<p><strong>ನವದೆಹಲಿ:</strong>ಕುಲಾಂತರಿ ಹೈಬ್ರಿಡ್ (ಜಿಎಂ) ಸಾಸಿವೆ ಬಿಡುಗಡೆ ಮಾಡಲು ಯಾರ ಒತ್ತಡಕ್ಕೆ ಸಿಲುಕಿದ್ದೀರಿ? ಈಗ ಉದ್ಭವಿಸಿರುವ ಈ ಸಮಸ್ಯೆ ಇತ್ಯರ್ಥವಾಗುವವರೆಗೆ ಇದನ್ನು ವಿಳಂಬಿಸುವುದು ಉತ್ತಮವಲ್ಲವೇ? ಎಂಬುದನ್ನು ಸ್ಪಷ್ಟಪಡಿಸುವಂತೆ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಗುರುವಾರ ಸೂಚನೆ ನೀಡಿದೆ.</p>.<p>ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಮತ್ತು ಬಿ.ವಿ. ನಾಗರತ್ನ ಅವರಿದ್ದ ಪೀಠವು, ಕುಲಾಂತರಿ ಹೈಬ್ರಿಡ್ ಸಾಸಿವೆಗೆ ಪರಿಸರಾತ್ಮಕ ಅನುಮತಿ ನೀಡಿರುವುದು ಸರಿಪಡಿಸಲಾಗದ ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಗಲಿದೆಯೇ ಎಂಬುದಕ್ಕೂ ಪ್ರತಿಕ್ರಿಯಿಸಲು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರಿಗೆ ಸೂಚಿಸಿತು.</p>.<p>‘ಹೆಚ್ಚಿನ ಇಳುವರಿ ಜತೆಗೆ ಹೊಸ ಜಿಎಂ ಸಾಸಿವೆ ಕೃಷಿ ರೈತರ ಆದಾಯ ಹೆಚ್ಚಿಸುತ್ತದೆ. ವಿದೇಶಿ ಅವಲಂಬನೆ ತಗ್ಗಿಸುತ್ತದೆ. ಇದರಲ್ಲಿ ರಾಷ್ಟ್ರದ ಮತ್ತು ಸಾರ್ವಜನಿಕ ಹಿತಾಸಕ್ತಿ ಇತ್ತು’ ಎಂದು ಎ.ಜಿ ಅವರು ನ್ಯಾಯಪೀಠಕ್ಕೆ ತಿಳಿಸಿದರು.</p>.<p>‘ಜಿಎಂ ಸಾಸಿವೆ ಬೆಳೆಯದಿದ್ದರೆ ನಾವು ಅವನತಿ ಹೊಂದುತ್ತೀವಿ ಎನ್ನುತ್ತೀರಾ? ನಮ್ಮ ದೇಶದ ರೈತರು ಪಾಶ್ಚಿಮಾತ್ಯ ರೈತರಂತೆ ಅಲ್ಲ. ದೇಶದ ವಾಸ್ತವತೆ ಅರ್ಥಮಾಡಿಕೊಳ್ಳಿ.ಬಹಳಷ್ಟು ಕೃಷಿ ಮೇಳಗಳಲ್ಲಿ ಇದು ಇರಬಹುದು, ಆದರೆ ವಾಸ್ತವ ಸ್ಥಿತಿ ಬೇರೇನೆ ಇದೆ’ ಎಂದು ಪೀಠ ತರಾಟೆ ತೆಗೆದುಕೊಂಡಿತು.</p>.<p>‘ಜೀನ್ ಕ್ಯಾಂಪೇನ್’ ಸಲ್ಲಿಸಿದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮತ್ತುಅರುಣಾ ರಾಡ್ರಿಗಸ್ ನೇತೃತ್ವದಲ್ಲಿ ಇತರರು ಜಿಎಂ ಸಾಸಿವೆ ನಿಷೇಧಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong>ಕುಲಾಂತರಿ ಹೈಬ್ರಿಡ್ (ಜಿಎಂ) ಸಾಸಿವೆ ಬಿಡುಗಡೆ ಮಾಡಲು ಯಾರ ಒತ್ತಡಕ್ಕೆ ಸಿಲುಕಿದ್ದೀರಿ? ಈಗ ಉದ್ಭವಿಸಿರುವ ಈ ಸಮಸ್ಯೆ ಇತ್ಯರ್ಥವಾಗುವವರೆಗೆ ಇದನ್ನು ವಿಳಂಬಿಸುವುದು ಉತ್ತಮವಲ್ಲವೇ? ಎಂಬುದನ್ನು ಸ್ಪಷ್ಟಪಡಿಸುವಂತೆ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಗುರುವಾರ ಸೂಚನೆ ನೀಡಿದೆ.</p>.<p>ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಮತ್ತು ಬಿ.ವಿ. ನಾಗರತ್ನ ಅವರಿದ್ದ ಪೀಠವು, ಕುಲಾಂತರಿ ಹೈಬ್ರಿಡ್ ಸಾಸಿವೆಗೆ ಪರಿಸರಾತ್ಮಕ ಅನುಮತಿ ನೀಡಿರುವುದು ಸರಿಪಡಿಸಲಾಗದ ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಗಲಿದೆಯೇ ಎಂಬುದಕ್ಕೂ ಪ್ರತಿಕ್ರಿಯಿಸಲು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರಿಗೆ ಸೂಚಿಸಿತು.</p>.<p>‘ಹೆಚ್ಚಿನ ಇಳುವರಿ ಜತೆಗೆ ಹೊಸ ಜಿಎಂ ಸಾಸಿವೆ ಕೃಷಿ ರೈತರ ಆದಾಯ ಹೆಚ್ಚಿಸುತ್ತದೆ. ವಿದೇಶಿ ಅವಲಂಬನೆ ತಗ್ಗಿಸುತ್ತದೆ. ಇದರಲ್ಲಿ ರಾಷ್ಟ್ರದ ಮತ್ತು ಸಾರ್ವಜನಿಕ ಹಿತಾಸಕ್ತಿ ಇತ್ತು’ ಎಂದು ಎ.ಜಿ ಅವರು ನ್ಯಾಯಪೀಠಕ್ಕೆ ತಿಳಿಸಿದರು.</p>.<p>‘ಜಿಎಂ ಸಾಸಿವೆ ಬೆಳೆಯದಿದ್ದರೆ ನಾವು ಅವನತಿ ಹೊಂದುತ್ತೀವಿ ಎನ್ನುತ್ತೀರಾ? ನಮ್ಮ ದೇಶದ ರೈತರು ಪಾಶ್ಚಿಮಾತ್ಯ ರೈತರಂತೆ ಅಲ್ಲ. ದೇಶದ ವಾಸ್ತವತೆ ಅರ್ಥಮಾಡಿಕೊಳ್ಳಿ.ಬಹಳಷ್ಟು ಕೃಷಿ ಮೇಳಗಳಲ್ಲಿ ಇದು ಇರಬಹುದು, ಆದರೆ ವಾಸ್ತವ ಸ್ಥಿತಿ ಬೇರೇನೆ ಇದೆ’ ಎಂದು ಪೀಠ ತರಾಟೆ ತೆಗೆದುಕೊಂಡಿತು.</p>.<p>‘ಜೀನ್ ಕ್ಯಾಂಪೇನ್’ ಸಲ್ಲಿಸಿದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮತ್ತುಅರುಣಾ ರಾಡ್ರಿಗಸ್ ನೇತೃತ್ವದಲ್ಲಿ ಇತರರು ಜಿಎಂ ಸಾಸಿವೆ ನಿಷೇಧಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>