ಕೋಲ್ಕತ್ತ: ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ವೇಳೆ ಪಶ್ಚಿಮ ಬಂಗಾಳದ ಹೌರಾದಲ್ಲಿ ತಮ್ಮ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎಂದು ಬಿಜೆಪಿ ನಾಯಕ ಶಹನವಾಜ್ ಹುಸೇನ್ ಆರೋಪಿಸಿದ್ದಾರೆ.
‘ಮಜಾಫರ್ ಚೌಕ್ನಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಟಿಎಂಸಿ ಕಾರ್ಯಕರ್ತರು ನನ್ನ ಮೇಲೆ ಕಲ್ಲೆಸೆದಿದ್ದಾರೆ. ನಾನು ಸುರಕ್ಷಿತವಾಗಿದ್ದೇನೆ. ಈ ಕುರಿತು ಪಕ್ಷದ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ’ ಎಂದು ಶಹನವಾಜ್ ಹುಸೇನ್ ಟ್ವೀಟ್ ಮಾಡಿದ್ದಾರೆ.
‘ಸೋಲು ಖಚಿತ ಎಂದು ಟಿಎಂಸಿಗೆ ಅರಿವಾಗಿದ್ದು, ಹತಾಶೆಗೊಂಡಿದೆ’ ಎಂದು ಅವರು ಹೇಳಿದ್ದಾರೆ.
‘ನಾನು ವೈ ಪ್ಲಸ್ ಸಿಆರ್ಪಿಎಫ್ ಭದ್ರತೆ ವ್ಯಾಪ್ತಿಗೆ ಒಳಪಟ್ಟಿದ್ದು ಅದರಂತೆ ಪೊಲೀಸ್ ಸಿಬ್ಬಂದಿಯನ್ನು ಯಾಕೆ ನಿಯೋಜಿಸಿಲ್ಲ ಎಂದು ಗೊಲಬಾರಿ ಪೊಲೀಸ್ ಠಾಣೆಗೆ ತೆರಳಿ ವಿಚಾರಿಸಿದೆ. ಅವರ ಬಳಿ ಉತ್ತರವಿರಲಿಲ್ಲ’ ಎಂದೂ ಹುಸೇನ್ ಹೇಳಿದ್ದಾರೆ.
ಉತ್ತರ ಹೌರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ರೈ ಸಹ ದೂರು ನೀಡಿದ್ದು, ಕೆಲವು ವ್ಯಕ್ತಿಗಳನ್ನು ದೂರಿನಲ್ಲಿ ಹೆಸರಿಸಿದ್ದಾರೆ. ಅವರೆಲ್ಲ ಟಿಎಂಸಿಗೆ ಸೇರಿದವರು ಎನ್ನಲಾಗಿದೆ.
TMC workers pelted stones on me while I was addressing a Sabha at Muzzafar Chowk. I am safe and @BJP4Bengal workers have lodged a complaint regarding the same. pic.twitter.com/KSE5WOOyGT
— Syed Shahnawaz Hussain (@ShahnawazBJP) April 6, 2021