<p><strong>ನವದೆಹಲಿ:</strong> ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ದೇಶದ ನಾಗರಿಕರಿಗೆ ಶುಭ ಕೋರಿದ್ದಾರೆ. ಈ ಸಂದರ್ಭದಲ್ಲಿ ಅವರು ದೇಶದ ನಾಗರಿಕರನ್ನು ಉದ್ದೇಶಿಸಿ ಮಂಗಳವಾರ ಪತ್ರ ಬರೆದಿದ್ದಾರೆ. </p>.<p>‘ಇದು ಶಕ್ತಿ ಮತ್ತು ಉತ್ಸಾಹವನ್ನು ಹೆಚ್ಚಿಸುವ ಹಬ್ಬ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ಬಳಿಕ ನಡೆಯುತ್ತಿರುವ ಎರಡನೇ ದೀಪಾವಳಿ’ ಎಂದು ಉಲ್ಲೇಖಿಸಿರುವ ಅವರು, ಹಲವು ಸಾಧನೆಗಳ ಬಗ್ಗೆ ಪಟ್ಟಿ ಮಾಡಿ ಹೇಳಿದ್ದಾರೆ.</p>.<h3><strong>ಪತ್ರದಲ್ಲಿರುವ ಪ್ರಮುಖಾಂಶಗಳು</strong></h3>.<p>* ಇಡೀ ಜಗತ್ತು ವಿವಿಧ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಭಾರತ ಸ್ಥಿರತೆ ಸಾಧಿಸಿದೆ. ಈ ಮೂಲಕ ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗುವ ಹಾದಿಯಲ್ಲಿ ಸಾಗುತ್ತಿದೆ</p>.<p>* ಭಾರತವು ‘ಆಪರೇಷನ್ ಸಿಂಧೂರ್’ನಲ್ಲಿ ಯಶಸ್ಸು ಕಂಡಿದೆ. ಅಂತೆಯೇ ನಕ್ಸಲರ ವಿರುದ್ಧದ ಹೋರಾಟದಲ್ಲೂ ಯಶಸ್ಸು ದೊರೆತಿದೆ</p>.<p>* ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದರಗಳನ್ನು ಕಡಿಮೆಗೊಳಿಸಿದ್ದು, ಸರ್ಕಾರದ ಐತಿಹಾಸಿಕ ಸಾಧನೆ. ‘ಜಿಎಸ್ಟಿ ಬಚತ್ ಉತ್ಸವ’ದಿಂದ ನಾಗರಿಕರು ಸಾವಿರಾರು ಕೋಟಿ ರೂಪಾಯಿಗಳನ್ನು ಉಳಿಸುತ್ತಿದ್ದಾರೆ </p>.<p>* ‘ಏಕ್ ಭಾರತ್, ಶ್ರೇಷ್ಠ ಭಾರತ್’ ಮನೋಭಾವವನ್ನು ಉತ್ತೇಜಿಸಿ, ಎಲ್ಲ ಭಾಷೆಗಳನ್ನೂ ಗೌರವಿಸಿ, ಆರೋಗ್ಯಕ್ಕೆ ಆದ್ಯತೆ ನೀಡಿ, ಯೋಗವನ್ನು ಅಳವಡಿಸಿಕೊಳ್ಳಿ, ಸ್ವದೇಶಿ ಬಳಕೆಗೆ ಒತ್ತು ನೀಡಿ. ಈ ಪ್ರಯತ್ನಗಳು ವಿಕಸಿತ ಭಾರತಕ್ಕೆ ನೆರವಾಗುತ್ತವೆ</p>.<p>* ಶ್ರೀರಾಮ ನಮಗೆ ನೀತಿಯನ್ನು ಎತ್ತಿಹಿಡಿಯಲು ಮತ್ತು ಅನ್ಯಾಯದ ವಿರುದ್ಧ ಹೋರಾಡಲು ಧೈರ್ಯ ನೀಡುತ್ತಾನೆ. ಕೆಲ ತಿಂಗಳ ಹಿಂದೆ ‘ಆಪರೇಷನ್ ಸಿಂಧೂರ್’ ವೇಳೆ ನಾವು ಇದರ ಜೀವಂತ ಉದಾಹರಣೆ ನೋಡಿದ್ದೇವೆ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ದೇಶದ ನಾಗರಿಕರಿಗೆ ಶುಭ ಕೋರಿದ್ದಾರೆ. ಈ ಸಂದರ್ಭದಲ್ಲಿ ಅವರು ದೇಶದ ನಾಗರಿಕರನ್ನು ಉದ್ದೇಶಿಸಿ ಮಂಗಳವಾರ ಪತ್ರ ಬರೆದಿದ್ದಾರೆ. </p>.<p>‘ಇದು ಶಕ್ತಿ ಮತ್ತು ಉತ್ಸಾಹವನ್ನು ಹೆಚ್ಚಿಸುವ ಹಬ್ಬ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ಬಳಿಕ ನಡೆಯುತ್ತಿರುವ ಎರಡನೇ ದೀಪಾವಳಿ’ ಎಂದು ಉಲ್ಲೇಖಿಸಿರುವ ಅವರು, ಹಲವು ಸಾಧನೆಗಳ ಬಗ್ಗೆ ಪಟ್ಟಿ ಮಾಡಿ ಹೇಳಿದ್ದಾರೆ.</p>.<h3><strong>ಪತ್ರದಲ್ಲಿರುವ ಪ್ರಮುಖಾಂಶಗಳು</strong></h3>.<p>* ಇಡೀ ಜಗತ್ತು ವಿವಿಧ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಭಾರತ ಸ್ಥಿರತೆ ಸಾಧಿಸಿದೆ. ಈ ಮೂಲಕ ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗುವ ಹಾದಿಯಲ್ಲಿ ಸಾಗುತ್ತಿದೆ</p>.<p>* ಭಾರತವು ‘ಆಪರೇಷನ್ ಸಿಂಧೂರ್’ನಲ್ಲಿ ಯಶಸ್ಸು ಕಂಡಿದೆ. ಅಂತೆಯೇ ನಕ್ಸಲರ ವಿರುದ್ಧದ ಹೋರಾಟದಲ್ಲೂ ಯಶಸ್ಸು ದೊರೆತಿದೆ</p>.<p>* ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದರಗಳನ್ನು ಕಡಿಮೆಗೊಳಿಸಿದ್ದು, ಸರ್ಕಾರದ ಐತಿಹಾಸಿಕ ಸಾಧನೆ. ‘ಜಿಎಸ್ಟಿ ಬಚತ್ ಉತ್ಸವ’ದಿಂದ ನಾಗರಿಕರು ಸಾವಿರಾರು ಕೋಟಿ ರೂಪಾಯಿಗಳನ್ನು ಉಳಿಸುತ್ತಿದ್ದಾರೆ </p>.<p>* ‘ಏಕ್ ಭಾರತ್, ಶ್ರೇಷ್ಠ ಭಾರತ್’ ಮನೋಭಾವವನ್ನು ಉತ್ತೇಜಿಸಿ, ಎಲ್ಲ ಭಾಷೆಗಳನ್ನೂ ಗೌರವಿಸಿ, ಆರೋಗ್ಯಕ್ಕೆ ಆದ್ಯತೆ ನೀಡಿ, ಯೋಗವನ್ನು ಅಳವಡಿಸಿಕೊಳ್ಳಿ, ಸ್ವದೇಶಿ ಬಳಕೆಗೆ ಒತ್ತು ನೀಡಿ. ಈ ಪ್ರಯತ್ನಗಳು ವಿಕಸಿತ ಭಾರತಕ್ಕೆ ನೆರವಾಗುತ್ತವೆ</p>.<p>* ಶ್ರೀರಾಮ ನಮಗೆ ನೀತಿಯನ್ನು ಎತ್ತಿಹಿಡಿಯಲು ಮತ್ತು ಅನ್ಯಾಯದ ವಿರುದ್ಧ ಹೋರಾಡಲು ಧೈರ್ಯ ನೀಡುತ್ತಾನೆ. ಕೆಲ ತಿಂಗಳ ಹಿಂದೆ ‘ಆಪರೇಷನ್ ಸಿಂಧೂರ್’ ವೇಳೆ ನಾವು ಇದರ ಜೀವಂತ ಉದಾಹರಣೆ ನೋಡಿದ್ದೇವೆ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>