ಈ ಸಂದರ್ಭದಲ್ಲಿ ಮಾತನಾಡಿದ ಸಿಸ್ಟರ್ ಜೆಸ್ಮೆ, ‘ಅತ್ಯಾಚಾರ ಪ್ರಕರಣದಿಂದ ಚರ್ಚ್ಗಳ ಶುದ್ಧೀಕರಣಕ್ಕೆ ಕರೆ ನೀಡಿದಂತಾಗಿದೆ’ ಎಂದು ಹೇಳಿದ್ದಾರೆ. ‘ಚರ್ಚ್ಗಳಿಂದ ಕ್ರಿಸ್ತ ದೂರವಾಗುತ್ತಿದ್ದು, ಹಣದ ಪ್ರಭಾವವೇ ಹೆಚ್ಚಾಗುತ್ತಿದೆ ಎಂದು ಹೇಳಿದರು.
ವಿಷಾದ ವ್ಯಕ್ತಪಡಿಸಿದ ಶಾಸಕ
ಕ್ರೈಸ್ತ ಸನ್ಯಾಸಿನಿಯನ್ನು ನಿಂದಿಸಿ ಹೇಳಿಕೆ ನೀಡಿದ್ದಕ್ಕಾಗಿ ಶಾಸಕ ಪಿ.ಸಿ. ಜಾರ್ಜ್ ವಿಷಾದ ವ್ಯಕ್ತಪಡಿಸಿದ್ದಾರೆ. ’ಮನಸ್ಸಿಗೆ ನೋವು ಉಂಟು ಮಾಡುವ ಶಬ್ದಗಳನ್ನು ಬಳಸಬಾರದಿತ್ತು. ಇದಕ್ಕಾಗಿ ನನಗೂ ನೋವಾಗಿದೆ. ಸಾಕ್ಷ್ಯಗಳಿದ್ದರೆ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರನ್ನು ತಕ್ಷಣವೇ ಬಂಧಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ. 'ಕ್ರೈಸ್ತ ಸನ್ಯಾಸಿನಿ 12 ಬಾರಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದಾಗ ಮೌನವಹಿಸಿ, 13ನೇ ಬಾರಿ ಅದು ಅತ್ಯಾಚಾರ ಎಂದು ಆರೋಪಿಸಿದ್ದಾರೆ. ಮೊದಲ ಬಾರಿಯೇ ಏಕೆ ದೂರು ನೀಡಲಿಲ್ಲ' ಎಂದು ಶಾಸಕ ಪಿ.ಸಿ. ಜಾರ್ಜ್ ಅವಹೇಳನಕಾರಿಯಾಗಿ ನಿಂದಿಸಿದ್ದರು.