<p><strong>ಹರಿದ್ವಾರ (ಪಿಟಿಐ):</strong> ಉತ್ತರಾಖಂಡದ ಹರಿದ್ವಾರ ಜಿಲ್ಲಾ ಆಸ್ಪತ್ರೆ ಶವಗಾರದಲ್ಲಿ ಇರಿಸಿದ್ದ ಶವವನ್ನು ಇಲಿಗಳು ಕಚ್ಚಿ ತಿಂದ ಘಟನೆ ನಡೆದಿದೆ.</p>.<p>ಹೃದಯಸ್ತಂಭನದಿಂದ ಶುಕ್ರವಾರ ಮೃತಪಟ್ಟಿದ್ದ ಹರಿದ್ವಾರದ ನಿವಾಸಿ ಲಖನ್ ಕುಮಾರ್ (36) ಅವರ ಮೃತದೇಹವನ್ನು ಆಸ್ಪತ್ರೆಯ ಶವಾಗಾರದ ಡೀಪ್ ಫ್ರೀಜರ್ನಲ್ಲಿ ಇರಿಸಲಾಗಿತ್ತು. ಆದರೂ ಶವದ ಕಣ್ಣು, ಮೂಗು, ಕಿವಿ ಮತ್ತು ತಲೆಯ ಭಾಗವನ್ನು ಕಚ್ಚಿ ಇಲಿಗಳು ಗಾಯಗೊಳಿಸಿವೆ ಎಂದು ಕುಟುಂಬಸ್ಥರು ದೂರಿದ್ದಾರೆ.</p>.<p class="title">ಡೀಪ್ ಫ್ರೀಜರ್ನಲ್ಲಿ ದೊಡ್ಡ ರಂಧ್ರವಿದ್ದು, ಇಲಿಗಳು ಅದರ ಮೂಲಕ ಪ್ರವೇಶಿಸಿ, ಶವದ ಅಂಗಾಂಗ ಕಚ್ಚಿ ಗಾಯಗೊಳಿಸಿವೆ ಎಂದು ಆರೋಪಿಸಿರುವ ಕುಟುಂಬಸ್ಥರು, ಶವಾಗಾರದ ಬಹುತೇಕ ಫ್ರೀಜರ್ಗಳು ಹಾಳಾಗಿವೆ ಎಂದಿದ್ದಾರೆ.</p>.<p class="title">‘ಶವಾಗಾರದಲ್ಲಿರುವ ಡೀಪ್ ಫ್ರೀಜರ್ನ ಎರಡು ಅಥವಾ ಮೂರು ಗೇಟ್ಗಳು ಹಾಳಾಗಿವೆ. ಅವುಗಳ ದುರಸ್ತಿಯ ಹೊಣೆ ಹೊತ್ತಿರುವ ಸಂಸ್ಥೆಯ ನಿಲರ್ಕ್ಷ್ಯದಿಂದ ಈ ಘಟನೆ ಸಂಭವಿಸಿದೆ. ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಆಸ್ಪತ್ರೆ ಅಧಿಕಾರಿ ರಣವೀರ್ ಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿದ್ವಾರ (ಪಿಟಿಐ):</strong> ಉತ್ತರಾಖಂಡದ ಹರಿದ್ವಾರ ಜಿಲ್ಲಾ ಆಸ್ಪತ್ರೆ ಶವಗಾರದಲ್ಲಿ ಇರಿಸಿದ್ದ ಶವವನ್ನು ಇಲಿಗಳು ಕಚ್ಚಿ ತಿಂದ ಘಟನೆ ನಡೆದಿದೆ.</p>.<p>ಹೃದಯಸ್ತಂಭನದಿಂದ ಶುಕ್ರವಾರ ಮೃತಪಟ್ಟಿದ್ದ ಹರಿದ್ವಾರದ ನಿವಾಸಿ ಲಖನ್ ಕುಮಾರ್ (36) ಅವರ ಮೃತದೇಹವನ್ನು ಆಸ್ಪತ್ರೆಯ ಶವಾಗಾರದ ಡೀಪ್ ಫ್ರೀಜರ್ನಲ್ಲಿ ಇರಿಸಲಾಗಿತ್ತು. ಆದರೂ ಶವದ ಕಣ್ಣು, ಮೂಗು, ಕಿವಿ ಮತ್ತು ತಲೆಯ ಭಾಗವನ್ನು ಕಚ್ಚಿ ಇಲಿಗಳು ಗಾಯಗೊಳಿಸಿವೆ ಎಂದು ಕುಟುಂಬಸ್ಥರು ದೂರಿದ್ದಾರೆ.</p>.<p class="title">ಡೀಪ್ ಫ್ರೀಜರ್ನಲ್ಲಿ ದೊಡ್ಡ ರಂಧ್ರವಿದ್ದು, ಇಲಿಗಳು ಅದರ ಮೂಲಕ ಪ್ರವೇಶಿಸಿ, ಶವದ ಅಂಗಾಂಗ ಕಚ್ಚಿ ಗಾಯಗೊಳಿಸಿವೆ ಎಂದು ಆರೋಪಿಸಿರುವ ಕುಟುಂಬಸ್ಥರು, ಶವಾಗಾರದ ಬಹುತೇಕ ಫ್ರೀಜರ್ಗಳು ಹಾಳಾಗಿವೆ ಎಂದಿದ್ದಾರೆ.</p>.<p class="title">‘ಶವಾಗಾರದಲ್ಲಿರುವ ಡೀಪ್ ಫ್ರೀಜರ್ನ ಎರಡು ಅಥವಾ ಮೂರು ಗೇಟ್ಗಳು ಹಾಳಾಗಿವೆ. ಅವುಗಳ ದುರಸ್ತಿಯ ಹೊಣೆ ಹೊತ್ತಿರುವ ಸಂಸ್ಥೆಯ ನಿಲರ್ಕ್ಷ್ಯದಿಂದ ಈ ಘಟನೆ ಸಂಭವಿಸಿದೆ. ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಆಸ್ಪತ್ರೆ ಅಧಿಕಾರಿ ರಣವೀರ್ ಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>