<p><strong>ಪತ್ತನಂತಿಟ್ಟ</strong>: ಶಬರಿಮಲೆ ದೇವಸ್ಥಾನದಿಂದ ಚಿನ್ನ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಸೋಮವಾರ ಶ್ರೀಕೋವಿಲ್ನಿಂದ (ಗರ್ಭಗುಡಿ) ಚಿನ್ನ ಲೇಪಿತ ಕವಚವನ್ನು ವೈಜ್ಞಾನಿಕ ಪರೀಕ್ಷೆಗಾಗಿ ಹೊರತೆಗೆದಿದೆ.</p>.<p>ಕೇರಳ ಹೈಕೋರ್ಟ್ ಸೂಚನೆಯಂತೆ, ಈ ಪ್ರಕ್ರಿಯೆಯು ‘ದೇವ ಅನುಜ್ಞೆ’ (ದೈವಿಕ ಅನುಮತಿ) ಆಚರಣೆ ಮತ್ತು ಅಗ್ರ ಪೂಜೆ ಬಳಿಕ ದೇವಾಲಯವನ್ನು ಮುಚ್ಚಿದ ನಂತರ ಮಧ್ಯಾಹ್ನ 1.15ಕ್ಕೆ ಪ್ರಾರಂಭವಾಗಿ 3 ಗಂಟೆವರೆಗೆ ನಡೆಯಿತು.</p>.<p>ಇದಕ್ಕಾಗಿ ತನಿಖಾಧಿಕಾರಿ ಡಿವೈಎಸ್ಪಿ ಎಸ್. ಶಶಿಧರನ್ ನೇತೃತ್ವದ ತಂಡವು ಭಾನುವಾರದಿಂದ ಶಬರಿಮಲೆಯಲ್ಲಿ ಬೀಡುಬಿಟ್ಟಿದೆ.</p>.<p>ಪೊಲೀಸ್ ಸಿಬ್ಬಂದಿ, ವಿಧಿವಿಜ್ಞಾನ ತಜ್ಞರು ಮತ್ತು ರಾಸಾಯನಿಕ ವಿಶ್ಲೇಷಕರು ಸೇರಿದಂತೆ 20 ಮಂದಿ ಎಸ್ಐಟಿಯೊಂದಿಗೆ ಸೇರಿಕೊಂಡಿದ್ದಾರೆ. ಇಡೀ ಕಾರ್ಯವಿಧಾನವನ್ನು ವಿಡಿಯೊ ಚಿತ್ರೀಕರಣ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಶಿಲ್ಪಿಗಳು ಪಕ್ಕದ ಕಂಬಗಳಿಂದ ಚಿನ್ನ ಲೇಪಿತ ಕವಚ, ದ್ವಾರಪಾಲಕ ಮೂರ್ತಿಗಳ ಪೀಠಗಳು ಮತ್ತು ಶ್ರೀಕೋವಿಲ್ನ ಬಾಗಿಲಿನ ಚೌಕಟ್ಟುಗಳನ್ನು ತೆಗೆಯಲು ಎಸ್ಐಟಿಗೆ ಸಹಾಯ ಮಾಡಿದರು. ಅವುಗಳನ್ನು ಮತ್ತೊಂದು ಕೋಣೆಗೆ ವರ್ಗಾಯಿಸಲಾಯಿತು. ಅಲ್ಲಿ ಅವುಗಳ ತೂಕವನ್ನು ದಾಖಲಿಸಲಾಯಿತು. </p>.<p>ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಮಾದರಿಗಳನ್ನು ಸಂಗ್ರಹಿಸಲಾಯಿತು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಇವುಗಳನ್ನು ಶೀಘ್ರದಲ್ಲೇ ಮರುಸ್ಥಾಪಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.</p>.ಚಿನ್ನ ಕಳವು ಪ್ರಕರಣ: ವೈಜ್ಞಾನಿಕ ಪರೀಕ್ಷೆಗಾಗಿ ಶಬರಿಮಲೆ ದೇಗುಲಕ್ಕೆ ತಲುಪಿದ SIT.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪತ್ತನಂತಿಟ್ಟ</strong>: ಶಬರಿಮಲೆ ದೇವಸ್ಥಾನದಿಂದ ಚಿನ್ನ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಸೋಮವಾರ ಶ್ರೀಕೋವಿಲ್ನಿಂದ (ಗರ್ಭಗುಡಿ) ಚಿನ್ನ ಲೇಪಿತ ಕವಚವನ್ನು ವೈಜ್ಞಾನಿಕ ಪರೀಕ್ಷೆಗಾಗಿ ಹೊರತೆಗೆದಿದೆ.</p>.<p>ಕೇರಳ ಹೈಕೋರ್ಟ್ ಸೂಚನೆಯಂತೆ, ಈ ಪ್ರಕ್ರಿಯೆಯು ‘ದೇವ ಅನುಜ್ಞೆ’ (ದೈವಿಕ ಅನುಮತಿ) ಆಚರಣೆ ಮತ್ತು ಅಗ್ರ ಪೂಜೆ ಬಳಿಕ ದೇವಾಲಯವನ್ನು ಮುಚ್ಚಿದ ನಂತರ ಮಧ್ಯಾಹ್ನ 1.15ಕ್ಕೆ ಪ್ರಾರಂಭವಾಗಿ 3 ಗಂಟೆವರೆಗೆ ನಡೆಯಿತು.</p>.<p>ಇದಕ್ಕಾಗಿ ತನಿಖಾಧಿಕಾರಿ ಡಿವೈಎಸ್ಪಿ ಎಸ್. ಶಶಿಧರನ್ ನೇತೃತ್ವದ ತಂಡವು ಭಾನುವಾರದಿಂದ ಶಬರಿಮಲೆಯಲ್ಲಿ ಬೀಡುಬಿಟ್ಟಿದೆ.</p>.<p>ಪೊಲೀಸ್ ಸಿಬ್ಬಂದಿ, ವಿಧಿವಿಜ್ಞಾನ ತಜ್ಞರು ಮತ್ತು ರಾಸಾಯನಿಕ ವಿಶ್ಲೇಷಕರು ಸೇರಿದಂತೆ 20 ಮಂದಿ ಎಸ್ಐಟಿಯೊಂದಿಗೆ ಸೇರಿಕೊಂಡಿದ್ದಾರೆ. ಇಡೀ ಕಾರ್ಯವಿಧಾನವನ್ನು ವಿಡಿಯೊ ಚಿತ್ರೀಕರಣ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಶಿಲ್ಪಿಗಳು ಪಕ್ಕದ ಕಂಬಗಳಿಂದ ಚಿನ್ನ ಲೇಪಿತ ಕವಚ, ದ್ವಾರಪಾಲಕ ಮೂರ್ತಿಗಳ ಪೀಠಗಳು ಮತ್ತು ಶ್ರೀಕೋವಿಲ್ನ ಬಾಗಿಲಿನ ಚೌಕಟ್ಟುಗಳನ್ನು ತೆಗೆಯಲು ಎಸ್ಐಟಿಗೆ ಸಹಾಯ ಮಾಡಿದರು. ಅವುಗಳನ್ನು ಮತ್ತೊಂದು ಕೋಣೆಗೆ ವರ್ಗಾಯಿಸಲಾಯಿತು. ಅಲ್ಲಿ ಅವುಗಳ ತೂಕವನ್ನು ದಾಖಲಿಸಲಾಯಿತು. </p>.<p>ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಮಾದರಿಗಳನ್ನು ಸಂಗ್ರಹಿಸಲಾಯಿತು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಇವುಗಳನ್ನು ಶೀಘ್ರದಲ್ಲೇ ಮರುಸ್ಥಾಪಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.</p>.ಚಿನ್ನ ಕಳವು ಪ್ರಕರಣ: ವೈಜ್ಞಾನಿಕ ಪರೀಕ್ಷೆಗಾಗಿ ಶಬರಿಮಲೆ ದೇಗುಲಕ್ಕೆ ತಲುಪಿದ SIT.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>