ಏನಿದು ಮುಕ್ತ ಸಂಚಾರ ವ್ಯವಸ್ಥೆ?
ಮುಕ್ತ ಸಂಚಾರ ವ್ಯವಸ್ಥೆಯು ಭಾರತ ಮತ್ತು ಮ್ಯಾನ್ಮಾರ್ ನಡುವಿನ ಅಂತರಾಷ್ಟ್ರೀಯ ಗಡಿಯಿಂದ ಗರಿಷ್ಠ 16 ಕಿ.ಮೀವರೆಗೆ ಉಭಯ ದೇಶಗಳ ಜನರು ಯಾವುದೇ ಅಡ್ಡಿ ಇಲ್ಲದೆ ಸಂಚರಿಸುವ ಅವಕಾಶವನ್ನು ಕಲ್ಪಿಸಿತ್ತು. ಒಂದು ವೇಳೆ ಗಡಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಿದರೆ ಉಭಯ ದೇಶಗಳಲ್ಲಿರುವ ಸಾಂಸ್ಕೃತಿಕವಾಗಿ ಒಂದೇ ರೀತಿಯ ಸಮುದಾಯಗಳ ಅನ್ಯೋನ್ಯಕ್ಕೆ ಧಕ್ಕೆಯುಂಟಾಗಲಿದೆ ಎಂಬುದು ಸ್ಥಳೀಯ ಬುಡಕಟ್ಟು ಜನರ ವಾದವಾಗಿದೆ. ಅಲ್ಲದೆ ಮಿಜೋರಾಂ ವಿಧಾನಸಭೆ ಕೂಡ ಇದೇ ವರ್ಷ ಫೆ. 28ರಂದು ಕೇಂದ್ರ ಸರ್ಕಾರದ ತಡೆಗೋಡೆ ನಿರ್ಮಾಣ ನಿರ್ಧಾರದ ವಿರುದ್ಧ ಗೊತ್ತುವಳಿ ನಿರ್ಣಯ ಮಂಡಿಸಿತ್ತು.