<p><strong>ನವದೆಹಲಿ:</strong> ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣಾ ಕಾರ್ಯಕ್ಕೆ (ಎಸ್ಐಆರ್) ನೇಮಿಸಲಾಗಿರುವ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್ಒ) ಕಾರ್ಯ ಒತ್ತಡ ಕಡಿಮೆಗೊಳಿಸಲು ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವುದನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿದೆ.</p>.<p>ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರ ಪೀಠ ಈ ಕುರಿತು ಸೂಚಿಸಿತು.</p>.<p>‘ನಿಗದಿತ ಅವಧಿಯಲ್ಲಿ ಮುಗಿಸಬೇಕಾದ ಎಸ್ಐಆರ್ನಿಂದ ಬಿಎಲ್ಒಗಳ ಕೆಲಸದ ಒತ್ತಡ ಹೆಚ್ಚಾಗಿದೆ. ಇದನ್ನು ನಿರ್ವಹಿಸಲಾಗದೆ ಕೆಲ ಬಿಎಲ್ಒಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಟಿವಿಕೆ ಅರ್ಜಿಯಲ್ಲಿ ತಿಳಿಸಿದೆ. ಈ ಕರ್ತವ್ಯ ನಿರ್ವಹಿಸಲು ಆಗದ ಸಿಬ್ಬಂದಿ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ (ಆರ್ಪಿ) ಅಡಿ ಕ್ರಮ ತೆಗೆದುಕೊಳ್ಳದಂತೆ ಚುನಾವಣಾ ಆಯೋಗಕ್ಕೆ ಸೂಚಿಸುವಂತೆ ಅರ್ಜಿಯಲ್ಲಿ ಕೋರಿದೆ.</p>.<p>ಟಿವಿಕೆ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ‘ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ವಿವಿಧ ಹಂತದ ಸಿಬ್ಬಂದಿಯನ್ನು ಬಿಎಲ್ಒಗಳಾಗಿ ನೇಮಿಸಲಾಗಿದೆ. ಕರ್ತವ್ಯ ನಿರ್ವಹಿಸಲು ವಿಫಲರಾಗುವ ಬಿಎಲ್ಒಗಳ ವಿರುದ್ಧ ಆಯೋಗ ಎಫ್ಐಆರ್ ದಾಖಲಿಸುತ್ತಿದೆ. ಈ ಎಲ್ಲ ಒತ್ತಡಗಳಿಂದಾಗಿ ಕೆಲ ಬಿಎಲ್ಒಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದರು.</p>.<p>‘ಕೆಲಸದ ಒತ್ತಡ ಕಡಿಮೆ ಮಾಡಲು ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವ ನಿಟ್ಟಿನಲ್ಲಿ ರಾಜ್ಯಗಳು ಕ್ರಮವಹಿಸಬಹುದು. ದೈನಂದಿನ ಕರ್ತವ್ಯಗಳ ಜತೆಗೆ ಹೆಚ್ಚುವರಿ ಕೆಲಸದ ನಿರ್ವಹಣೆಯಿಂದ ಸಿಬ್ಬಂದಿಗೆ ತೊಂದರೆಗಳಾಗುತ್ತಿದ್ದರೆ ಸರ್ಕಾರಗಳು ಅದನ್ನು ನಿವಾರಿಸಲು ಗಮನಹರಿಸಬೇಕು’ ಎಂದು ಸಿಜೆಐ ಹೇಳಿದರು. </p>.<p>ಯಾವುದೇ ಸಿಬ್ಬಂದಿ ಎಸ್ಐಆರ್ ಕರ್ತವ್ಯದಿಂದ ವಿನಾಯಿತಿ ಪಡೆಯಲು ‘ನಿರ್ದಿಷ್ಟ ಕಾರಣ’ ಹೊಂದಿದ್ದರೆ, ಸಕ್ಷಮ ಅಧಿಕಾರಿ ಅದನ್ನು ಪರಿಶೀಲಿಸಿ ಮನವಿಯನ್ನು ಪರಿಗಣಿಸಬಹುದು. ಆ ಸಿಬ್ಬಂದಿಯ ಬದಲಿಗೆ ಇನ್ನೊಬ್ಬರನ್ನು ಅಲ್ಲಿಗೆ ನಿಯೋಜಿಸಬಹುದು ಎಂದು ಪೀಠ ಹೇಳಿದೆ. </p>.<p>ಆಯೋಗವು ಸಿಬ್ಬಂದಿ ವಿರುದ್ಧ ಏಕೆ ಎಫ್ಐಆರ್ಗಳನ್ನು ದಾಖಲಿಸಬೇಕು ಎಂದು ಶಂಕರನಾರಾಯಣ್ ಇದೇ ವೇಳೆ ಕೇಳಿದರು. </p>.<p>ಆಯೋಗದ ಪರ ಹಾಜರಾಗಿದ್ದ ಹಿರಿಯ ವಕೀಲರಾದ ರಾಕೇಶ್ ದ್ವಿವೇದಿ ಮತ್ತು ಮಣೀಂದರ್ ಸಿಂಗ್, ಕರ್ತವ್ಯಗಳನ್ನು ನಿರ್ವಹಿಸಲು ಬಿಎಲ್ಒಗಳು ಹಿಂಜರಿಕೆ ತೋರಿದಾಗ ಮಾತ್ರ ಆಯೋಗ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತದೆ. ಆದರೆ ಇದಕ್ಕೆ ನಿರ್ದಿಷ್ಟ ರಾಜಕೀಯ ನಿರೂಪಣೆ ಸ್ಥಾಪಿಸಲು ಈ ರೀತಿ ವಾದಿಸಲಾಗುತ್ತಿದೆ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣಾ ಕಾರ್ಯಕ್ಕೆ (ಎಸ್ಐಆರ್) ನೇಮಿಸಲಾಗಿರುವ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್ಒ) ಕಾರ್ಯ ಒತ್ತಡ ಕಡಿಮೆಗೊಳಿಸಲು ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವುದನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿದೆ.</p>.<p>ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರ ಪೀಠ ಈ ಕುರಿತು ಸೂಚಿಸಿತು.</p>.<p>‘ನಿಗದಿತ ಅವಧಿಯಲ್ಲಿ ಮುಗಿಸಬೇಕಾದ ಎಸ್ಐಆರ್ನಿಂದ ಬಿಎಲ್ಒಗಳ ಕೆಲಸದ ಒತ್ತಡ ಹೆಚ್ಚಾಗಿದೆ. ಇದನ್ನು ನಿರ್ವಹಿಸಲಾಗದೆ ಕೆಲ ಬಿಎಲ್ಒಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಟಿವಿಕೆ ಅರ್ಜಿಯಲ್ಲಿ ತಿಳಿಸಿದೆ. ಈ ಕರ್ತವ್ಯ ನಿರ್ವಹಿಸಲು ಆಗದ ಸಿಬ್ಬಂದಿ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ (ಆರ್ಪಿ) ಅಡಿ ಕ್ರಮ ತೆಗೆದುಕೊಳ್ಳದಂತೆ ಚುನಾವಣಾ ಆಯೋಗಕ್ಕೆ ಸೂಚಿಸುವಂತೆ ಅರ್ಜಿಯಲ್ಲಿ ಕೋರಿದೆ.</p>.<p>ಟಿವಿಕೆ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ‘ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ವಿವಿಧ ಹಂತದ ಸಿಬ್ಬಂದಿಯನ್ನು ಬಿಎಲ್ಒಗಳಾಗಿ ನೇಮಿಸಲಾಗಿದೆ. ಕರ್ತವ್ಯ ನಿರ್ವಹಿಸಲು ವಿಫಲರಾಗುವ ಬಿಎಲ್ಒಗಳ ವಿರುದ್ಧ ಆಯೋಗ ಎಫ್ಐಆರ್ ದಾಖಲಿಸುತ್ತಿದೆ. ಈ ಎಲ್ಲ ಒತ್ತಡಗಳಿಂದಾಗಿ ಕೆಲ ಬಿಎಲ್ಒಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದರು.</p>.<p>‘ಕೆಲಸದ ಒತ್ತಡ ಕಡಿಮೆ ಮಾಡಲು ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವ ನಿಟ್ಟಿನಲ್ಲಿ ರಾಜ್ಯಗಳು ಕ್ರಮವಹಿಸಬಹುದು. ದೈನಂದಿನ ಕರ್ತವ್ಯಗಳ ಜತೆಗೆ ಹೆಚ್ಚುವರಿ ಕೆಲಸದ ನಿರ್ವಹಣೆಯಿಂದ ಸಿಬ್ಬಂದಿಗೆ ತೊಂದರೆಗಳಾಗುತ್ತಿದ್ದರೆ ಸರ್ಕಾರಗಳು ಅದನ್ನು ನಿವಾರಿಸಲು ಗಮನಹರಿಸಬೇಕು’ ಎಂದು ಸಿಜೆಐ ಹೇಳಿದರು. </p>.<p>ಯಾವುದೇ ಸಿಬ್ಬಂದಿ ಎಸ್ಐಆರ್ ಕರ್ತವ್ಯದಿಂದ ವಿನಾಯಿತಿ ಪಡೆಯಲು ‘ನಿರ್ದಿಷ್ಟ ಕಾರಣ’ ಹೊಂದಿದ್ದರೆ, ಸಕ್ಷಮ ಅಧಿಕಾರಿ ಅದನ್ನು ಪರಿಶೀಲಿಸಿ ಮನವಿಯನ್ನು ಪರಿಗಣಿಸಬಹುದು. ಆ ಸಿಬ್ಬಂದಿಯ ಬದಲಿಗೆ ಇನ್ನೊಬ್ಬರನ್ನು ಅಲ್ಲಿಗೆ ನಿಯೋಜಿಸಬಹುದು ಎಂದು ಪೀಠ ಹೇಳಿದೆ. </p>.<p>ಆಯೋಗವು ಸಿಬ್ಬಂದಿ ವಿರುದ್ಧ ಏಕೆ ಎಫ್ಐಆರ್ಗಳನ್ನು ದಾಖಲಿಸಬೇಕು ಎಂದು ಶಂಕರನಾರಾಯಣ್ ಇದೇ ವೇಳೆ ಕೇಳಿದರು. </p>.<p>ಆಯೋಗದ ಪರ ಹಾಜರಾಗಿದ್ದ ಹಿರಿಯ ವಕೀಲರಾದ ರಾಕೇಶ್ ದ್ವಿವೇದಿ ಮತ್ತು ಮಣೀಂದರ್ ಸಿಂಗ್, ಕರ್ತವ್ಯಗಳನ್ನು ನಿರ್ವಹಿಸಲು ಬಿಎಲ್ಒಗಳು ಹಿಂಜರಿಕೆ ತೋರಿದಾಗ ಮಾತ್ರ ಆಯೋಗ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತದೆ. ಆದರೆ ಇದಕ್ಕೆ ನಿರ್ದಿಷ್ಟ ರಾಜಕೀಯ ನಿರೂಪಣೆ ಸ್ಥಾಪಿಸಲು ಈ ರೀತಿ ವಾದಿಸಲಾಗುತ್ತಿದೆ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>