<p><strong>ನಾಗರಕರ್ನೂಲ್ (ತೆಲಂಗಾಣ):</strong> ಭಾಗಶಃ ಕುಸಿದಿರುವ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್ಎಲ್ಬಿಸಿ) ಸುರಂಗದಡಿ ಸಿಲುಕಿರುವ 7 ಮಂದಿಯನ್ನು ಪತ್ತೆಹಚ್ಚುವ ಕಾರ್ಯಾಚರಣೆ 21ನೇ ದಿನವೂ ತ್ವರಿತ ಗತಿಯಲ್ಲಿ ಮುಂದುವರಿದಿದೆ. </p><p>ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ವಿವಿಧ ಸಂಸ್ಥೆಗಳ ಸಿಬ್ಬಂದಿ, ಇಂದು (ಶುಕ್ರವಾರ) ಮುಂಜಾನೆ ಅಗತ್ಯ ಉಪಕರಣಗಳೊಂದಿಗೆ ಸುರಂಗದೊಳಗೆ ಹೋಗಿ ಶೋಧ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p><p>ದಿನದ 24 ತಾಸಿನಲ್ಲಿಯೂ ಶೋಧ ಕಾರ್ಯ ನಡೆಯುತ್ತಿದೆ. </p><p>ನಾಪತ್ತೆಯಾಗಿರುವ ವ್ಯಕ್ತಿಗಳು ಇರಬಹುದೆಂದು ಶಂಕಿಸಲಾದ ಸ್ಥಳಗಳಲ್ಲಿ ಸರ್ಕಾರಿ ಸ್ವಾಮ್ಯದ ಸಿಂಗರೇನಿ ಕೊಲಿಯೆರಿಸ್ ಕಂಪನಿಯ ರಕ್ಷಣಾ ಸಿಬ್ಬಂದಿ ಹಾಗೂ ರ್ಯಾಟ್ ಮೈನರ್ಗಳು ಅಗೆಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. </p><p>ಕೇರಳ ಪೊಲೀಸರ ಶ್ವಾನ ದಳ (ಎಚ್ಆರ್ಡಿಡಿ) ಮತ್ತು ಹೈದರಾಬಾದ್ ಮೂಲದ ರೋಬೊಟಿಕ್ಸ್ ಕಂಪನಿಯ ತಂಡವೂ ರೋಬೊಗಳ ಸಹಾಯದಿಂದ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. </p>. <p>ಮನುಷ್ಯರಿಗೆ ತಲುಪಲು ಸಾಧ್ಯವಾಗದ ಸ್ಥಳಗಳಲ್ಲಿ 15 ಪಟ್ಟು ನಿಖರತೆಯೊಂದಿಗೆ ರೋಬೊಗಳು ಕೆಲಸ ಮಾಡಬಲ್ಲವು ಎಂದು ಅಧಿಕೃತ ಮೂಲಗಳು ತಿಳಿಸಿವೆ. </p><p>ಸೇನೆ, ಎನ್ಡಿಆರ್ಎಫ್, ಎಸ್ಡಿಆರ್ಎಫ್, ಎಚ್ಆರ್ಡಿಡಿ, ಸಿಂಗರೇನಿ ಕೊಲಿಯೆರಿಸ್ ಮತ್ತು ಹೈದರಾಬಾದ್ನ ರೋಬೊಟಿಕ್ಸ್ ಕಂಪನಿಯು ರಕ್ಷಣಾ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿವೆ.</p><p>ಫೆಬ್ರುವರಿ 22ರಂದು ನಡೆದ ಅವಘಡದಲ್ಲಿ ಎಂಜಿನಿಯರ್, ಕಾರ್ಮಿಕರು ಸೇರಿದಂತೆ ಎಂಟು ಮಂದಿ ಸಿಲುಕಿಕೊಂಡಿದ್ದರು. ಮಾರ್ಚ್ 9ರಂದು ಟಿಬಿಎಂ ಆಪರೇಟರ್ ಪಂಜಾಬ್ ಮೂಲದ ಗುರ್ಪ್ರೀತ್ ಸಿಂಗ್ ಅವರ ಮೃತದೇಹವನ್ನು ಪತ್ತೆ ಹಚ್ಚಲಾಗಿತ್ತು. ಬಳಿಕ ಅವರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. </p>.ತೆಲಂಗಾಣ ಸುರಂಗ ಕುಸಿತ | ಶೋಧ ಕಾರ್ಯಾಚರಣೆಗೆ ರೋಬೊಗಳು ಸಾಥ್ .ತೆಲಂಗಾಣ ಸುರಂಗ ಕುಸಿತ: ರಕ್ಷಣಾ ಕಾರ್ಯಕ್ಕೆ ರೋಬೊ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗರಕರ್ನೂಲ್ (ತೆಲಂಗಾಣ):</strong> ಭಾಗಶಃ ಕುಸಿದಿರುವ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್ಎಲ್ಬಿಸಿ) ಸುರಂಗದಡಿ ಸಿಲುಕಿರುವ 7 ಮಂದಿಯನ್ನು ಪತ್ತೆಹಚ್ಚುವ ಕಾರ್ಯಾಚರಣೆ 21ನೇ ದಿನವೂ ತ್ವರಿತ ಗತಿಯಲ್ಲಿ ಮುಂದುವರಿದಿದೆ. </p><p>ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ವಿವಿಧ ಸಂಸ್ಥೆಗಳ ಸಿಬ್ಬಂದಿ, ಇಂದು (ಶುಕ್ರವಾರ) ಮುಂಜಾನೆ ಅಗತ್ಯ ಉಪಕರಣಗಳೊಂದಿಗೆ ಸುರಂಗದೊಳಗೆ ಹೋಗಿ ಶೋಧ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p><p>ದಿನದ 24 ತಾಸಿನಲ್ಲಿಯೂ ಶೋಧ ಕಾರ್ಯ ನಡೆಯುತ್ತಿದೆ. </p><p>ನಾಪತ್ತೆಯಾಗಿರುವ ವ್ಯಕ್ತಿಗಳು ಇರಬಹುದೆಂದು ಶಂಕಿಸಲಾದ ಸ್ಥಳಗಳಲ್ಲಿ ಸರ್ಕಾರಿ ಸ್ವಾಮ್ಯದ ಸಿಂಗರೇನಿ ಕೊಲಿಯೆರಿಸ್ ಕಂಪನಿಯ ರಕ್ಷಣಾ ಸಿಬ್ಬಂದಿ ಹಾಗೂ ರ್ಯಾಟ್ ಮೈನರ್ಗಳು ಅಗೆಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. </p><p>ಕೇರಳ ಪೊಲೀಸರ ಶ್ವಾನ ದಳ (ಎಚ್ಆರ್ಡಿಡಿ) ಮತ್ತು ಹೈದರಾಬಾದ್ ಮೂಲದ ರೋಬೊಟಿಕ್ಸ್ ಕಂಪನಿಯ ತಂಡವೂ ರೋಬೊಗಳ ಸಹಾಯದಿಂದ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. </p>. <p>ಮನುಷ್ಯರಿಗೆ ತಲುಪಲು ಸಾಧ್ಯವಾಗದ ಸ್ಥಳಗಳಲ್ಲಿ 15 ಪಟ್ಟು ನಿಖರತೆಯೊಂದಿಗೆ ರೋಬೊಗಳು ಕೆಲಸ ಮಾಡಬಲ್ಲವು ಎಂದು ಅಧಿಕೃತ ಮೂಲಗಳು ತಿಳಿಸಿವೆ. </p><p>ಸೇನೆ, ಎನ್ಡಿಆರ್ಎಫ್, ಎಸ್ಡಿಆರ್ಎಫ್, ಎಚ್ಆರ್ಡಿಡಿ, ಸಿಂಗರೇನಿ ಕೊಲಿಯೆರಿಸ್ ಮತ್ತು ಹೈದರಾಬಾದ್ನ ರೋಬೊಟಿಕ್ಸ್ ಕಂಪನಿಯು ರಕ್ಷಣಾ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿವೆ.</p><p>ಫೆಬ್ರುವರಿ 22ರಂದು ನಡೆದ ಅವಘಡದಲ್ಲಿ ಎಂಜಿನಿಯರ್, ಕಾರ್ಮಿಕರು ಸೇರಿದಂತೆ ಎಂಟು ಮಂದಿ ಸಿಲುಕಿಕೊಂಡಿದ್ದರು. ಮಾರ್ಚ್ 9ರಂದು ಟಿಬಿಎಂ ಆಪರೇಟರ್ ಪಂಜಾಬ್ ಮೂಲದ ಗುರ್ಪ್ರೀತ್ ಸಿಂಗ್ ಅವರ ಮೃತದೇಹವನ್ನು ಪತ್ತೆ ಹಚ್ಚಲಾಗಿತ್ತು. ಬಳಿಕ ಅವರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. </p>.ತೆಲಂಗಾಣ ಸುರಂಗ ಕುಸಿತ | ಶೋಧ ಕಾರ್ಯಾಚರಣೆಗೆ ರೋಬೊಗಳು ಸಾಥ್ .ತೆಲಂಗಾಣ ಸುರಂಗ ಕುಸಿತ: ರಕ್ಷಣಾ ಕಾರ್ಯಕ್ಕೆ ರೋಬೊ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>