<p><strong>ಶ್ರೀನಗರ</strong>: ಜಮ್ಮು–ಕಾಶ್ಮೀರದ ವಿವಿಧೆಡೆ ಸ್ಥಳೀಯರ ಮನೆಗಳಲ್ಲಿ ಆಶ್ರಯ ಪಡೆದು ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿದ್ದ ಉಗ್ರ ಸಂಘಟನೆಗಳು ಈಗ ತಮ್ಮ ಕಾರ್ಯತಂತ್ರ ಬದಲಿಸಿವೆ. ಎತ್ತರ ಪ್ರದೇಶಗಳು ಹಾಗೂ ದಟ್ಟ ಕಾಡುಗಳಲ್ಲಿ ನೆಲದಡಿ ಬಂಕರ್ಗಳನ್ನು ನಿರ್ಮಿಸಿ, ಉಗ್ರರು ತಮ್ಮ ಚಟುವಟಿಕೆ ಮುಂದುವರಿಸುತ್ತಿರುವುದು ಸೇನೆಗೆ ಹೊಸ ಸವಾಲಾಗಿದೆ.</p>.<p>ಕಳೆದ ವಾರ ಕುಲ್ಗಾಮ್ ಜಿಲ್ಲೆಯಲ್ಲಿ ಭೀಕರ ಗುಂಡಿನ ಚಕಮಕಿ ನಡೆದು, ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ವೇಳೆ, ಇದು ಗೊತ್ತಾಗಿದೆ.</p>.<p>ಸ್ಥಳೀಯರು ಆಶ್ರಯ ನೀಡಲು ನಿರಾಕರಿಸುತ್ತಿರುವುದೇ ಉಗ್ರರು ತಮ್ಮ ಕಾರ್ಯತಂತ್ರಗಳನ್ನು ಬದಲಿಸಲು ಮುಖ್ಯ ಕಾರಣ ಎಂದು ಸೇನೆ ಹಾಗೂ ಇತರ ಭದ್ರತಾ ಸಂಸ್ಥೆಗಳ ವಿಶ್ಲೇಷಣೆಯಾಗಿದೆ.</p>.<p>ಕುಲ್ಗಾಮ್ ಜಿಲ್ಲೆಯಲ್ಲಿ ಉಗ್ರರ ಬೇಟೆಯನ್ನು ತೀವ್ರಗೊಳಿಸಿದ ಭದ್ರತಾ ಪಡೆಗಳಿಗೆ ಅಚ್ಚರಿ ಕಾದಿತ್ತು. ದಟ್ಟ ಕಾಡಿನಲ್ಲಿ ದೊಡ್ಡ ಕಂದಕಗಳು ಕಂಡುಬಂದಿದ್ದವು. ಅವುಗಳಲ್ಲಿ, ದಿನಸಿ ಪದಾರ್ಥಗಳು, ಗ್ಯಾಸ್ ಸ್ಟೌಗಳು, ಪ್ರೆಷರ್ ಕುಕ್ಕರ್ಗಳು ಹಾಗೂ ಶಸ್ತ್ರಾಸ್ತ್ರಗಳು ಕಂಡುಬಂದವು.</p>.<p>‘ಉಗ್ರರು ಕಾಡುಗಳಲ್ಲಿ ಇಂತಹ ನೆಲೆಗಳನ್ನು ಮಾಡುತ್ತಿರುವುದು ವ್ಯಾಪಕವಾಗುತ್ತಿದೆ. ಅದರಲ್ಲೂ, ಕುಲ್ಗಾಮ್, ಶೋಪಿಯಾನ್ ಜಿಲ್ಲೆಗಳು, ಜಮ್ಮು ಪ್ರದೇಶದ ಪೀರ್ ಪಂಜಾಲ್ನಲ್ಲಿರುವ ದಟ್ಟ ಕಾಡುಗಳು ಗುಪ್ತವಾಗಿ ತಮ್ಮ ಚಟುವಟಿಕೆಗಳನ್ನು ನಡೆಸಲು ಉಗ್ರರಿಗೆ ಅನುಕೂಲವಾದ ತಾಣಗಳೆಸಿವೆ’ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಹೇಳುತ್ತಾರೆ.</p>.<div><blockquote>ಎತ್ತರದ ಪ್ರದೇಶಗಳಲ್ಲಿನ ಕಂದಕಗಳಲ್ಲಿ ಉಗ್ರರು 1990 ಹಾಗೂ 2000 ಇಸ್ಟಿ ನಡುವೆ ಅಡಗುತಾಣಗಳನ್ನು ನಿರ್ಮಿಸುವುದು ಸಾಮಾನ್ಯವಾಗಿತ್ತು. ಈಗ ಮತ್ತೆ ಅದೇ ತಂತ್ರಕ್ಕೆ ಮೊರೆ ಹೋಗುತ್ತಿದ್ದಾರೆ. ಈ ಹೊಸ ಸವಾಲು ಎದುರಿಸಲು ಸೇನೆ ಕೂಡ ತನ್ನ ಕಾರ್ಯತಂತ್ರ ಬದಲಿಸುವುದು ಖಚಿತ </blockquote><span class="attribution">ಡಿ.ಎಸ್.ಹೂಡಾ ಲೆಫ್ಟಿನೆಂಟ್ ಜನರಲ್(ನಿವೃತ್ತ)</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ</strong>: ಜಮ್ಮು–ಕಾಶ್ಮೀರದ ವಿವಿಧೆಡೆ ಸ್ಥಳೀಯರ ಮನೆಗಳಲ್ಲಿ ಆಶ್ರಯ ಪಡೆದು ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿದ್ದ ಉಗ್ರ ಸಂಘಟನೆಗಳು ಈಗ ತಮ್ಮ ಕಾರ್ಯತಂತ್ರ ಬದಲಿಸಿವೆ. ಎತ್ತರ ಪ್ರದೇಶಗಳು ಹಾಗೂ ದಟ್ಟ ಕಾಡುಗಳಲ್ಲಿ ನೆಲದಡಿ ಬಂಕರ್ಗಳನ್ನು ನಿರ್ಮಿಸಿ, ಉಗ್ರರು ತಮ್ಮ ಚಟುವಟಿಕೆ ಮುಂದುವರಿಸುತ್ತಿರುವುದು ಸೇನೆಗೆ ಹೊಸ ಸವಾಲಾಗಿದೆ.</p>.<p>ಕಳೆದ ವಾರ ಕುಲ್ಗಾಮ್ ಜಿಲ್ಲೆಯಲ್ಲಿ ಭೀಕರ ಗುಂಡಿನ ಚಕಮಕಿ ನಡೆದು, ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ವೇಳೆ, ಇದು ಗೊತ್ತಾಗಿದೆ.</p>.<p>ಸ್ಥಳೀಯರು ಆಶ್ರಯ ನೀಡಲು ನಿರಾಕರಿಸುತ್ತಿರುವುದೇ ಉಗ್ರರು ತಮ್ಮ ಕಾರ್ಯತಂತ್ರಗಳನ್ನು ಬದಲಿಸಲು ಮುಖ್ಯ ಕಾರಣ ಎಂದು ಸೇನೆ ಹಾಗೂ ಇತರ ಭದ್ರತಾ ಸಂಸ್ಥೆಗಳ ವಿಶ್ಲೇಷಣೆಯಾಗಿದೆ.</p>.<p>ಕುಲ್ಗಾಮ್ ಜಿಲ್ಲೆಯಲ್ಲಿ ಉಗ್ರರ ಬೇಟೆಯನ್ನು ತೀವ್ರಗೊಳಿಸಿದ ಭದ್ರತಾ ಪಡೆಗಳಿಗೆ ಅಚ್ಚರಿ ಕಾದಿತ್ತು. ದಟ್ಟ ಕಾಡಿನಲ್ಲಿ ದೊಡ್ಡ ಕಂದಕಗಳು ಕಂಡುಬಂದಿದ್ದವು. ಅವುಗಳಲ್ಲಿ, ದಿನಸಿ ಪದಾರ್ಥಗಳು, ಗ್ಯಾಸ್ ಸ್ಟೌಗಳು, ಪ್ರೆಷರ್ ಕುಕ್ಕರ್ಗಳು ಹಾಗೂ ಶಸ್ತ್ರಾಸ್ತ್ರಗಳು ಕಂಡುಬಂದವು.</p>.<p>‘ಉಗ್ರರು ಕಾಡುಗಳಲ್ಲಿ ಇಂತಹ ನೆಲೆಗಳನ್ನು ಮಾಡುತ್ತಿರುವುದು ವ್ಯಾಪಕವಾಗುತ್ತಿದೆ. ಅದರಲ್ಲೂ, ಕುಲ್ಗಾಮ್, ಶೋಪಿಯಾನ್ ಜಿಲ್ಲೆಗಳು, ಜಮ್ಮು ಪ್ರದೇಶದ ಪೀರ್ ಪಂಜಾಲ್ನಲ್ಲಿರುವ ದಟ್ಟ ಕಾಡುಗಳು ಗುಪ್ತವಾಗಿ ತಮ್ಮ ಚಟುವಟಿಕೆಗಳನ್ನು ನಡೆಸಲು ಉಗ್ರರಿಗೆ ಅನುಕೂಲವಾದ ತಾಣಗಳೆಸಿವೆ’ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಹೇಳುತ್ತಾರೆ.</p>.<div><blockquote>ಎತ್ತರದ ಪ್ರದೇಶಗಳಲ್ಲಿನ ಕಂದಕಗಳಲ್ಲಿ ಉಗ್ರರು 1990 ಹಾಗೂ 2000 ಇಸ್ಟಿ ನಡುವೆ ಅಡಗುತಾಣಗಳನ್ನು ನಿರ್ಮಿಸುವುದು ಸಾಮಾನ್ಯವಾಗಿತ್ತು. ಈಗ ಮತ್ತೆ ಅದೇ ತಂತ್ರಕ್ಕೆ ಮೊರೆ ಹೋಗುತ್ತಿದ್ದಾರೆ. ಈ ಹೊಸ ಸವಾಲು ಎದುರಿಸಲು ಸೇನೆ ಕೂಡ ತನ್ನ ಕಾರ್ಯತಂತ್ರ ಬದಲಿಸುವುದು ಖಚಿತ </blockquote><span class="attribution">ಡಿ.ಎಸ್.ಹೂಡಾ ಲೆಫ್ಟಿನೆಂಟ್ ಜನರಲ್(ನಿವೃತ್ತ)</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>