಬಹುದು’ ಎಂದಿದ್ದಾರೆ.