<p><strong>ನವದೆಹಲಿ</strong>: ಗುಜರಾತ್ನಲ್ಲಿ 2019-20ರಿಂದ 2023-24ರ ಅವಧಿಯಲ್ಲಿ ಕೆಲವು ಅನಾಮದೇಯ ಪಕ್ಷಗಳು ಬರೋಬ್ಬರಿ ₹ 4,300 ಕೋಟಿ ದೇಣಿಗೆ ಪಡೆದಿವೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಚುನಾವಣಾ ಆಯೋಗ ಈ ಕುರಿತಾಗಿಯೂ ತನಿಖೆ ನಡೆಸುವುದೇ ಅಥವಾ ಪ್ರಮಾಣಪತ್ರ ಕೇಳುತ್ತದೆಯೇ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಪ್ರಶ್ನಿಸಿದ್ದಾರೆ.</p><p>ಮಾಧ್ಯಮಗಳಲ್ಲಿ ಬಂದಿರುವ ವರದಿಗೆ ಸಂಬಂಧಿಸಿದಂತೆ ಆಯೋಗ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.</p><p>ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿರುವ ರಾಹುಲ್, ಗುಜರಾತ್ನಲ್ಲಿ 2019ರಿಂದ 2024ರ ವರೆಗೆ ಅನಾಮದೇಯವಾಗಿ ನೋಂದಣಿಯಾದ 10 ರಾಜಕೀಯ ಪಕ್ಷಗಳು ₹ 4,300 ಕೋಟಿ ದೇಣಿಗೆ ಸ್ವೀಕರಿಸಿವೆ ಎನ್ನಲಾದ ವರದಿಯನ್ನು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್/ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. </p><p>ಈ ಅವಧಿಯಲ್ಲಿ ಮೂರು ಚುನಾವಣೆಗಳು (2019, 2024ರ ಸಾರ್ವತ್ರಿಕ ಚುನಾವಣೆ ಮತ್ತು 2022 ವಿಧಾನಸಭಾ ಚುನಾವಣೆ) ನಡೆದಿವೆ. ಆದರೆ, ಮೇಲೆ ಹೇಳಲಾದ ಪಕ್ಷಗಳು ಕೇವಲ 43 ಅಭ್ಯರ್ಥಿಗಳನ್ನಷ್ಟೇ ಕಣಕ್ಕಿಳಿಸಿದ್ದವು. ಆ ಅಭ್ಯರ್ಥಿಗಳು ಪಡೆದಿರುವುದು 54,069 ಮತಗಳನ್ನು ಮಾತ್ರ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.</p><p>ಈ ಕುರಿತು ಹಿಂದಿಯಲ್ಲಿ ಪೋಸ್ಟ್ ಮಾಡಿರುವ ರಾಹುಲ್, 'ಗುಜರಾತ್ನಲ್ಲಿ ಯಾರೂ ಕೇಳಿರದಂತಹ ಕೆಲವು ಅನಾಮದೇಯ ಪಕ್ಷಗಳಿವೆ. ಯಾರಿಗೂ ಗೊತ್ತಿಲ್ಲದಿದ್ದರೂ ಅವುಗಳಿಗೆ ₹ 4,300 ಕೋಟಿ ದೇಣಿಗೆ ನೀಡಲಾಗಿದೆ! ಈ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿವೆ. ಆದರೆ, ಕೆಲವೇ ಕ್ಷೇತ್ರಗಳಿಗೆ ಹಣ ಖರ್ಚು ಮಾಡಿವೆ' ಎಂದು ಹೇಳಿದ್ದಾರೆ.</p><p>'ಸಾವಿರಾರು ಕೋಟಿ ಹಣ ಎಲ್ಲಿಂದ ಬಂತು? ಅದನ್ನೆಲ್ಲ ಯಾರು ನಿರ್ವಹಿಸುತ್ತಿದ್ದಾರೆ? ಆ ಹಣ ಎಲ್ಲಿಗೆ ಹೋಯಿತು? ಚುನಾವಣಾ ಆಯೋಗ ಈ ಕುರಿತು ತನಿಖೆ ನಡೆಸುತ್ತದೆಯೇ ಅಥವಾ ಇಲ್ಲಿಯೂ ಪ್ರಮಾಣಪತ್ರ ಕೇಳುತ್ತದೆಯೇ? ಇಲ್ಲವೇ, ಈ ಅಂಕಿ-ಅಂಶಗಳನ್ನೇ ಮರೆಮಾಚುವಂತೆ ಕಾನೂನಿನಲ್ಲಿ ಬದಲಾವಣೆ ತರುತ್ತದೆಯೇ?' ಎಂದು ಕೇಳುವ ಮೂಲಕ ತಿವಿದಿದ್ದಾರೆ.</p>.ಮತಗಳ್ಳತನ ಆರೋಪಕ್ಕೆ ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಿ: ರಾಹುಲ್ಗೆ ಚುನಾವಣಾ ಆಯೋಗ.ಮತದಾರರ ಪಟ್ಟಿ ದೋಷರಹಿತವಾಗಿದೆ ಎಂದು EC ಪ್ರಮಾಣಪತ್ರ ಸಲ್ಲಿಸಲಿ: ಕಾಂಗ್ರೆಸ್.<p>ದೇಶದಲ್ಲಿ ನಡೆದ ಹಲವು ಚುನಾವಣೆಗಳಲ್ಲಿ ಅಕ್ರಮಗಳಾಗಿವೆ. ಬಿಜೆಪಿಯು ಚುನಾವಣೆಗಳನ್ನು ಗೆಲ್ಲಲು ಚುನಾವಣಾ ಆಯೋಗ ನೆರವಾಗಿದೆ ಎಂದು ರಾಹುಲ್ ಗಾಂಧಿ ಇತ್ತೀಚೆಗೆ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಚುನಾವಣಾ ಆಯೋಗ, ಪ್ರಮಾಣಪತ್ರ ಸಲ್ಲಿಸುವಂತೆ ರಾಹುಲ್ಗೆ ತಾಕೀತು ಮಾಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಗುಜರಾತ್ನಲ್ಲಿ 2019-20ರಿಂದ 2023-24ರ ಅವಧಿಯಲ್ಲಿ ಕೆಲವು ಅನಾಮದೇಯ ಪಕ್ಷಗಳು ಬರೋಬ್ಬರಿ ₹ 4,300 ಕೋಟಿ ದೇಣಿಗೆ ಪಡೆದಿವೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಚುನಾವಣಾ ಆಯೋಗ ಈ ಕುರಿತಾಗಿಯೂ ತನಿಖೆ ನಡೆಸುವುದೇ ಅಥವಾ ಪ್ರಮಾಣಪತ್ರ ಕೇಳುತ್ತದೆಯೇ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಪ್ರಶ್ನಿಸಿದ್ದಾರೆ.</p><p>ಮಾಧ್ಯಮಗಳಲ್ಲಿ ಬಂದಿರುವ ವರದಿಗೆ ಸಂಬಂಧಿಸಿದಂತೆ ಆಯೋಗ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.</p><p>ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿರುವ ರಾಹುಲ್, ಗುಜರಾತ್ನಲ್ಲಿ 2019ರಿಂದ 2024ರ ವರೆಗೆ ಅನಾಮದೇಯವಾಗಿ ನೋಂದಣಿಯಾದ 10 ರಾಜಕೀಯ ಪಕ್ಷಗಳು ₹ 4,300 ಕೋಟಿ ದೇಣಿಗೆ ಸ್ವೀಕರಿಸಿವೆ ಎನ್ನಲಾದ ವರದಿಯನ್ನು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್/ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. </p><p>ಈ ಅವಧಿಯಲ್ಲಿ ಮೂರು ಚುನಾವಣೆಗಳು (2019, 2024ರ ಸಾರ್ವತ್ರಿಕ ಚುನಾವಣೆ ಮತ್ತು 2022 ವಿಧಾನಸಭಾ ಚುನಾವಣೆ) ನಡೆದಿವೆ. ಆದರೆ, ಮೇಲೆ ಹೇಳಲಾದ ಪಕ್ಷಗಳು ಕೇವಲ 43 ಅಭ್ಯರ್ಥಿಗಳನ್ನಷ್ಟೇ ಕಣಕ್ಕಿಳಿಸಿದ್ದವು. ಆ ಅಭ್ಯರ್ಥಿಗಳು ಪಡೆದಿರುವುದು 54,069 ಮತಗಳನ್ನು ಮಾತ್ರ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.</p><p>ಈ ಕುರಿತು ಹಿಂದಿಯಲ್ಲಿ ಪೋಸ್ಟ್ ಮಾಡಿರುವ ರಾಹುಲ್, 'ಗುಜರಾತ್ನಲ್ಲಿ ಯಾರೂ ಕೇಳಿರದಂತಹ ಕೆಲವು ಅನಾಮದೇಯ ಪಕ್ಷಗಳಿವೆ. ಯಾರಿಗೂ ಗೊತ್ತಿಲ್ಲದಿದ್ದರೂ ಅವುಗಳಿಗೆ ₹ 4,300 ಕೋಟಿ ದೇಣಿಗೆ ನೀಡಲಾಗಿದೆ! ಈ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿವೆ. ಆದರೆ, ಕೆಲವೇ ಕ್ಷೇತ್ರಗಳಿಗೆ ಹಣ ಖರ್ಚು ಮಾಡಿವೆ' ಎಂದು ಹೇಳಿದ್ದಾರೆ.</p><p>'ಸಾವಿರಾರು ಕೋಟಿ ಹಣ ಎಲ್ಲಿಂದ ಬಂತು? ಅದನ್ನೆಲ್ಲ ಯಾರು ನಿರ್ವಹಿಸುತ್ತಿದ್ದಾರೆ? ಆ ಹಣ ಎಲ್ಲಿಗೆ ಹೋಯಿತು? ಚುನಾವಣಾ ಆಯೋಗ ಈ ಕುರಿತು ತನಿಖೆ ನಡೆಸುತ್ತದೆಯೇ ಅಥವಾ ಇಲ್ಲಿಯೂ ಪ್ರಮಾಣಪತ್ರ ಕೇಳುತ್ತದೆಯೇ? ಇಲ್ಲವೇ, ಈ ಅಂಕಿ-ಅಂಶಗಳನ್ನೇ ಮರೆಮಾಚುವಂತೆ ಕಾನೂನಿನಲ್ಲಿ ಬದಲಾವಣೆ ತರುತ್ತದೆಯೇ?' ಎಂದು ಕೇಳುವ ಮೂಲಕ ತಿವಿದಿದ್ದಾರೆ.</p>.ಮತಗಳ್ಳತನ ಆರೋಪಕ್ಕೆ ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಿ: ರಾಹುಲ್ಗೆ ಚುನಾವಣಾ ಆಯೋಗ.ಮತದಾರರ ಪಟ್ಟಿ ದೋಷರಹಿತವಾಗಿದೆ ಎಂದು EC ಪ್ರಮಾಣಪತ್ರ ಸಲ್ಲಿಸಲಿ: ಕಾಂಗ್ರೆಸ್.<p>ದೇಶದಲ್ಲಿ ನಡೆದ ಹಲವು ಚುನಾವಣೆಗಳಲ್ಲಿ ಅಕ್ರಮಗಳಾಗಿವೆ. ಬಿಜೆಪಿಯು ಚುನಾವಣೆಗಳನ್ನು ಗೆಲ್ಲಲು ಚುನಾವಣಾ ಆಯೋಗ ನೆರವಾಗಿದೆ ಎಂದು ರಾಹುಲ್ ಗಾಂಧಿ ಇತ್ತೀಚೆಗೆ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಚುನಾವಣಾ ಆಯೋಗ, ಪ್ರಮಾಣಪತ್ರ ಸಲ್ಲಿಸುವಂತೆ ರಾಹುಲ್ಗೆ ತಾಕೀತು ಮಾಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>