<p><strong>ನಾಗರ್ಕರ್ನೂಲ್ (ತೆಲಂಗಾಣ)</strong>: ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಶ್ರೀಶೈಲಂ ಎಡದಂಡೆ ಕಾಲುವೆ ಕುಸಿದು, ಅವಶೇಷಗಳ ಅಡಿ ಸಿಲುಕಿರುವ ಏಳು ಮಂದಿಯ ಪತ್ತೆಗೆ ಶೋಧ ಕಾರ್ಯ ನಿರಂತರವಾಗಿ ಸಾಗಿದೆ. </p>.<p>ರಕ್ಷಣಾ ತಂಡಗಳ ಇನ್ನಷ್ಟು ಸದಸ್ಯರು ಅಗತ್ಯ ಸಲಕರಣೆಗಳೊಂದಿಗೆ ಭಾನುವಾರ ಸುರಂಗದೊಳಗೆ ತೆರಳಿರುವುದರಿಂದ ಶೋಧ ಕಾರ್ಯ ವೇಗ ಪಡೆದುಕೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.</p>.<p class="bodytext">ಹೈಡ್ರಾಲಿಕ್ ಚಾಲಿತ ರೋಬಾಟ್ಅನ್ನು ಕಾರ್ಯಾಚರಣೆಗೆ ಬಳಸಿರುವುದರಿಂದ ಮಣ್ಣು ಹಾಗೂ ಇತರ ಅವಶೇಷಗಳ ತೆರವುಗೊಳಿಸುವ ಪ್ರಕ್ರಿಯೆಗೆ ಇನ್ನಷ್ಟು ವೇಗ ಲಭಿಸಿದೆ. </p>.<p class="bodytext">ಫೆ. 22ರಂದು ಸುರಂಗ ಭಾಗಶಃ ಕುಸಿದ ಪರಿಣಾಮ ಎಂಟು ಮಂದಿ ಒಳಗೆ ಸಿಲುಕಿದ್ದರು. ಅದರಲ್ಲಿ ಗುರುಪ್ರೀತ್ ಸಿಂಗ್ ಎಂಬವರ ಮೃತದೇಹ ಮಾರ್ಚ್ 9ರಂದು ಪತ್ತೆಯಾಗಿತ್ತು. ಸೇನೆ, ಎನ್ಡಿಆರ್ಎಫ್, ಎಚ್ಆರ್ಡಿಡಿ ಮತ್ತು ಸಿಂಗರೇನಿ ಕಾಲಿಯೆರೀಸ್ ಸಂಸ್ಥೆಯ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗರ್ಕರ್ನೂಲ್ (ತೆಲಂಗಾಣ)</strong>: ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಶ್ರೀಶೈಲಂ ಎಡದಂಡೆ ಕಾಲುವೆ ಕುಸಿದು, ಅವಶೇಷಗಳ ಅಡಿ ಸಿಲುಕಿರುವ ಏಳು ಮಂದಿಯ ಪತ್ತೆಗೆ ಶೋಧ ಕಾರ್ಯ ನಿರಂತರವಾಗಿ ಸಾಗಿದೆ. </p>.<p>ರಕ್ಷಣಾ ತಂಡಗಳ ಇನ್ನಷ್ಟು ಸದಸ್ಯರು ಅಗತ್ಯ ಸಲಕರಣೆಗಳೊಂದಿಗೆ ಭಾನುವಾರ ಸುರಂಗದೊಳಗೆ ತೆರಳಿರುವುದರಿಂದ ಶೋಧ ಕಾರ್ಯ ವೇಗ ಪಡೆದುಕೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.</p>.<p class="bodytext">ಹೈಡ್ರಾಲಿಕ್ ಚಾಲಿತ ರೋಬಾಟ್ಅನ್ನು ಕಾರ್ಯಾಚರಣೆಗೆ ಬಳಸಿರುವುದರಿಂದ ಮಣ್ಣು ಹಾಗೂ ಇತರ ಅವಶೇಷಗಳ ತೆರವುಗೊಳಿಸುವ ಪ್ರಕ್ರಿಯೆಗೆ ಇನ್ನಷ್ಟು ವೇಗ ಲಭಿಸಿದೆ. </p>.<p class="bodytext">ಫೆ. 22ರಂದು ಸುರಂಗ ಭಾಗಶಃ ಕುಸಿದ ಪರಿಣಾಮ ಎಂಟು ಮಂದಿ ಒಳಗೆ ಸಿಲುಕಿದ್ದರು. ಅದರಲ್ಲಿ ಗುರುಪ್ರೀತ್ ಸಿಂಗ್ ಎಂಬವರ ಮೃತದೇಹ ಮಾರ್ಚ್ 9ರಂದು ಪತ್ತೆಯಾಗಿತ್ತು. ಸೇನೆ, ಎನ್ಡಿಆರ್ಎಫ್, ಎಚ್ಆರ್ಡಿಡಿ ಮತ್ತು ಸಿಂಗರೇನಿ ಕಾಲಿಯೆರೀಸ್ ಸಂಸ್ಥೆಯ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>