<p><strong>ನವದೆಹಲಿ:</strong> ಅಜ್ಮೇರ್ ಶರೀಫ್ ದರ್ಗಾದಲ್ಲಿ ಆರಂಭವಾಗುತ್ತಿರುವ 813ನೇ ಉರುಸ್ಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಚಾದರ್ ಸಮರ್ಪಿಸುತ್ತಿದ್ದಾರೆ.</p><p>ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹಾಗೂ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಜಮಾಲ್ ಸಿದ್ಧಿಖಿ ಅವರ ಮೂಲಕ ಈ ವಾರ್ಷಿಕ ಉತ್ಸವದ ಸಂದರ್ಭಕ್ಕಾಗಿ ಚಾದರ್ ಅರ್ಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ. </p><p>ನರೇಂದ್ರ ಮೋದಿ ಅವರು ಪ್ರಧಾನಿಯಾದ ದಿನದಿಂದ ಈವರೆಗೂ ಅಜ್ಮೇರ್ ಶರೀಫ್ ದರ್ಗಾಕ್ಕೆ ಹತ್ತು ಬಾರಿ ಚಾದರ್ ಅರ್ಪಿಸಿದ್ದಾರೆ. ಕಳೆದ ಬಾರಿ ಉರುಸ್ ಸಂದರ್ಭದಲ್ಲಿ ಕೇಂದ್ರ ಸಚಿವೆಯಾಗಿದ್ದ ಸ್ಮೃತಿ ಇರಾನಿ ಹಾಗೂ ಜಮಾಲ್ ಸಿದ್ಧಿಖಿ ಅವರು ಪ್ರಧಾನಿ ನೀಡಿದ್ದ ಚಾದರ್ ಅರ್ಪಿಸಿದ್ದರು.</p><p>ಭಕ್ತಿ ಹಾಗೂ ಗೌರವದ ಸಂಕೇತವಾಗಿ ಖ್ವಾಜಾ ಗರೀಬ್ ನವಾಜ್ ದರ್ಗಾಕ್ಕೆ ಹಲವರು ಹರಕೆಯ ರೂಪದಲ್ಲಿ ಚಾದರ್ ಅರ್ಪಿಸುತ್ತಾರೆ. ಉರುಸ್ ಸಂದರ್ಭದಲ್ಲಿ ಚಾದರ್ ನೀಡುವುದನ್ನು ಆರಾಧನೆಯ ಪ್ರಬಲ ರೂಪ ಎಂದೇ ಹೇಳಲಾಗುತ್ತದೆ. </p><p>ಭಾರತದಲ್ಲಿರುವ ಸೂಫಿ ಸಂತರ ದರ್ಗಾಗಲ್ಲಿ ಅಜ್ಮೇರ್ ಶರೀಫ್ ದರ್ಗಾ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ಜಗತ್ತಿನ ಹಲವು ಕಡೆಯಿಂದ ಇಲ್ಲಿಗೆ ಭೇಟಿ ನೀಡುತ್ತಾರೆ. ಖ್ವಾಜಾ ಮೊಯಿನುದ್ದೀನ್ ಹಸನ್ ಚಿಶ್ತಿ ಅವರ ಪುಣ್ಯ ಸ್ಮರಣೆಯನ್ನು ಇಲ್ಲಿ ಆಚರಿಸಲಾಗುತ್ತದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಅಜ್ಮೇರ್ ಶರೀಫ್ ದರ್ಗಾದಲ್ಲಿ ಆರಂಭವಾಗುತ್ತಿರುವ 813ನೇ ಉರುಸ್ಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಚಾದರ್ ಸಮರ್ಪಿಸುತ್ತಿದ್ದಾರೆ.</p><p>ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹಾಗೂ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಜಮಾಲ್ ಸಿದ್ಧಿಖಿ ಅವರ ಮೂಲಕ ಈ ವಾರ್ಷಿಕ ಉತ್ಸವದ ಸಂದರ್ಭಕ್ಕಾಗಿ ಚಾದರ್ ಅರ್ಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ. </p><p>ನರೇಂದ್ರ ಮೋದಿ ಅವರು ಪ್ರಧಾನಿಯಾದ ದಿನದಿಂದ ಈವರೆಗೂ ಅಜ್ಮೇರ್ ಶರೀಫ್ ದರ್ಗಾಕ್ಕೆ ಹತ್ತು ಬಾರಿ ಚಾದರ್ ಅರ್ಪಿಸಿದ್ದಾರೆ. ಕಳೆದ ಬಾರಿ ಉರುಸ್ ಸಂದರ್ಭದಲ್ಲಿ ಕೇಂದ್ರ ಸಚಿವೆಯಾಗಿದ್ದ ಸ್ಮೃತಿ ಇರಾನಿ ಹಾಗೂ ಜಮಾಲ್ ಸಿದ್ಧಿಖಿ ಅವರು ಪ್ರಧಾನಿ ನೀಡಿದ್ದ ಚಾದರ್ ಅರ್ಪಿಸಿದ್ದರು.</p><p>ಭಕ್ತಿ ಹಾಗೂ ಗೌರವದ ಸಂಕೇತವಾಗಿ ಖ್ವಾಜಾ ಗರೀಬ್ ನವಾಜ್ ದರ್ಗಾಕ್ಕೆ ಹಲವರು ಹರಕೆಯ ರೂಪದಲ್ಲಿ ಚಾದರ್ ಅರ್ಪಿಸುತ್ತಾರೆ. ಉರುಸ್ ಸಂದರ್ಭದಲ್ಲಿ ಚಾದರ್ ನೀಡುವುದನ್ನು ಆರಾಧನೆಯ ಪ್ರಬಲ ರೂಪ ಎಂದೇ ಹೇಳಲಾಗುತ್ತದೆ. </p><p>ಭಾರತದಲ್ಲಿರುವ ಸೂಫಿ ಸಂತರ ದರ್ಗಾಗಲ್ಲಿ ಅಜ್ಮೇರ್ ಶರೀಫ್ ದರ್ಗಾ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ಜಗತ್ತಿನ ಹಲವು ಕಡೆಯಿಂದ ಇಲ್ಲಿಗೆ ಭೇಟಿ ನೀಡುತ್ತಾರೆ. ಖ್ವಾಜಾ ಮೊಯಿನುದ್ದೀನ್ ಹಸನ್ ಚಿಶ್ತಿ ಅವರ ಪುಣ್ಯ ಸ್ಮರಣೆಯನ್ನು ಇಲ್ಲಿ ಆಚರಿಸಲಾಗುತ್ತದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>