<p><strong>ಪತ್ತನಂತಿಟ್ಟ(ಕೇರಳ):</strong> ಶಬರಿಮಲೆ ಯಾತ್ರೆಯ ಸಮಯದಲ್ಲಿ ಜನಸಂದಣಿಯಲ್ಲಿ ಮಕ್ಕಳು ದಾರಿ ತಪ್ಪುವುದನ್ನು ತಡೆಯಲು ಪೊಲೀಸರು ಸುರಕ್ಷತಾ ತೋಳುಪಟ್ಟಿಯನ್ನು ಪರಿಚಯಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.</p><p>ಪೊಲೀಸರ ಪ್ರಕಾರ, ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲ ಮಕ್ಕಳಿಗೆ ಪಂಪಾದಲ್ಲಿ ಮಗುವಿನ ಹೆಸರು ಮತ್ತು ಜೊತೆಯಲ್ಲಿರುವ ಪೋಷಕರ ಮೊಬೈಲ್ ಸಂಖ್ಯೆಯನ್ನು ಮುದ್ರಿಸಲಾದ ತೋಳುಪಟ್ಟಿಯನ್ನು ನೀಡಲಾಗುತ್ತದೆ.</p><p>ಈ ಪಟ್ಟಿ ಮಗುವಿನ ವಿವರಗಳನ್ನು ಹೊಂದಿರುವ ಕ್ಯೂಆರ್ ಕೋಡ್ ಅನ್ನು ಸಹ ಹೊಂದಿದೆ ಎಂದು ಅವರು ಹೇಳಿದ್ದಾರೆ.</p><p>ಜನಸಂದಣಿಯಲ್ಲಿ ಮಗು ಬೇರ್ಪಟ್ಟರೆ ಪೋಷಕರನ್ನು ತ್ವರಿತವಾಗಿ ಪತ್ತೆಹಚ್ಚಲು ಪೊಲೀಸರಿಗೆ ಸುರಕ್ಷತಾ ತೋಳುಪಟ್ಟಿ ಸಹಾಯ ಮಾಡುತ್ತದೆ. ಪಟ್ಟಿಯಲ್ಲಿರುವ ಮಾಹಿತಿಯನ್ನು ಬಳಸಿಕೊಂಡು ಇತರ ಯಾತ್ರಿಕರು ದಾರಿ ತಪ್ಪಿದ ಮಕ್ಕಳಿಗೆ ಸಹಾಯ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.</p><p>ಯಾತ್ರೆ ಮುಗಿದು ಮಗು ಸುರಕ್ಷಿತವಾಗಿ ವಾಹನಕ್ಕೆ ಮರಳುವವರೆಗೆ ತೋಳಿನ ಪಟ್ಟಿ ತೆಗೆಯದಂತೆ ಪೋಷಕರನ್ನು ಪೊಲೀಸ್ ಅಧಿಕಾರಿಗಳು ಒತ್ತಾಯಿಸಿದ್ದಾರೆ.</p><p>ನವೆಂಬರ್ 16ರಂದು ಆರಂಭವಾದ 'ಮಂಡಲ-ಮಕರವಿಳಕ್ಕು' ಋತುವು ಮುಂದಿನ ವರ್ಷ ಜನವರಿಯಲ್ಲಿ ಕೊನೆಗೊಳ್ಳುತ್ತದೆ.</p><p>ಮಕ್ಕಳು ಸೇರಿದಂತೆ ಸರಾಸರಿ 70,000ಕ್ಕೂ ಹೆಚ್ಚು ಯಾತ್ರಿಕರು ಪ್ರತಿದಿನ ಬೆಟ್ಟದ ದೇಗುಲಕ್ಕೆ ಭೇಟಿ ನೀಡುತ್ತಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪತ್ತನಂತಿಟ್ಟ(ಕೇರಳ):</strong> ಶಬರಿಮಲೆ ಯಾತ್ರೆಯ ಸಮಯದಲ್ಲಿ ಜನಸಂದಣಿಯಲ್ಲಿ ಮಕ್ಕಳು ದಾರಿ ತಪ್ಪುವುದನ್ನು ತಡೆಯಲು ಪೊಲೀಸರು ಸುರಕ್ಷತಾ ತೋಳುಪಟ್ಟಿಯನ್ನು ಪರಿಚಯಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.</p><p>ಪೊಲೀಸರ ಪ್ರಕಾರ, ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲ ಮಕ್ಕಳಿಗೆ ಪಂಪಾದಲ್ಲಿ ಮಗುವಿನ ಹೆಸರು ಮತ್ತು ಜೊತೆಯಲ್ಲಿರುವ ಪೋಷಕರ ಮೊಬೈಲ್ ಸಂಖ್ಯೆಯನ್ನು ಮುದ್ರಿಸಲಾದ ತೋಳುಪಟ್ಟಿಯನ್ನು ನೀಡಲಾಗುತ್ತದೆ.</p><p>ಈ ಪಟ್ಟಿ ಮಗುವಿನ ವಿವರಗಳನ್ನು ಹೊಂದಿರುವ ಕ್ಯೂಆರ್ ಕೋಡ್ ಅನ್ನು ಸಹ ಹೊಂದಿದೆ ಎಂದು ಅವರು ಹೇಳಿದ್ದಾರೆ.</p><p>ಜನಸಂದಣಿಯಲ್ಲಿ ಮಗು ಬೇರ್ಪಟ್ಟರೆ ಪೋಷಕರನ್ನು ತ್ವರಿತವಾಗಿ ಪತ್ತೆಹಚ್ಚಲು ಪೊಲೀಸರಿಗೆ ಸುರಕ್ಷತಾ ತೋಳುಪಟ್ಟಿ ಸಹಾಯ ಮಾಡುತ್ತದೆ. ಪಟ್ಟಿಯಲ್ಲಿರುವ ಮಾಹಿತಿಯನ್ನು ಬಳಸಿಕೊಂಡು ಇತರ ಯಾತ್ರಿಕರು ದಾರಿ ತಪ್ಪಿದ ಮಕ್ಕಳಿಗೆ ಸಹಾಯ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.</p><p>ಯಾತ್ರೆ ಮುಗಿದು ಮಗು ಸುರಕ್ಷಿತವಾಗಿ ವಾಹನಕ್ಕೆ ಮರಳುವವರೆಗೆ ತೋಳಿನ ಪಟ್ಟಿ ತೆಗೆಯದಂತೆ ಪೋಷಕರನ್ನು ಪೊಲೀಸ್ ಅಧಿಕಾರಿಗಳು ಒತ್ತಾಯಿಸಿದ್ದಾರೆ.</p><p>ನವೆಂಬರ್ 16ರಂದು ಆರಂಭವಾದ 'ಮಂಡಲ-ಮಕರವಿಳಕ್ಕು' ಋತುವು ಮುಂದಿನ ವರ್ಷ ಜನವರಿಯಲ್ಲಿ ಕೊನೆಗೊಳ್ಳುತ್ತದೆ.</p><p>ಮಕ್ಕಳು ಸೇರಿದಂತೆ ಸರಾಸರಿ 70,000ಕ್ಕೂ ಹೆಚ್ಚು ಯಾತ್ರಿಕರು ಪ್ರತಿದಿನ ಬೆಟ್ಟದ ದೇಗುಲಕ್ಕೆ ಭೇಟಿ ನೀಡುತ್ತಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>