ನವದೆಹಲಿ: ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಇರುವ ‘ಪ್ರಧಾನಮಂತ್ರಿ ಜನ ವಿಕಾಸ ಕಾರ್ಯಕ್ರಮ‘ ಯೋಜನೆಯಡಿ ನೀಡಲಾಗಿದ್ದ ₹ 4500 ಕೋಟಿ ರಾಜ್ಯಗಳ ಬಳಿ ಬಳಕೆಯಾಗದೇ ಉಳಿದಿವೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.
2008 ರಿಂದ 2018–19ರ ಅವಧಿಯಲ್ಲಿ ಈ ಯೋಜನೆಯಡಿ ಮೂಲಸೌಕರ್ಯ ಅಭಿವೃದ್ಧಿಗೆ ಬಿಡುಗಡೆಯಾದ 58,000 ಘಟಕಗಳು ಕಾರ್ಯಸಾಧುವಲ್ಲ ಎಂದು ರಾಜ್ಯ ಸರ್ಕಾರಗಳು ಹೇಳಿದ್ದು, ಹೀಗಾಗಿ ಅವುಗಳನ್ನು ಒಂದೋ ಕೈ ಬಿಡಲಾಗಿದೆ ಅಥವಾ ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆಯಡಿ ಬಿಡುಗಡೆಯಾಗುವ ಅನುದಾನವನ್ನು ಬಳಕೆ ಮಾಡಿ, ರಾಜ್ಯ ಸರ್ಕಾರಗಳು ‘ಬಳಕೆ ಪ್ರಮಾಣಪತ್ರ‘ ನೀಡದ ಹೊರತು, ಕೇಂದ್ರ ಸರ್ಕಾರಕ್ಕೆ ಈ ಯೋಜನೆಯಡಿ ಹೆಚ್ಚಿನ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.