<p><strong>ನವದೆಹಲಿ:</strong> ನ್ಯಾಯಮೂರ್ತಿ ಸ್ಥಾನದಲ್ಲಿ ಇರುವವರು ತಮ್ಮ ವೈಯಕ್ತಿಕ ಅನಿಸಿಕೆಗಳನ್ನು ವ್ಯಕ್ತಪಡಿಸಬಾರದು, ಬೋಧನೆಗೆ ಮುಂದಾಗಬಾರದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಅಲ್ಲದೆ, ಯುವತಿಯರು ತಮ್ಮ ‘ಲೈಂಗಿಕ ಬಯಕೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು’ ಎಂದು ಕಲ್ಕತ್ತಾ ಹೈಕೋರ್ಟ್ ಹೇಳಿದ್ದನ್ನು ಟೀಕಿಸಿದೆ.</p>.<p>ಹೈಕೋರ್ಟ್ ಆಡಿದ ಮಾತುಗಳು ಬಹಳ ಆಕ್ಷೇಪಾರ್ಹವಾಗಿವೆ, ಅನಗತ್ಯವಾಗಿವೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಪಂಜಕ್ ಮಿತ್ತಲ್ ಅವರಿದ್ದ ವಿಭಾಗೀಯ ಪೀಠವು, ಆ ಮಾತುಗಳು ಸಂವಿಧಾನದ 21ನೆಯ ವಿಧಿಯ ಅಡಿಯಲ್ಲಿ ಹದಿಹರೆಯದವರಿಗೆ ಇರುವ ಹಕ್ಕುಗಳ ಉಲ್ಲಂಘನೆ ಎಂದಿದೆ.</p>.<p>ಅಕ್ಟೋಬರ್ 18ರಂದು ನೀಡಿದ್ದ ಆದೇಶದಲ್ಲಿ ಕಲ್ಕತ್ತಾ ಹೈಕೋರ್ಟ್ನ ನ್ಯಾಯಮೂರ್ತಿ ಚಿತ್ತರಂಜನ್ ದಾಸ್ ಮತ್ತು ಪಾರ್ಥಸಾರಥಿ ಸೆನ್ ಅವರಿದ್ದ ವಿಭಾಗೀಯ ಪೀಠವು ಈ ಮಾತು ಆಡಿತ್ತು. ಅಲ್ಲದೆ, ಹದಿಹರೆಯದ ಹುಡುಗಿಯರು ‘ಎರಡು ನಿಮಿಷಗಳ ಸುಖಕ್ಕೆ ಶರಣಾಗಬಾರದು’ ಎಂದು ಕೂಡ ಹೇಳಿತ್ತು.</p>.<p>ಹೈಕೋರ್ಟ್ನ ಮುಂದೆ ಇದ್ದುದು ಆದೇಶವೊಂದು ಕಾನೂನಿನ ದೃಷ್ಟಿಯಿಂದ ಎಷ್ಟು ಸರಿ ಎಂಬುದನ್ನು ಪರಿಶೀಲಿಸುವುದಾಗಿತ್ತು. ‘ಅಪರಾಧ ನಿರ್ಣಯವನ್ನು ಪ್ರಶ್ನಿಸಿದ ಅರ್ಜಿಯ ವಿಚಾರಣೆಯಲ್ಲಿ, ಆ ಅರ್ಜಿಯಲ್ಲಿ ವಾದಗಳ ಹುರುಳನ್ನು ತೀರ್ಮಾನಿಸುವ ಕೆಲಸವನ್ನು ಹೈಕೋರ್ಟ್ ಮಾಡಬೇಕಿತ್ತು. ಇಂತಹ ಪ್ರಕರಣಗಳಲ್ಲಿ ಗೌರವಾನ್ವಿತ ನ್ಯಾಯಮೂರ್ತಿಗಳು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸುವಂತಿಲ್ಲ, ಬೋಧನೆಗೆ ತೊಡಗುವಂತೆ ಇಲ್ಲ ಎಂಬುದು ನಮ್ಮ ಅನಿಸಿಕೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ನ್ಯಾಯಮೂರ್ತಿ ಸ್ಥಾನದಲ್ಲಿ ಇರುವವರು ತಮ್ಮ ವೈಯಕ್ತಿಕ ಅನಿಸಿಕೆಗಳನ್ನು ವ್ಯಕ್ತಪಡಿಸಬಾರದು, ಬೋಧನೆಗೆ ಮುಂದಾಗಬಾರದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಅಲ್ಲದೆ, ಯುವತಿಯರು ತಮ್ಮ ‘ಲೈಂಗಿಕ ಬಯಕೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು’ ಎಂದು ಕಲ್ಕತ್ತಾ ಹೈಕೋರ್ಟ್ ಹೇಳಿದ್ದನ್ನು ಟೀಕಿಸಿದೆ.</p>.<p>ಹೈಕೋರ್ಟ್ ಆಡಿದ ಮಾತುಗಳು ಬಹಳ ಆಕ್ಷೇಪಾರ್ಹವಾಗಿವೆ, ಅನಗತ್ಯವಾಗಿವೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಪಂಜಕ್ ಮಿತ್ತಲ್ ಅವರಿದ್ದ ವಿಭಾಗೀಯ ಪೀಠವು, ಆ ಮಾತುಗಳು ಸಂವಿಧಾನದ 21ನೆಯ ವಿಧಿಯ ಅಡಿಯಲ್ಲಿ ಹದಿಹರೆಯದವರಿಗೆ ಇರುವ ಹಕ್ಕುಗಳ ಉಲ್ಲಂಘನೆ ಎಂದಿದೆ.</p>.<p>ಅಕ್ಟೋಬರ್ 18ರಂದು ನೀಡಿದ್ದ ಆದೇಶದಲ್ಲಿ ಕಲ್ಕತ್ತಾ ಹೈಕೋರ್ಟ್ನ ನ್ಯಾಯಮೂರ್ತಿ ಚಿತ್ತರಂಜನ್ ದಾಸ್ ಮತ್ತು ಪಾರ್ಥಸಾರಥಿ ಸೆನ್ ಅವರಿದ್ದ ವಿಭಾಗೀಯ ಪೀಠವು ಈ ಮಾತು ಆಡಿತ್ತು. ಅಲ್ಲದೆ, ಹದಿಹರೆಯದ ಹುಡುಗಿಯರು ‘ಎರಡು ನಿಮಿಷಗಳ ಸುಖಕ್ಕೆ ಶರಣಾಗಬಾರದು’ ಎಂದು ಕೂಡ ಹೇಳಿತ್ತು.</p>.<p>ಹೈಕೋರ್ಟ್ನ ಮುಂದೆ ಇದ್ದುದು ಆದೇಶವೊಂದು ಕಾನೂನಿನ ದೃಷ್ಟಿಯಿಂದ ಎಷ್ಟು ಸರಿ ಎಂಬುದನ್ನು ಪರಿಶೀಲಿಸುವುದಾಗಿತ್ತು. ‘ಅಪರಾಧ ನಿರ್ಣಯವನ್ನು ಪ್ರಶ್ನಿಸಿದ ಅರ್ಜಿಯ ವಿಚಾರಣೆಯಲ್ಲಿ, ಆ ಅರ್ಜಿಯಲ್ಲಿ ವಾದಗಳ ಹುರುಳನ್ನು ತೀರ್ಮಾನಿಸುವ ಕೆಲಸವನ್ನು ಹೈಕೋರ್ಟ್ ಮಾಡಬೇಕಿತ್ತು. ಇಂತಹ ಪ್ರಕರಣಗಳಲ್ಲಿ ಗೌರವಾನ್ವಿತ ನ್ಯಾಯಮೂರ್ತಿಗಳು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸುವಂತಿಲ್ಲ, ಬೋಧನೆಗೆ ತೊಡಗುವಂತೆ ಇಲ್ಲ ಎಂಬುದು ನಮ್ಮ ಅನಿಸಿಕೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>