<p><strong>ಚೆನ್ನೈ:</strong> ಸಮುದ್ರ ಮಟ್ಟ ಏರಿಕೆಯಿಂದ ಹಾನಿಗೀಡಾಗಬಹುದಾದ ಕರಾವಳಿಯ ಜೈವಿಕ ಆವಾಸಸ್ಥಾನಗಳ ರಕ್ಷಣೆ ಮತ್ತು ಕಡಲ ಕೊರೆತ ತಪ್ಪಿಸಲು ಕುಡ್ಡಲೂರು ಮತ್ತು ತೂತುಕುಡಿ ಜಿಲ್ಲೆಗಳಲ್ಲಿ ಆರು ಲಕ್ಷ ಮ್ಯಾಂಗ್ರೂ ಸಸಿಗಳನ್ನು ನೆಡಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ.</p><p>ಹವಾಮಾನ ಬದಲಾವಣೆಗಾಗಿ TN-SHORE ಎಂಬ ಈ ಯೋಜನೆಯಲ್ಲಿ ಕರಾವಳಿ ಪ್ರದೇಶದಲ್ಲಿ ಜೈವಿಕ ಕವಚ ರಚಿಸಲು ₹25 ಕೋಟಿ ಮೀಸಲಿಡಲಾಗಿದೆ ಎಂದು ಸರ್ಕಾರ ಹೇಳಿದೆ.</p><p>ಹೊಸದಾಗಿ ಮ್ಯಾಂಗ್ರೂ ಗಿಡಗಳನ್ನು ನೆಡಲು 2,436 ಹೆಕ್ಟೇರ್ ಪ್ರದೇಶವನ್ನು ಸರ್ಕಾರ ಗುರುತಿಸಿದೆ. 1,207 ಹೆಕ್ಟೇರ್ನಲ್ಲಿ ಈ ಹಿಂದೆ ನಾಶವಾಗಿದ್ದ ಮ್ಯಾಂಗ್ರೂ ಕಾಡುಗಳನ್ನು ಮರುಸ್ಥಾಪಿಸಲಾಗಿದೆ. ಇದಕ್ಕಾಗಿ ಗ್ರಾಮ ಮಟ್ಟದ ಮ್ಯಾಂಗ್ರೂ ಸಮಿತಿಗಳು, ಸ್ಥಳೀಯ ಸಮುದಾಯದ ನೆರವು ಪಡೆಯಲಾಗಿದೆ ಎಂದು ಸರ್ಕಾರ ಹೇಳಿದೆ. </p><p>ವಿಶ್ವ ಮ್ಯಾಂಗ್ರೂ ದಿನವಾದ ಶನಿವಾರ (ಜುಲೈ 26) ಅಡಯಾರ್ ಎಸ್ಟುರಿ ಎಂಬ ಪ್ರದೇಶದಲ್ಲಿ ಮ್ಯಾಂಗ್ರೂ ಗಿಡಗಳನ್ನು ನೆಟ್ಟು ಹಣಕಾಸು ಹಾಗೂ ಪರಿಸರ ಸಚಿವ ತಂಗಮ್ ತೆನ್ನರಸು ಈ ಅಭಿಯಾನಕ್ಕೆ ಚಾಲನೆ ನೀಡಿದರು.</p><p>‘ಭವಿಷ್ಯಕ್ಕಾಗಿ ಜೌಗುಪ್ರದೇಶವನ್ನು ಉಳಿಸಿಕೊಳ್ಳುವುದು’ 2025ರ ವಿಶ್ವ ಮ್ಯಾಂಗ್ರೂ ಅರಣ್ಯ ದಿನದ ಸಂದೇಶವಾಗಿದೆ. ಸುಸ್ಥಿರ ಭವಿಷ್ಯಕ್ಕಾಗಿ ನಿಸರ್ಗವೇ ನೀಡಿದ ಮಾರ್ಗೋಪಾಯವೇ ಮ್ಯಾಂಗ್ರೂ ಅರಣ್ಯ. ಇಂಗಾಲದ ಶೇಖರಣೆಯಲ್ಲಿ ಇದು ಅತ್ಯಂತ ಪರಿಣಾಮಕಾರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ಸಮುದ್ರ ಮಟ್ಟ ಏರಿಕೆಯಿಂದ ಹಾನಿಗೀಡಾಗಬಹುದಾದ ಕರಾವಳಿಯ ಜೈವಿಕ ಆವಾಸಸ್ಥಾನಗಳ ರಕ್ಷಣೆ ಮತ್ತು ಕಡಲ ಕೊರೆತ ತಪ್ಪಿಸಲು ಕುಡ್ಡಲೂರು ಮತ್ತು ತೂತುಕುಡಿ ಜಿಲ್ಲೆಗಳಲ್ಲಿ ಆರು ಲಕ್ಷ ಮ್ಯಾಂಗ್ರೂ ಸಸಿಗಳನ್ನು ನೆಡಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ.</p><p>ಹವಾಮಾನ ಬದಲಾವಣೆಗಾಗಿ TN-SHORE ಎಂಬ ಈ ಯೋಜನೆಯಲ್ಲಿ ಕರಾವಳಿ ಪ್ರದೇಶದಲ್ಲಿ ಜೈವಿಕ ಕವಚ ರಚಿಸಲು ₹25 ಕೋಟಿ ಮೀಸಲಿಡಲಾಗಿದೆ ಎಂದು ಸರ್ಕಾರ ಹೇಳಿದೆ.</p><p>ಹೊಸದಾಗಿ ಮ್ಯಾಂಗ್ರೂ ಗಿಡಗಳನ್ನು ನೆಡಲು 2,436 ಹೆಕ್ಟೇರ್ ಪ್ರದೇಶವನ್ನು ಸರ್ಕಾರ ಗುರುತಿಸಿದೆ. 1,207 ಹೆಕ್ಟೇರ್ನಲ್ಲಿ ಈ ಹಿಂದೆ ನಾಶವಾಗಿದ್ದ ಮ್ಯಾಂಗ್ರೂ ಕಾಡುಗಳನ್ನು ಮರುಸ್ಥಾಪಿಸಲಾಗಿದೆ. ಇದಕ್ಕಾಗಿ ಗ್ರಾಮ ಮಟ್ಟದ ಮ್ಯಾಂಗ್ರೂ ಸಮಿತಿಗಳು, ಸ್ಥಳೀಯ ಸಮುದಾಯದ ನೆರವು ಪಡೆಯಲಾಗಿದೆ ಎಂದು ಸರ್ಕಾರ ಹೇಳಿದೆ. </p><p>ವಿಶ್ವ ಮ್ಯಾಂಗ್ರೂ ದಿನವಾದ ಶನಿವಾರ (ಜುಲೈ 26) ಅಡಯಾರ್ ಎಸ್ಟುರಿ ಎಂಬ ಪ್ರದೇಶದಲ್ಲಿ ಮ್ಯಾಂಗ್ರೂ ಗಿಡಗಳನ್ನು ನೆಟ್ಟು ಹಣಕಾಸು ಹಾಗೂ ಪರಿಸರ ಸಚಿವ ತಂಗಮ್ ತೆನ್ನರಸು ಈ ಅಭಿಯಾನಕ್ಕೆ ಚಾಲನೆ ನೀಡಿದರು.</p><p>‘ಭವಿಷ್ಯಕ್ಕಾಗಿ ಜೌಗುಪ್ರದೇಶವನ್ನು ಉಳಿಸಿಕೊಳ್ಳುವುದು’ 2025ರ ವಿಶ್ವ ಮ್ಯಾಂಗ್ರೂ ಅರಣ್ಯ ದಿನದ ಸಂದೇಶವಾಗಿದೆ. ಸುಸ್ಥಿರ ಭವಿಷ್ಯಕ್ಕಾಗಿ ನಿಸರ್ಗವೇ ನೀಡಿದ ಮಾರ್ಗೋಪಾಯವೇ ಮ್ಯಾಂಗ್ರೂ ಅರಣ್ಯ. ಇಂಗಾಲದ ಶೇಖರಣೆಯಲ್ಲಿ ಇದು ಅತ್ಯಂತ ಪರಿಣಾಮಕಾರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>