<p><strong>ಶ್ರೀವಿಜಯಪುರ</strong>: ದೇಶದಲ್ಲಿ ಅಸ್ಪ್ರಶ್ಯತೆ ನಿರ್ಮೂಲನೆಗೆ ಶ್ರಮಿಸಿದ ವಿನಾಯಕ ದಾಮೋದರ್ ಸಾವರ್ಕರ್ಗೆ ಸೂಕ್ತ ಗೌರವ ಸಿಗಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದರು.</p>.<p>ಸಾವರ್ಕರ್ ಅವರ ‘ಸಾಗರ ಪ್ರಾಣ ತಲಮಲ’ ಗೀತೆಯ 115ನೇ ವರ್ಷಾಚರಣೆ ಅಂಗವಾಗಿ ಅಂಡಮಾನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹಿಂದೂ ಸಮಾಜದಲ್ಲಿದ್ದ ಕೆಟ್ಟ ಆಚರಣೆಗಳ ವಿರುದ್ಧ ಧೈರ್ಯದಿಂದ ಹೋರಾಡಿದರೂ, ಸಮುದಾಯದ ವಿರೋಧದ ನಡುವೆಯೂ ಪ್ರಗತಿಯ ಕಡೆ ಹೆಜ್ಜೆ ಹಾಕಿದ್ದರು’ ಎಂದು ಹೇಳಿದರು.</p>.<p>‘ಸ್ವಾತಂತ್ರ್ಯ ಪೂರ್ವದಲ್ಲಿ ಅಂಡಮಾನ್ ಜೈಲಿಗೆ ಬಂದವರನ್ನು ಅವರ ಮನೆಯವರು ಮರೆತು ಬಿಡುತ್ತಿದ್ದರು. ಇಲ್ಲಿಗೆ ಕೈದಿಗಳಾಗಿ ಬಂದವರು ಮರಳಿ ಹೋಗುತ್ತಿರಲಿಲ್ಲ. ಸಾವರ್ಕರ್ ಇಲ್ಲಿ ಜೈಲುವಾಸ ಅನುಭವಿಸಿದ ಕಾರಣಕ್ಕೆ ಈ ಸ್ಥಳ ಭಾರತೀಯರ ಪಾಲಿಗೆ ಪುಣ್ಯ ಸ್ಥಳವಾಗಿದೆ’ ಎಂದು ಹೇಳಿದರು.</p>.<p><strong>ಸಾವರ್ಕರ್ ಪ್ರತಿಮೆ ಲೋಕಾರ್ಪಣೆ</strong></p><p>ಅಂಡಮಾನ್–ನಿಕೋಬಾರ್ ದ್ವೀಪದಲ್ಲಿ ನಿರ್ಮಾಣಗೊಂಡಿರುವ ವಿನಾಯಕ ದಾಮೋದರ್ ಸಾವರ್ಕರ್ ಅವರು ಪ್ರತಿಮೆಯನ್ನು ಕೇಂದ್ ಗೃಹ ಸಚಿವ ಅಮಿತ್ ಶಾ ಮತ್ತು ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಶುಕ್ರವಾರ ಅನಾವರಣಗೊಳಿಸಿದ್ದಾರೆ.</p><p>ಪ್ರತಿಮೆ ಅನಾವರಣದ ಬಳಿಕ ಅದೇ ಉದ್ಯಾನದಲ್ಲಿ ಅಮಿತ್ ಶಾ ಮತ್ತು ಭಾಗವತ್ ಅವರು ರುದ್ರಾಕ್ಷಿ ಗಿಡಗಳನ್ನು ನೆಟ್ಟರು. ಬಳಿಕ ಶ್ರೀವಿಜಯಪುರಂನಲ್ಲಿರುವ ಬಿ.ಆರ್ ಅಂಬೇಡ್ಕರ್ ತಾಂತ್ರಿಕ ವಿದ್ಯಾಲಯದಲ್ಲಿ ಸಾವರ್ಕರ್ ಕುರಿತ ಗೀತೆಯನ್ನು ಬಿಡುಗಡೆಗೊಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀವಿಜಯಪುರ</strong>: ದೇಶದಲ್ಲಿ ಅಸ್ಪ್ರಶ್ಯತೆ ನಿರ್ಮೂಲನೆಗೆ ಶ್ರಮಿಸಿದ ವಿನಾಯಕ ದಾಮೋದರ್ ಸಾವರ್ಕರ್ಗೆ ಸೂಕ್ತ ಗೌರವ ಸಿಗಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದರು.</p>.<p>ಸಾವರ್ಕರ್ ಅವರ ‘ಸಾಗರ ಪ್ರಾಣ ತಲಮಲ’ ಗೀತೆಯ 115ನೇ ವರ್ಷಾಚರಣೆ ಅಂಗವಾಗಿ ಅಂಡಮಾನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹಿಂದೂ ಸಮಾಜದಲ್ಲಿದ್ದ ಕೆಟ್ಟ ಆಚರಣೆಗಳ ವಿರುದ್ಧ ಧೈರ್ಯದಿಂದ ಹೋರಾಡಿದರೂ, ಸಮುದಾಯದ ವಿರೋಧದ ನಡುವೆಯೂ ಪ್ರಗತಿಯ ಕಡೆ ಹೆಜ್ಜೆ ಹಾಕಿದ್ದರು’ ಎಂದು ಹೇಳಿದರು.</p>.<p>‘ಸ್ವಾತಂತ್ರ್ಯ ಪೂರ್ವದಲ್ಲಿ ಅಂಡಮಾನ್ ಜೈಲಿಗೆ ಬಂದವರನ್ನು ಅವರ ಮನೆಯವರು ಮರೆತು ಬಿಡುತ್ತಿದ್ದರು. ಇಲ್ಲಿಗೆ ಕೈದಿಗಳಾಗಿ ಬಂದವರು ಮರಳಿ ಹೋಗುತ್ತಿರಲಿಲ್ಲ. ಸಾವರ್ಕರ್ ಇಲ್ಲಿ ಜೈಲುವಾಸ ಅನುಭವಿಸಿದ ಕಾರಣಕ್ಕೆ ಈ ಸ್ಥಳ ಭಾರತೀಯರ ಪಾಲಿಗೆ ಪುಣ್ಯ ಸ್ಥಳವಾಗಿದೆ’ ಎಂದು ಹೇಳಿದರು.</p>.<p><strong>ಸಾವರ್ಕರ್ ಪ್ರತಿಮೆ ಲೋಕಾರ್ಪಣೆ</strong></p><p>ಅಂಡಮಾನ್–ನಿಕೋಬಾರ್ ದ್ವೀಪದಲ್ಲಿ ನಿರ್ಮಾಣಗೊಂಡಿರುವ ವಿನಾಯಕ ದಾಮೋದರ್ ಸಾವರ್ಕರ್ ಅವರು ಪ್ರತಿಮೆಯನ್ನು ಕೇಂದ್ ಗೃಹ ಸಚಿವ ಅಮಿತ್ ಶಾ ಮತ್ತು ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಶುಕ್ರವಾರ ಅನಾವರಣಗೊಳಿಸಿದ್ದಾರೆ.</p><p>ಪ್ರತಿಮೆ ಅನಾವರಣದ ಬಳಿಕ ಅದೇ ಉದ್ಯಾನದಲ್ಲಿ ಅಮಿತ್ ಶಾ ಮತ್ತು ಭಾಗವತ್ ಅವರು ರುದ್ರಾಕ್ಷಿ ಗಿಡಗಳನ್ನು ನೆಟ್ಟರು. ಬಳಿಕ ಶ್ರೀವಿಜಯಪುರಂನಲ್ಲಿರುವ ಬಿ.ಆರ್ ಅಂಬೇಡ್ಕರ್ ತಾಂತ್ರಿಕ ವಿದ್ಯಾಲಯದಲ್ಲಿ ಸಾವರ್ಕರ್ ಕುರಿತ ಗೀತೆಯನ್ನು ಬಿಡುಗಡೆಗೊಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>