ಕ್ರಿಕೆಟ್ನಲ್ಲಿ ಅಂಪೈರ್ ನಿರ್ಧಾರವನ್ನು ಪದೇಪದೇ ಪ್ರಶ್ನಿಸುವ ಆಟಗಾರನ ಉದಾಹರಣೆ ನೀಡಿದ ಅವರು, ಒಬ್ಬ ಆಟಗಾರ ಮತ್ತೆ ಮತ್ತೆ ಅಂಪೈರ್ ತೀರ್ಪನ್ನು ಪ್ರಶ್ನಿಸುತ್ತಾನೆ ಎಂದರೆ ಆತನ ಆಟದಲ್ಲಿ ಏನೋ ಲೋಪವಿದೆ ಎಂಬುದು ನಮಗೆ ಗೊತ್ತಾಗುತ್ತದೆ. ರಾಜಕೀಯದಲ್ಲಿ ಯಾರಾದರೂ ವಿದ್ಯುನ್ಮಾನ ಮತಯಂತ್ರ (ಇವಿಎಂ) ಮತ್ತು ಚುನಾವಣಾ ಆಯೋಗವನ್ನು ನಿರಂತರವಾಗಿ ಪ್ರಶ್ನಿಸುತ್ತಾರೆ ಎಂದರೆ ಅವರ ಆಟ ಮುಕ್ತಾಯವಾಗಿದೆ ಎಂದು ನಾವು ಅರ್ಥೈಸಿಕೊಳ್ಳಬೇಕು ಎಂದು ಹೇಳಿದ್ದಾರೆ.