ಆಡಳಿತಾರೂಢ ಬಿಜೆಪಿಯು ರಾಮನ ಹೆಸರಿನಲ್ಲಿ ನಾಥೂರಾಮ್ನ ಕೋಮುವಾದಿ ಕಾರ್ಯಸೂಚಿಯನ್ನು ಪ್ರಚಾರ ಮಾಡುತ್ತಿದೆ. ವ್ಯಕ್ತಿವಾದವು ಪರಿವಾರವಾದಕ್ಕಿಂತಲೂ ಹೆಚ್ಚು ಅಪಾಯಕಾರಿ. ಗಾಂಧಿ–ನೆಹರೂ ಕುಟುಂಬದ ಕೊಡುಗೆಗಳನ್ನು ಕಡೆಗಣಿಸುವ ಯತ್ನ ನಡೆಯುತ್ತಿದೆ. ಬಿಜೆಪಿಯು ಹಿಂದೂ ಧರ್ಮದ ಹಿರಿಮೆಗೆ ಚ್ಯುತಿ ತರಲು ಯತ್ನಿಸುತ್ತಿದೆ. ರಾಮನ ಪರಿಕಲ್ಪನೆಯಲ್ಲಿ ದ್ವೇಷಕ್ಕೆ ಸ್ಥಾನವಿಲ್ಲ. ಬಿಜೆಪಿಯು ರಾಮನನ್ನು ನಂಬುವ ಜನರಿಗೆ ಮೋಸ ಮಾಡುತ್ತಿದೆ