<p><strong>ಔರಂಗಬಾದ್(ಬಿಹಾರ):</strong> ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ‘ಮತಗಳ್ಳತನ’ದ ಹೊಸ ಅಸ್ತ್ರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ.</p><p>ಈ ಬಗ್ಗೆ ತಮ್ಮ ವಾಟ್ಸಪ್ ಚಾನೆಲ್ನಲ್ಲಿ ರಾಹುಲ್ ಬರೆದುಕೊಂಡಿದ್ದಾರೆ. ಬಿಹಾರದಲ್ಲಿ ಎಸ್ಐಆರ್ ನಂತರ ಮತದಾರರ ಪಟ್ಟಿಯಿಂದ ಕೈಬಿಟ್ಟವರ ಫೋಟೊವನ್ನು ಪೋಸ್ಟ್ ಜೊತೆಗೆ ಹಂಚಿಕೊಂಡಿದ್ದಾರೆ.</p><p>‘ಎಸ್ಐಆರ್ ಮತ ಕಳ್ಳತನದ ಹೊಸ ಅಸ್ತ್ರ. ಕಾಕತಾಳೀಯವೆಂಬಂತೆ ಈ ಚಿತ್ರದಲ್ಲಿ ನನ್ನೊಂದಿಗೆ ನಿಂತಿರುವ ಈ ಜನರು ಈ ಕಳ್ಳತನದ 'ಜೀವಂತ' ಪುರಾವೆಯಾಗಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.</p><p>‘ಅವರೆಲ್ಲರೂ 2024 ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. ಆದರೆ, ಬಿಹಾರ ವಿಧಾನಸಭಾ ಚುನಾವಣೆಗಳು ಬರುವ ಹೊತ್ತಿಗೆ ಅವರ ಗುರುತು, ಅಸ್ತಿತ್ವವು ಭಾರತದ ಪ್ರಜಾಪ್ರಭುತ್ವದಿಂದ ಅಳಿಸಿಹೋಗಿದೆ’ ಎಂದಿದ್ದಾರೆ.</p><p>‘ಈ ಫೋಟೊದಲ್ಲಿ ಇರುವವರು ಯಾರು ಗೊತ್ತಾ?.. ರೈತ ಮತ್ತು ನಿವೃತ್ತ ಸೈನಿಕ ರಾಜ್ ಮೋಹನ್ ಸಿಂಗ್(70), ದಲಿತ ಸಮುದಾಯದ ಮಹಿಳೆ ಉಮ್ರಾವತಿ ದೇವಿ (35), ಹಿಂದುಳಿದ ವರ್ಗಕ್ಕೆ ಸೇರಿದ ಧನಂಜಯ್ ಕುಮಾರ್ ಬಿಂದ್(30), ಈ ಹಿಂದೆ ನರೇಗಾದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಸೀತಾ ದೇವಿ (45), ಹಿಂದುಳಿದ ವರ್ಗದ ರಾಜು ದೇವಿ(55), ಅಲ್ಪಸಂಖ್ಯಾತ ಸಮುದಾಯದ ಮೊಹಮ್ಮುದ್ದೀನ್ ಅನ್ಸಾರಿ (52)’ ಎಂದು ತಿಳಿಸಿದ್ದಾರೆ.</p><p>‘ಬಹುಜನರೆಂಬ ಕಾರಣಕ್ಕೆ ಬಿಜೆಪಿ ಮತ್ತು ಚುನಾವಣಾ ಆಯೋಗ ಸೇರಿಕೊಂಡು ಅವರನ್ನು ಜೀವನದುದ್ದಕ್ಕೂ ಬಡವರಾಗಿಯೇ ಇರುವಂತೆ ಶಿಕ್ಷೆ ವಿಧಿಸುತ್ತಿದೆ. ನಮ್ಮ ಸೈನಿಕರನ್ನೂ ಸಹ ಬಿಡಲಿಲ್ಲ’ ಎಂದು ಕಿಡಿಕಾರಿದ್ದಾರೆ.</p><p>‘ಅವರಿಗೆ ಮತದಾನ ಮಾಡುವ ಹಕ್ಕಾಗಲಿ, ಗುರುತಾಗಲಿ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.</p><p>‘ಸಾಮಾಜಿಕ ತಾರತಮ್ಯ ಮತ್ತು ಆರ್ಥಿಕ ಪರಿಸ್ಥಿತಿಗಳಿಂದಾಗಿ ವ್ಯವಸ್ಥೆಯ ಪಿತೂರಿಯ ವಿರುದ್ಧ ಅವರಿಗೆ ಹೋರಾಡಲು ಸಾಧ್ಯವಾಗುತ್ತಿಲ್ಲ. ಅವರ ಮೂಲಭೂತ ಹಕ್ಕನ್ನು ರಕ್ಷಿಸಲು ನಾವು ಅವರೊಂದಿಗೆ ಇಲ್ಲಿದ್ದೇವೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಔರಂಗಬಾದ್(ಬಿಹಾರ):</strong> ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ‘ಮತಗಳ್ಳತನ’ದ ಹೊಸ ಅಸ್ತ್ರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ.</p><p>ಈ ಬಗ್ಗೆ ತಮ್ಮ ವಾಟ್ಸಪ್ ಚಾನೆಲ್ನಲ್ಲಿ ರಾಹುಲ್ ಬರೆದುಕೊಂಡಿದ್ದಾರೆ. ಬಿಹಾರದಲ್ಲಿ ಎಸ್ಐಆರ್ ನಂತರ ಮತದಾರರ ಪಟ್ಟಿಯಿಂದ ಕೈಬಿಟ್ಟವರ ಫೋಟೊವನ್ನು ಪೋಸ್ಟ್ ಜೊತೆಗೆ ಹಂಚಿಕೊಂಡಿದ್ದಾರೆ.</p><p>‘ಎಸ್ಐಆರ್ ಮತ ಕಳ್ಳತನದ ಹೊಸ ಅಸ್ತ್ರ. ಕಾಕತಾಳೀಯವೆಂಬಂತೆ ಈ ಚಿತ್ರದಲ್ಲಿ ನನ್ನೊಂದಿಗೆ ನಿಂತಿರುವ ಈ ಜನರು ಈ ಕಳ್ಳತನದ 'ಜೀವಂತ' ಪುರಾವೆಯಾಗಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.</p><p>‘ಅವರೆಲ್ಲರೂ 2024 ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. ಆದರೆ, ಬಿಹಾರ ವಿಧಾನಸಭಾ ಚುನಾವಣೆಗಳು ಬರುವ ಹೊತ್ತಿಗೆ ಅವರ ಗುರುತು, ಅಸ್ತಿತ್ವವು ಭಾರತದ ಪ್ರಜಾಪ್ರಭುತ್ವದಿಂದ ಅಳಿಸಿಹೋಗಿದೆ’ ಎಂದಿದ್ದಾರೆ.</p><p>‘ಈ ಫೋಟೊದಲ್ಲಿ ಇರುವವರು ಯಾರು ಗೊತ್ತಾ?.. ರೈತ ಮತ್ತು ನಿವೃತ್ತ ಸೈನಿಕ ರಾಜ್ ಮೋಹನ್ ಸಿಂಗ್(70), ದಲಿತ ಸಮುದಾಯದ ಮಹಿಳೆ ಉಮ್ರಾವತಿ ದೇವಿ (35), ಹಿಂದುಳಿದ ವರ್ಗಕ್ಕೆ ಸೇರಿದ ಧನಂಜಯ್ ಕುಮಾರ್ ಬಿಂದ್(30), ಈ ಹಿಂದೆ ನರೇಗಾದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಸೀತಾ ದೇವಿ (45), ಹಿಂದುಳಿದ ವರ್ಗದ ರಾಜು ದೇವಿ(55), ಅಲ್ಪಸಂಖ್ಯಾತ ಸಮುದಾಯದ ಮೊಹಮ್ಮುದ್ದೀನ್ ಅನ್ಸಾರಿ (52)’ ಎಂದು ತಿಳಿಸಿದ್ದಾರೆ.</p><p>‘ಬಹುಜನರೆಂಬ ಕಾರಣಕ್ಕೆ ಬಿಜೆಪಿ ಮತ್ತು ಚುನಾವಣಾ ಆಯೋಗ ಸೇರಿಕೊಂಡು ಅವರನ್ನು ಜೀವನದುದ್ದಕ್ಕೂ ಬಡವರಾಗಿಯೇ ಇರುವಂತೆ ಶಿಕ್ಷೆ ವಿಧಿಸುತ್ತಿದೆ. ನಮ್ಮ ಸೈನಿಕರನ್ನೂ ಸಹ ಬಿಡಲಿಲ್ಲ’ ಎಂದು ಕಿಡಿಕಾರಿದ್ದಾರೆ.</p><p>‘ಅವರಿಗೆ ಮತದಾನ ಮಾಡುವ ಹಕ್ಕಾಗಲಿ, ಗುರುತಾಗಲಿ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.</p><p>‘ಸಾಮಾಜಿಕ ತಾರತಮ್ಯ ಮತ್ತು ಆರ್ಥಿಕ ಪರಿಸ್ಥಿತಿಗಳಿಂದಾಗಿ ವ್ಯವಸ್ಥೆಯ ಪಿತೂರಿಯ ವಿರುದ್ಧ ಅವರಿಗೆ ಹೋರಾಡಲು ಸಾಧ್ಯವಾಗುತ್ತಿಲ್ಲ. ಅವರ ಮೂಲಭೂತ ಹಕ್ಕನ್ನು ರಕ್ಷಿಸಲು ನಾವು ಅವರೊಂದಿಗೆ ಇಲ್ಲಿದ್ದೇವೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>