<p><strong>ರತ್ನಗಿರಿ</strong>: ‘ನೆರೆಹೊರೆಯ ರಾಷ್ಟ್ರಗಳು ಅಶಾಂತಿ ಹಾಗೂ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿರುವಾಗ, ದೇಶವು ಬಲಾಢ್ಯ ಮತ್ತು ಒಗ್ಗಟ್ಟಾಗಿರುವುದನ್ನು ಸಂವಿಧಾನ ಖಚಿತಪಡಿಸಿದೆ’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಭೂಷಣ್ ಗವಾಯಿ ಅವರು ಭಾನುವಾರ ಹೇಳಿದರು.</p>.<p>ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಮಂಡಣಗಡ ತಾಲ್ಲೂಕಿನಲ್ಲಿ ನ್ಯಾಯಾಲಯದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಸಿಜೆಐ, ‘ನಾವು ಆಂತರಿಕ ತುರ್ತು ಪರಿಸ್ಥಿತಿಯನ್ನು ಎದುರಿಸಿದರೂ ಬಲಿಷ್ಠವಾಗಿದ್ದೇವೆ ಹಾಗೂ ಒಂದಾಗಿದ್ದೇವೆ’ ಎಂದರು.</p>.<p>‘ಯುದ್ಧ ಮತ್ತು ಶಾಂತಿಯಲ್ಲಿ ದೇಶವು ಒಗ್ಗಟ್ಟಿನಿಂದ ಹಾಗೂ ಅಭಿವೃದ್ಧಿ ಪಥದಲ್ಲೇ ಉಳಿದಿರುವುದಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಕಾರಣ’ ಎಂದು ಹೇಳಿದರು.</p>.<p>‘ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಈಚೆಗೆ ನೇಪಾಳದಲ್ಲಿ ನಡೆದ ನಾಗರಿಕ ಅಶಾಂತಿಯು ಸರ್ಕಾರಗಳನ್ನೇ ಬದಲಿಸಿದೆ. ಗಲಭೆಯಿಂದ ಭಾರಿ ಹಾನಿಯಾಗಿದೆ’ ಎಂದರು.</p>.<p>‘ಕಳೆದ 22 ವರ್ಷಗಳಲ್ಲಿ ನಾನು ನ್ಯಾಯಾಧೀಶನಾಗಿ, ನ್ಯಾಯಮೂರ್ತಿಯಾಗಿ ನ್ಯಾಯದಾನ ವ್ಯವಸ್ಥೆಯ ವಿಕೇಂದ್ರೀಕರಣದ ಪರವಾಗಿ ನಿಂತಿದ್ದೇನೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಹಲವು ಮೂಲಸೌಕರ್ಯ ಯೋಜನೆಗಳು ಪೂರ್ಣಗೊಳ್ಳುವುದನ್ನು ಖಾತ್ರಿಪಡಿಸಿದ್ದೇನೆ’ ಎಂದು ತಿಳಿಸಿದರು.</p>.<p>‘ಕೊಲ್ಹಾಪುರ ಸರ್ಕ್ಯೂಟ್ ಬೆಂಚ್ (ಬಾಂಬೆ ಹೈಕೋರ್ಟ್) ಮತ್ತು ಮಂಡಣಗಡ ನ್ಯಾಯಾಲಯದ ಕಟ್ಟಡವು ಎರಡು ವರ್ಷದಲ್ಲಿ ಪೂರ್ಣಗೊಂಡಿದೆ. ನಾಸಿಕ್, ನಾಗ್ಪುರ, ಕೊಲ್ಹಾಪುರ, ದರ್ಯಾಪುರದಲ್ಲಿ ಈಚೆಗಷ್ಟೇ ನ್ಯಾಯಾಲಯಗಳ ನೂತನ ಸಂಕೀರ್ಣ ಕಾರ್ಯಾರಂಭ ಮಾಡಿವೆ. ಇವುಗಳ ಗುಣಮಟ್ಟದ ಬಗ್ಗೆ ತೃಪ್ತಿಯಿದೆ’ ಎಂದರು.</p>.<p>‘ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅವರ ಅಂಬಾವಡೆ ಗ್ರಾಮವಿರುವ ಪ್ರದೇಶಕ್ಕೆ ಬಂದಿರುವುದು ಸಂತಸ ತಂದಿದ್ದು, ಈ ನೂತನ ನ್ಯಾಯಾಲಯಗಳು ಅಂಬೇಡ್ಕರ್ ಅವರ ಕನಸಿನಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತ್ವರಿತವಾಗಿ ನ್ಯಾಯ ಒದಗಿಸಲಿವೆ’ ಎಂದು ಹೇಳಿದರು.</p>.<blockquote>ಅಭಿವೃದ್ಧಿ ಪಥದಲ್ಲೇ ಉಳಿದಿರುವ ಭಾರತ ತ್ವರಿತ ನ್ಯಾಯಕ್ಕಾಗಿ ಹೊಸ ನ್ಯಾಯಾಲಯಗಳು 22 ವರ್ಷದಿಂದಲೂ ವಿಕೇಂದ್ರೀಕರಣದ ಪರ</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರತ್ನಗಿರಿ</strong>: ‘ನೆರೆಹೊರೆಯ ರಾಷ್ಟ್ರಗಳು ಅಶಾಂತಿ ಹಾಗೂ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿರುವಾಗ, ದೇಶವು ಬಲಾಢ್ಯ ಮತ್ತು ಒಗ್ಗಟ್ಟಾಗಿರುವುದನ್ನು ಸಂವಿಧಾನ ಖಚಿತಪಡಿಸಿದೆ’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಭೂಷಣ್ ಗವಾಯಿ ಅವರು ಭಾನುವಾರ ಹೇಳಿದರು.</p>.<p>ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಮಂಡಣಗಡ ತಾಲ್ಲೂಕಿನಲ್ಲಿ ನ್ಯಾಯಾಲಯದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಸಿಜೆಐ, ‘ನಾವು ಆಂತರಿಕ ತುರ್ತು ಪರಿಸ್ಥಿತಿಯನ್ನು ಎದುರಿಸಿದರೂ ಬಲಿಷ್ಠವಾಗಿದ್ದೇವೆ ಹಾಗೂ ಒಂದಾಗಿದ್ದೇವೆ’ ಎಂದರು.</p>.<p>‘ಯುದ್ಧ ಮತ್ತು ಶಾಂತಿಯಲ್ಲಿ ದೇಶವು ಒಗ್ಗಟ್ಟಿನಿಂದ ಹಾಗೂ ಅಭಿವೃದ್ಧಿ ಪಥದಲ್ಲೇ ಉಳಿದಿರುವುದಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಕಾರಣ’ ಎಂದು ಹೇಳಿದರು.</p>.<p>‘ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಈಚೆಗೆ ನೇಪಾಳದಲ್ಲಿ ನಡೆದ ನಾಗರಿಕ ಅಶಾಂತಿಯು ಸರ್ಕಾರಗಳನ್ನೇ ಬದಲಿಸಿದೆ. ಗಲಭೆಯಿಂದ ಭಾರಿ ಹಾನಿಯಾಗಿದೆ’ ಎಂದರು.</p>.<p>‘ಕಳೆದ 22 ವರ್ಷಗಳಲ್ಲಿ ನಾನು ನ್ಯಾಯಾಧೀಶನಾಗಿ, ನ್ಯಾಯಮೂರ್ತಿಯಾಗಿ ನ್ಯಾಯದಾನ ವ್ಯವಸ್ಥೆಯ ವಿಕೇಂದ್ರೀಕರಣದ ಪರವಾಗಿ ನಿಂತಿದ್ದೇನೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಹಲವು ಮೂಲಸೌಕರ್ಯ ಯೋಜನೆಗಳು ಪೂರ್ಣಗೊಳ್ಳುವುದನ್ನು ಖಾತ್ರಿಪಡಿಸಿದ್ದೇನೆ’ ಎಂದು ತಿಳಿಸಿದರು.</p>.<p>‘ಕೊಲ್ಹಾಪುರ ಸರ್ಕ್ಯೂಟ್ ಬೆಂಚ್ (ಬಾಂಬೆ ಹೈಕೋರ್ಟ್) ಮತ್ತು ಮಂಡಣಗಡ ನ್ಯಾಯಾಲಯದ ಕಟ್ಟಡವು ಎರಡು ವರ್ಷದಲ್ಲಿ ಪೂರ್ಣಗೊಂಡಿದೆ. ನಾಸಿಕ್, ನಾಗ್ಪುರ, ಕೊಲ್ಹಾಪುರ, ದರ್ಯಾಪುರದಲ್ಲಿ ಈಚೆಗಷ್ಟೇ ನ್ಯಾಯಾಲಯಗಳ ನೂತನ ಸಂಕೀರ್ಣ ಕಾರ್ಯಾರಂಭ ಮಾಡಿವೆ. ಇವುಗಳ ಗುಣಮಟ್ಟದ ಬಗ್ಗೆ ತೃಪ್ತಿಯಿದೆ’ ಎಂದರು.</p>.<p>‘ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅವರ ಅಂಬಾವಡೆ ಗ್ರಾಮವಿರುವ ಪ್ರದೇಶಕ್ಕೆ ಬಂದಿರುವುದು ಸಂತಸ ತಂದಿದ್ದು, ಈ ನೂತನ ನ್ಯಾಯಾಲಯಗಳು ಅಂಬೇಡ್ಕರ್ ಅವರ ಕನಸಿನಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತ್ವರಿತವಾಗಿ ನ್ಯಾಯ ಒದಗಿಸಲಿವೆ’ ಎಂದು ಹೇಳಿದರು.</p>.<blockquote>ಅಭಿವೃದ್ಧಿ ಪಥದಲ್ಲೇ ಉಳಿದಿರುವ ಭಾರತ ತ್ವರಿತ ನ್ಯಾಯಕ್ಕಾಗಿ ಹೊಸ ನ್ಯಾಯಾಲಯಗಳು 22 ವರ್ಷದಿಂದಲೂ ವಿಕೇಂದ್ರೀಕರಣದ ಪರ</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>