<p><strong>ಚೆನ್ನೈ:</strong> ಜೂನ್ 19ರಂದು ನಡೆಯಲಿರುವ ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಗೆ ತಮಿಳುನಾಡಿನ ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ ಎರಡು ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.</p>.ರಾಜ್ಯಸಭೆ: ಒಂದು ಸ್ಥಾನ ಎಂಎನ್ಎಂಗೆ ಬಿಟ್ಟುಕೊಟ್ಟ ಡಿಎಂಕೆ.<p>ಪಕ್ಷದ ವಕೀಲರ ವಿಭಾಗದ ಕಾರ್ಯದರ್ಶಿ, ಮಾಜಿ ಶಾಸಕರೂ ಆಗಿರುವ ಐಎಸ್ ಇನ್ಬಾದುರೈ ಹಾಗೂ ಪಕ್ಷದ ಚೆಂಗಲ್ಪೇಟ್ ಪೂರ್ವ ಜಿಲ್ಲೆಯ ಪ್ರೆಸಿಡಿಯಂ ಚೇರ್ಮನ್ ಕೂಡ ಆಗಿರುವ ಮಾಜಿ ಶಾಸಕ ಎಂ. ಧನ್ಪಾಲ್ ಅವರ ಹೆಸರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳಸಿಸ್ವಾಮಿ ಘೋಷಿಸಿದ್ದಾರೆ.</p><p>ಪಿಎಂಕೆಯ ಅನ್ಬುಮಣಿ ರಾಮದಾಸ್ ಹಾಗೂ ಎಂಡಿಎಂಕೆಯ ವೈಕೊ ಸೇರಿ ತಮಿಳುನಾಡಿನ 6 ಮಂದಿ ರಾಜ್ಯಸಭಾ ಸದಸ್ಯರು 2025ರ ಜುಲೈ 24ರಂದು ನಿವೃತ್ತಿಯಾಗಲಿದ್ದಾರೆ.</p>.ರಾಜ್ಯಸಭೆ ಪ್ರವೇಶಿಸಲು ಕಮಲ್ ಹಾಸನ್ ಸಜ್ಜು.<p>6 ಸ್ಥಾನಗಳ ಪೈಕಿ, ವಿಧಾನಸಭೆಯಲ್ಲಿರುವ ಪಕ್ಷಗಳ ಬಲಾಬಲದ ಅನ್ವಯ ಆಡಳಿತರೂಢ ಡಿಎಂಕೆ 4 ಸ್ಥಾನಗಳನ್ನು ಸುಲಭವಾಗಿ ಗೆಲ್ಲುತ್ತದೆ. ಬಿಜೆಪಿ ಹಾಗೂ ಇತರ ಮಿತ್ರ ಪಕ್ಷಗಳ ಬೆಂಬಲದಿಂದ ಎಐಎಡಿಎಂಕೆ 2 ಸ್ಥಾನಗಳಲ್ಲಿ ಗೆಲ್ಲುತ್ತದೆ.</p><p>ಡಿಎಂಕೆ ಈಗಾಗಲೇ 3 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಒಂದು ಸ್ಥಾನವನ್ನು ಮಿತ್ರ ಪಕ್ಷ ಮಕ್ಕಳ್ ನೀಧಿ ಮೈಯಂಗೆ ನೀಡಿದೆ. ಆ ಸ್ಥಾನದಿಂದ ಕಮಲ್ ಹಾಸನ್ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ.</p>.ರಾಜ್ಯಸಭೆ | 17 ಗಂಟೆಗಳ ಕಲಾಪ: ಮುಂಜಾನೆ 4 ಗಂಟೆವರೆಗೂ ಚರ್ಚೆ.<p>ಹಿರಿಯ ವಕೀಲ ಪಿ. ವಿಲ್ಸನ್, ಸೇಲಂನ ಪಕ್ಷದ ನಾಯಕ ಎಸ್.ಆರ್ ಶಿವಲಿಂಗಂ ಹಾಗೂ ಕವಯಿತ್ರಿ ರುಖಯ್ಯ ಮಲಿಕ್ ಅಲಿಯಾಸ್ ಕವಿಗ್ನರ್ ಸಲ್ಮಾ ಅವರನ್ನೇ ಮತ್ತೆ ಅಭ್ಯರ್ಥಿಗಳನ್ನಾಗಿ ಘೋಷಿಸಿದೆ.</p><p>ಒಂದು ವೇಳೆ ಬೇರೆ ಯಾರೂ ನಾಮಪತ್ರ ಸಲ್ಲಿಸಲಿದ್ದರೆ, ಈ ಆರೂ ಮಂದಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.</p> .ರಾಜ್ಯಸಭೆ ಮೇಲೆ ಕಣ್ಣಿಟ್ಟು ಮೋಹನ್ದಾಸ್ ಪೈ ಟೀಕೆ: ಪ್ರಿಯಾಂಕ್ ಖರ್ಗೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ಜೂನ್ 19ರಂದು ನಡೆಯಲಿರುವ ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಗೆ ತಮಿಳುನಾಡಿನ ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ ಎರಡು ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.</p>.ರಾಜ್ಯಸಭೆ: ಒಂದು ಸ್ಥಾನ ಎಂಎನ್ಎಂಗೆ ಬಿಟ್ಟುಕೊಟ್ಟ ಡಿಎಂಕೆ.<p>ಪಕ್ಷದ ವಕೀಲರ ವಿಭಾಗದ ಕಾರ್ಯದರ್ಶಿ, ಮಾಜಿ ಶಾಸಕರೂ ಆಗಿರುವ ಐಎಸ್ ಇನ್ಬಾದುರೈ ಹಾಗೂ ಪಕ್ಷದ ಚೆಂಗಲ್ಪೇಟ್ ಪೂರ್ವ ಜಿಲ್ಲೆಯ ಪ್ರೆಸಿಡಿಯಂ ಚೇರ್ಮನ್ ಕೂಡ ಆಗಿರುವ ಮಾಜಿ ಶಾಸಕ ಎಂ. ಧನ್ಪಾಲ್ ಅವರ ಹೆಸರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳಸಿಸ್ವಾಮಿ ಘೋಷಿಸಿದ್ದಾರೆ.</p><p>ಪಿಎಂಕೆಯ ಅನ್ಬುಮಣಿ ರಾಮದಾಸ್ ಹಾಗೂ ಎಂಡಿಎಂಕೆಯ ವೈಕೊ ಸೇರಿ ತಮಿಳುನಾಡಿನ 6 ಮಂದಿ ರಾಜ್ಯಸಭಾ ಸದಸ್ಯರು 2025ರ ಜುಲೈ 24ರಂದು ನಿವೃತ್ತಿಯಾಗಲಿದ್ದಾರೆ.</p>.ರಾಜ್ಯಸಭೆ ಪ್ರವೇಶಿಸಲು ಕಮಲ್ ಹಾಸನ್ ಸಜ್ಜು.<p>6 ಸ್ಥಾನಗಳ ಪೈಕಿ, ವಿಧಾನಸಭೆಯಲ್ಲಿರುವ ಪಕ್ಷಗಳ ಬಲಾಬಲದ ಅನ್ವಯ ಆಡಳಿತರೂಢ ಡಿಎಂಕೆ 4 ಸ್ಥಾನಗಳನ್ನು ಸುಲಭವಾಗಿ ಗೆಲ್ಲುತ್ತದೆ. ಬಿಜೆಪಿ ಹಾಗೂ ಇತರ ಮಿತ್ರ ಪಕ್ಷಗಳ ಬೆಂಬಲದಿಂದ ಎಐಎಡಿಎಂಕೆ 2 ಸ್ಥಾನಗಳಲ್ಲಿ ಗೆಲ್ಲುತ್ತದೆ.</p><p>ಡಿಎಂಕೆ ಈಗಾಗಲೇ 3 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಒಂದು ಸ್ಥಾನವನ್ನು ಮಿತ್ರ ಪಕ್ಷ ಮಕ್ಕಳ್ ನೀಧಿ ಮೈಯಂಗೆ ನೀಡಿದೆ. ಆ ಸ್ಥಾನದಿಂದ ಕಮಲ್ ಹಾಸನ್ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ.</p>.ರಾಜ್ಯಸಭೆ | 17 ಗಂಟೆಗಳ ಕಲಾಪ: ಮುಂಜಾನೆ 4 ಗಂಟೆವರೆಗೂ ಚರ್ಚೆ.<p>ಹಿರಿಯ ವಕೀಲ ಪಿ. ವಿಲ್ಸನ್, ಸೇಲಂನ ಪಕ್ಷದ ನಾಯಕ ಎಸ್.ಆರ್ ಶಿವಲಿಂಗಂ ಹಾಗೂ ಕವಯಿತ್ರಿ ರುಖಯ್ಯ ಮಲಿಕ್ ಅಲಿಯಾಸ್ ಕವಿಗ್ನರ್ ಸಲ್ಮಾ ಅವರನ್ನೇ ಮತ್ತೆ ಅಭ್ಯರ್ಥಿಗಳನ್ನಾಗಿ ಘೋಷಿಸಿದೆ.</p><p>ಒಂದು ವೇಳೆ ಬೇರೆ ಯಾರೂ ನಾಮಪತ್ರ ಸಲ್ಲಿಸಲಿದ್ದರೆ, ಈ ಆರೂ ಮಂದಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.</p> .ರಾಜ್ಯಸಭೆ ಮೇಲೆ ಕಣ್ಣಿಟ್ಟು ಮೋಹನ್ದಾಸ್ ಪೈ ಟೀಕೆ: ಪ್ರಿಯಾಂಕ್ ಖರ್ಗೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>