<p><strong>ನವದೆಹಲಿ:</strong> ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಖಾಸಗಿ ಕ್ಷೇತ್ರದ ಹೂಡಿಕೆ ಉತ್ತೇಜಿಸುವ ನಿಟ್ಟಿನಲ್ಲಿ ₹1 ಲಕ್ಷ ಕೋಟಿ ಮೊತ್ತದ RDI ನಿಧಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದರು.</p><p>ವಿಕಸಿತ ಭಾರತ 2047 ದೂರದೃಷ್ಟಿ ಕಾರ್ಯಕ್ರಮದ ಭಾಗವಾಗಿ ನೀತಿ ನಿರೂಪಕರು, ಅನ್ವೇಷಕರು ಮತ್ತು ಜಾಗತಿಕ ಮಟ್ಟದ ದಾರ್ಶನಿಕರನ್ನು ಒಂದೇ ವೇದಿಕೆಗೆ ಕರೆತಂದ ವಿಜ್ಞಾನ ತಂತ್ರಜ್ಞಾನ ಮತ್ತು ಅನ್ವೇಷಣೆ ಸಮಾವೇಶದಲ್ಲಿ (ESTIC) ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ (RDI) ನಿಧಿಯನ್ನು ಪ್ರಧಾನಿ ಘೋಷಿಸಿದರು.</p><p>ಭಾರತದ ವೈಜ್ಞಾನಿಕ ಸಾಧನೆ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನದ ದೂರದೃಷ್ಟಿಯ ದಾಖಲೆಯನ್ನೊಳಗೊಂಡ ಕಾಫಿ ಟೇಬಲ್ ಬುಕ್ ಅನ್ನೂ ಇದೇ ಸಂದರ್ಭದಲ್ಲಿ ಅವರು ಬಿಡುಗಡೆ ಮಾಡಿದರು.</p><p>ಆರ್ಡಿಐ ನಿಧಿಯನ್ನು ಎರಡು ಹಂತಗಳಲ್ಲಿ ನಿರ್ವಹಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೋಡಲ್ ಸಚಿವಾಲಯವಾಗಿ ಕಾರ್ಯ ನಿರ್ವಹಿಸಲಿದೆ. ಮೊದಲ ಹಂತದಲ್ಲಿ, ವಿಶೇಷ ಉದ್ದೇಶದ ನಿಧಿಯನ್ನು ಸ್ಥಾಪಿಸಲಾಗುತ್ತದೆ. ಇದರಡಿ ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ (ANRF) ಸ್ಥಾಪಿಸಲಾಗಿದೆ. ಇದು ₹1 ಲಕ್ಷ ಕೋಟಿ ಮೊತ್ತದ ನಿಧಿಯ ರಕ್ಷಕನಾಗಿ ಕೆಲಸ ಮಾಡಲಿದೆ.</p><p>ಈ ನಿಧಿಯನ್ನು ಕೈಗಾರಿಕೆಯಲ್ಲಿ ನೇರವಾಗಿ ಹೂಡಿಕೆ ಮಾಡುವುದಿಲ್ಲ. ಬದಲಿಗೆ, ಮೂಲ ಧನವನ್ನು ಎರಡನೇ ಹಂತದ ನಿಧಿ ವ್ಯವಸ್ಥಾಪಕರಿಗೆ ವರ್ಗಾಯಿಸಲಿದೆ. ಇವರು ಪರ್ಯಾಯ ಹೂಡಿಕೆ ನಿಧಿಗಳು (AIF), ಅಭಿವೃದ್ಧಿ ಹಣಕಾಸು ಸಂಸ್ಥೆಗಳು (DFI) ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFCs) ಇತ್ಯಾದಿಗಳಾಗಿರಬಹುದು.</p><p>ಸರ್ಕಾರದಿಂದಲೇ ನಿರ್ವಹಣೆಗೆ ಒಳಪಡುವ ಆರ್ಥಿಕ, ವ್ಯಾವಹಕಾರಿಕ ಮತ್ತು ತಾಂತ್ರಿಕ ಕ್ಷೇತ್ರದ ಪರಿಣಿತರನ್ನು ಒಳಗೊಂಡ ಹೂಡಿಕೆ ಸಮಿತಿಗಳ ಮೂಲಕ ಎರಡನೇ ಹಂತದ ನಿಧಿ ವ್ಯವಸ್ಥಾಪಕರಿಗೆ ನಿಧಿ ವರ್ಗಾಯಿಸಲಾಗುತ್ತದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಖಾಸಗಿ ಕ್ಷೇತ್ರದ ಹೂಡಿಕೆ ಉತ್ತೇಜಿಸುವ ನಿಟ್ಟಿನಲ್ಲಿ ₹1 ಲಕ್ಷ ಕೋಟಿ ಮೊತ್ತದ RDI ನಿಧಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದರು.</p><p>ವಿಕಸಿತ ಭಾರತ 2047 ದೂರದೃಷ್ಟಿ ಕಾರ್ಯಕ್ರಮದ ಭಾಗವಾಗಿ ನೀತಿ ನಿರೂಪಕರು, ಅನ್ವೇಷಕರು ಮತ್ತು ಜಾಗತಿಕ ಮಟ್ಟದ ದಾರ್ಶನಿಕರನ್ನು ಒಂದೇ ವೇದಿಕೆಗೆ ಕರೆತಂದ ವಿಜ್ಞಾನ ತಂತ್ರಜ್ಞಾನ ಮತ್ತು ಅನ್ವೇಷಣೆ ಸಮಾವೇಶದಲ್ಲಿ (ESTIC) ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ (RDI) ನಿಧಿಯನ್ನು ಪ್ರಧಾನಿ ಘೋಷಿಸಿದರು.</p><p>ಭಾರತದ ವೈಜ್ಞಾನಿಕ ಸಾಧನೆ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನದ ದೂರದೃಷ್ಟಿಯ ದಾಖಲೆಯನ್ನೊಳಗೊಂಡ ಕಾಫಿ ಟೇಬಲ್ ಬುಕ್ ಅನ್ನೂ ಇದೇ ಸಂದರ್ಭದಲ್ಲಿ ಅವರು ಬಿಡುಗಡೆ ಮಾಡಿದರು.</p><p>ಆರ್ಡಿಐ ನಿಧಿಯನ್ನು ಎರಡು ಹಂತಗಳಲ್ಲಿ ನಿರ್ವಹಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೋಡಲ್ ಸಚಿವಾಲಯವಾಗಿ ಕಾರ್ಯ ನಿರ್ವಹಿಸಲಿದೆ. ಮೊದಲ ಹಂತದಲ್ಲಿ, ವಿಶೇಷ ಉದ್ದೇಶದ ನಿಧಿಯನ್ನು ಸ್ಥಾಪಿಸಲಾಗುತ್ತದೆ. ಇದರಡಿ ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ (ANRF) ಸ್ಥಾಪಿಸಲಾಗಿದೆ. ಇದು ₹1 ಲಕ್ಷ ಕೋಟಿ ಮೊತ್ತದ ನಿಧಿಯ ರಕ್ಷಕನಾಗಿ ಕೆಲಸ ಮಾಡಲಿದೆ.</p><p>ಈ ನಿಧಿಯನ್ನು ಕೈಗಾರಿಕೆಯಲ್ಲಿ ನೇರವಾಗಿ ಹೂಡಿಕೆ ಮಾಡುವುದಿಲ್ಲ. ಬದಲಿಗೆ, ಮೂಲ ಧನವನ್ನು ಎರಡನೇ ಹಂತದ ನಿಧಿ ವ್ಯವಸ್ಥಾಪಕರಿಗೆ ವರ್ಗಾಯಿಸಲಿದೆ. ಇವರು ಪರ್ಯಾಯ ಹೂಡಿಕೆ ನಿಧಿಗಳು (AIF), ಅಭಿವೃದ್ಧಿ ಹಣಕಾಸು ಸಂಸ್ಥೆಗಳು (DFI) ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFCs) ಇತ್ಯಾದಿಗಳಾಗಿರಬಹುದು.</p><p>ಸರ್ಕಾರದಿಂದಲೇ ನಿರ್ವಹಣೆಗೆ ಒಳಪಡುವ ಆರ್ಥಿಕ, ವ್ಯಾವಹಕಾರಿಕ ಮತ್ತು ತಾಂತ್ರಿಕ ಕ್ಷೇತ್ರದ ಪರಿಣಿತರನ್ನು ಒಳಗೊಂಡ ಹೂಡಿಕೆ ಸಮಿತಿಗಳ ಮೂಲಕ ಎರಡನೇ ಹಂತದ ನಿಧಿ ವ್ಯವಸ್ಥಾಪಕರಿಗೆ ನಿಧಿ ವರ್ಗಾಯಿಸಲಾಗುತ್ತದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>