<p><strong>ನವದೆಹಲಿ:</strong> 'ಆಪರೇಷನ್ ಸಿಂಧೂರ' ನಿಲ್ಲಿಸಲು ಯಾವುದೇ ಒತ್ತಡ ಇರಲಿಲ್ಲ. ಸಶಸ್ತ್ರ ಪಡೆಗಳು ನಿರ್ದಿಷ್ಟ ರಾಜಕೀಯ-ಮಿಲಿಟರಿ ಗುರಿ ಸಾಧಿಸಿದ ಬಳಿಕ ತಾತ್ಕಾಲಿಕವಾಗಿ ಕಾರ್ಯಾಚರಣೆ ನಿಲ್ಲಿಸಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಲೋಕಸಭೆಗೆ ತಿಳಿಸಿದ್ದಾರೆ. </p><p>ಸಂಸತ್ತಿನಲ್ಲಿ ಇಂದು (ಸೋಮವಾರ) ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಸಂಬಂಧಿಸಿದ ಚರ್ಚೆಯಲ್ಲಿ ಸರ್ಕಾರದ ನಿಲುವುಗಳನ್ನು ರಾಜನಾಥ ಸಿಂಗ್ ಸಮರ್ಥಿಸಿಕೊಂಡಿದ್ದಾರೆ.</p><p>ಒಂದು ವೇಳೆ ಪಾಕಿಸ್ತಾನ ಮತ್ತೆ ದುಸ್ಸಾಹಸಕ್ಕೆ ಮುಂದಾದರೆ ಕಾರ್ಯಾಚರಣೆಯನ್ನು ಮತ್ತೆ ಮುಂದುವರಿಸುತ್ತೇವೆ ಎಂದು ಅವರು ಹೇಳಿದ್ದಾರೆ. </p><p><strong>ಪುರಾವೆಗಳು ನಮ್ಮ ಬಳಿ ಇವೆ...</strong></p><p>'ಭಾರತದ ಗಡಿಗಳನ್ನು ರಕ್ಷಿಸಲು ಸಶಸ್ತ್ರ ಪಡೆಗಳು ಸದಾ ಸನ್ನದ್ಧವಾಗಿರುತ್ತವೆ. ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸಲಾಯಿತು. ಈ ಪೈಕಿ ಏಳು ಭಯೋತ್ಪಾದಕ ಕೇಂದ್ರಗಳು ಸಂಪೂರ್ಣವಾಗಿ ನಾಶವಾಗಿವೆ' ಎಂದು ಅವರು ಹೇಳಿದ್ದಾರೆ. </p><p>'22 ನಿಮಿಷಗಳ ಕಾರ್ಯಾಚರಣೆಯಲ್ಲಿ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಲಾಯಿತು. ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದೊಳಗೆ ನಡೆಸಿದ ಕಾರ್ಯಾಚರಣೆಯಲ್ಲಿ ಉಂಟಾದ ಹಾನಿಯ ಸಂಬಂಧ ಪುರಾವೆಗಳು ನಮ್ಮ ಬಳಿ ಇವೆ' ಎಂದು ಅವರು ಸದನಕ್ಕೆ ತಿಳಿಸಿದ್ದಾರೆ. </p><p>'ಆಪರೇಷನ್ ಸಿಂಧೂರ ಜಾರಿ ಮಾಡುವ ಮುನ್ನ ನಮ್ಮ ಪಡೆಗಳು ಪ್ರತಿಯೊಂದು ಅಂಶವನ್ನು ಪರಿಶೀಲಿಸಿ ಭಯೋತ್ಪಾದಕರ ಮೇಲೆ ಗರಿಷ್ಠ ಹಾನಿ ಮಾಡುವ ಜೊತೆಗೆ ಅಮಾಯಕ ನಾಗರಿಕರಿಗೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಯಿತು' ಎಂದು ಅವರು ತಿಳಿಸಿದ್ದಾರೆ. </p><p><strong>ಒತ್ತಡ ಇರಲಿಲ್ಲ...</strong></p><p>'ಒತ್ತಡಕ್ಕೆ ಒಳಗಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು ಎಂಬುವುದು ತಪ್ಪು ಹಾಗೂ ಆಧಾರರಹಿತವಾಗಿದೆ. ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಯ ಮಹಾನಿರ್ದೇಶಕರು ದಾಳಿ ಕೊನೆಗೊಳಿಸುವಂತೆ ವಿನಂತಿ ಮಾಡಿದ್ದರು' ಎಂದು ರಾಜನಾಥ ಸ್ಪಷ್ಟಪಡಿಸಿದ್ದಾರೆ. </p><p>'ಆಪರೇಷನ್ ಸಿಂಧೂರ ನಮ್ಮ ಶಕ್ತಿಯ ಸಂಕೇತವಾಗಿದ್ದು, ನಮ್ಮ ದೇಶದ ನಾಗರಿಕರಿಗೆ ಹಾನಿಯುಂಟು ಮಾಡಿದರೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದೇವೆ' ಎಂದು ರಾಜನಾಥ ಹೇಳಿದ್ದಾರೆ. </p><p>ವ್ಯಾಪಾರ ವಿಷಯವನ್ನು ಮುಂದಿಟ್ಟುಕೊಂಡು ಭಾರತ ಹಾಗೂ ಪಾಕಿಸ್ತಾನ ನಡುವಣ ಯುದ್ಧ ಕೊನೆಗೊಳಿಸಲಾಯಿತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ಬಾರಿ ಹೇಳಿಕೆ ನೀಡಿದ್ದರು. ಆದರೆ ಮೂರನೇ ದೇಶದ ಮಧ್ಯಪ್ರವೇಶವನ್ನು ಭಾರತ ನಿರಾಕರಿಸುತ್ತಲೇ ಬಂದಿದೆ. </p>.Operation Sindoor ಚರ್ಚೆ: ಕಾಂಗ್ರೆಸ್ ಇಚ್ಛೆಗೆ ‘ಇಲ್ಲ‘ ಎಂದ ಸಂಸದ ಶಶಿ ತರೂರ್.ಆಪರೇಷನ್ ಮಹಾದೇವ: ಪಹಲ್ಗಾಮ್ ದಾಳಿಕೋರರೆಂದು ಶಂಕಿಸಲಾದ ಮೂವರು ಭಯೋತ್ಪಾದಕರ ಹತ್ಯೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> 'ಆಪರೇಷನ್ ಸಿಂಧೂರ' ನಿಲ್ಲಿಸಲು ಯಾವುದೇ ಒತ್ತಡ ಇರಲಿಲ್ಲ. ಸಶಸ್ತ್ರ ಪಡೆಗಳು ನಿರ್ದಿಷ್ಟ ರಾಜಕೀಯ-ಮಿಲಿಟರಿ ಗುರಿ ಸಾಧಿಸಿದ ಬಳಿಕ ತಾತ್ಕಾಲಿಕವಾಗಿ ಕಾರ್ಯಾಚರಣೆ ನಿಲ್ಲಿಸಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಲೋಕಸಭೆಗೆ ತಿಳಿಸಿದ್ದಾರೆ. </p><p>ಸಂಸತ್ತಿನಲ್ಲಿ ಇಂದು (ಸೋಮವಾರ) ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಸಂಬಂಧಿಸಿದ ಚರ್ಚೆಯಲ್ಲಿ ಸರ್ಕಾರದ ನಿಲುವುಗಳನ್ನು ರಾಜನಾಥ ಸಿಂಗ್ ಸಮರ್ಥಿಸಿಕೊಂಡಿದ್ದಾರೆ.</p><p>ಒಂದು ವೇಳೆ ಪಾಕಿಸ್ತಾನ ಮತ್ತೆ ದುಸ್ಸಾಹಸಕ್ಕೆ ಮುಂದಾದರೆ ಕಾರ್ಯಾಚರಣೆಯನ್ನು ಮತ್ತೆ ಮುಂದುವರಿಸುತ್ತೇವೆ ಎಂದು ಅವರು ಹೇಳಿದ್ದಾರೆ. </p><p><strong>ಪುರಾವೆಗಳು ನಮ್ಮ ಬಳಿ ಇವೆ...</strong></p><p>'ಭಾರತದ ಗಡಿಗಳನ್ನು ರಕ್ಷಿಸಲು ಸಶಸ್ತ್ರ ಪಡೆಗಳು ಸದಾ ಸನ್ನದ್ಧವಾಗಿರುತ್ತವೆ. ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸಲಾಯಿತು. ಈ ಪೈಕಿ ಏಳು ಭಯೋತ್ಪಾದಕ ಕೇಂದ್ರಗಳು ಸಂಪೂರ್ಣವಾಗಿ ನಾಶವಾಗಿವೆ' ಎಂದು ಅವರು ಹೇಳಿದ್ದಾರೆ. </p><p>'22 ನಿಮಿಷಗಳ ಕಾರ್ಯಾಚರಣೆಯಲ್ಲಿ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಲಾಯಿತು. ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದೊಳಗೆ ನಡೆಸಿದ ಕಾರ್ಯಾಚರಣೆಯಲ್ಲಿ ಉಂಟಾದ ಹಾನಿಯ ಸಂಬಂಧ ಪುರಾವೆಗಳು ನಮ್ಮ ಬಳಿ ಇವೆ' ಎಂದು ಅವರು ಸದನಕ್ಕೆ ತಿಳಿಸಿದ್ದಾರೆ. </p><p>'ಆಪರೇಷನ್ ಸಿಂಧೂರ ಜಾರಿ ಮಾಡುವ ಮುನ್ನ ನಮ್ಮ ಪಡೆಗಳು ಪ್ರತಿಯೊಂದು ಅಂಶವನ್ನು ಪರಿಶೀಲಿಸಿ ಭಯೋತ್ಪಾದಕರ ಮೇಲೆ ಗರಿಷ್ಠ ಹಾನಿ ಮಾಡುವ ಜೊತೆಗೆ ಅಮಾಯಕ ನಾಗರಿಕರಿಗೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಯಿತು' ಎಂದು ಅವರು ತಿಳಿಸಿದ್ದಾರೆ. </p><p><strong>ಒತ್ತಡ ಇರಲಿಲ್ಲ...</strong></p><p>'ಒತ್ತಡಕ್ಕೆ ಒಳಗಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು ಎಂಬುವುದು ತಪ್ಪು ಹಾಗೂ ಆಧಾರರಹಿತವಾಗಿದೆ. ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಯ ಮಹಾನಿರ್ದೇಶಕರು ದಾಳಿ ಕೊನೆಗೊಳಿಸುವಂತೆ ವಿನಂತಿ ಮಾಡಿದ್ದರು' ಎಂದು ರಾಜನಾಥ ಸ್ಪಷ್ಟಪಡಿಸಿದ್ದಾರೆ. </p><p>'ಆಪರೇಷನ್ ಸಿಂಧೂರ ನಮ್ಮ ಶಕ್ತಿಯ ಸಂಕೇತವಾಗಿದ್ದು, ನಮ್ಮ ದೇಶದ ನಾಗರಿಕರಿಗೆ ಹಾನಿಯುಂಟು ಮಾಡಿದರೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದೇವೆ' ಎಂದು ರಾಜನಾಥ ಹೇಳಿದ್ದಾರೆ. </p><p>ವ್ಯಾಪಾರ ವಿಷಯವನ್ನು ಮುಂದಿಟ್ಟುಕೊಂಡು ಭಾರತ ಹಾಗೂ ಪಾಕಿಸ್ತಾನ ನಡುವಣ ಯುದ್ಧ ಕೊನೆಗೊಳಿಸಲಾಯಿತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ಬಾರಿ ಹೇಳಿಕೆ ನೀಡಿದ್ದರು. ಆದರೆ ಮೂರನೇ ದೇಶದ ಮಧ್ಯಪ್ರವೇಶವನ್ನು ಭಾರತ ನಿರಾಕರಿಸುತ್ತಲೇ ಬಂದಿದೆ. </p>.Operation Sindoor ಚರ್ಚೆ: ಕಾಂಗ್ರೆಸ್ ಇಚ್ಛೆಗೆ ‘ಇಲ್ಲ‘ ಎಂದ ಸಂಸದ ಶಶಿ ತರೂರ್.ಆಪರೇಷನ್ ಮಹಾದೇವ: ಪಹಲ್ಗಾಮ್ ದಾಳಿಕೋರರೆಂದು ಶಂಕಿಸಲಾದ ಮೂವರು ಭಯೋತ್ಪಾದಕರ ಹತ್ಯೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>