<p><strong>ತಿರುಪತಿ(ಆಂಧ್ರಪ್ರದೇಶ):</strong> ‘ಐದು ನಿಮಿಷ, ನಾವೆಲ್ಲಾ ಸತ್ತು ಹೋಗಿದ್ದೇವೆ ಎಂಬ ಭಾವನೆ ಮೂಡಿತ್ತು. ನಾನು ಕಳೆದ 25 ವರ್ಷಗಳಿಂದ ಈ ದೇವಸ್ಥಾನಕ್ಕೆ ಬರುತ್ತಿದ್ದೇನೆ. ಆದರೆ, ಈ ರೀತಿ ಎಂದೂ ಆಗಿರಲಿಲ್ಲ...’</p><p>–ಇದು, ಇಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನಕ್ಕಾಗಿ ಟಿಕೆಟ್ ಪಡೆಯುವ ವೇಳೆ ಉಂಟಾದ ನೂಕು ನುಗ್ಗಲು ಹಾಗೂ ಕಾಲ್ತುಳಿತದಲ್ಲಿ ಬದುಕುಳಿದಿರುವ ಭಕ್ತೆ, ಡಿ.ವೆಂಕಟಲಕ್ಷ್ಮಿ ಹೇಳುವ ಮಾತು.</p><p>ಸ್ಥಳೀಯ ಸುದ್ದಿವಾಹಿನಿ ಜೊತೆ ಮಾತನಾಡಿದ ಅವರು, ‘ಆರು ಜನ ಹುಡುಗರು ನನ್ನನ್ನು ಪಕ್ಕಕ್ಕೆ ಎಳೆದು ಬದುಕಿಸಿದರು. ನಂತರ, ಕುಡಿಯಲು ನೀರು ಕೂಡ ಕೊಟ್ಟರು’ ಎಂದು ಬುಧವಾರದ ಭೀಕರ ಕ್ಷಣಗಳನ್ನು ವಿವರಿಸಿದ್ದಾರೆ.</p><p>‘ಹಠಾತ್ತನೇ ಜನರು ಮುನ್ನುಗ್ಗಿದ್ದರಿಂದ ನೂಕು ನುಗ್ಗಲು ಉಂಟಾಯಿತು. ನಾನು ನಿಂತಿದ್ದ ಸ್ಥಳದಲ್ಲಿಯೇ 10 ಜನರು ಬಿದ್ದು, ಗಾಯಗೊಂಡರು. ಜೋರಾದ ಕಿರುಚಾಟ ಶುರುವಾಯಿತು. ಅಷ್ಟಾದರೂ ಜನರು ಬರುವುದು ನಿಲ್ಲಲಿಲ್ಲ. ದಟ್ಟಣೆಯನ್ನು ನಿಯಂತ್ರಿಸಲಾಗಲಿಲ್ಲ’ ಎಂದೂ ಅವರು ಹೇಳಿದ್ದಾರೆ.</p><p>‘ಭಕ್ತರು ಸಾಗುವುದಕ್ಕೆ ಪೊಲೀಸರು ವ್ಯವಸ್ಥಿತ ಕ್ರಮ ಕೈಗೊಂಡಿದ್ದಲ್ಲಿ, ಇಂತಹ ದುರ್ಘಟನೆ ಸಂಭವಿಸುತ್ತಿರಲಿಲ್ಲ. ಇನ್ನೊಂದೆಡೆ, ಆ ಸ್ಥಳದಲ್ಲಿ ಏನಾಗುತ್ತಿದೆ ಎಂಬುದು ಕೂಡ ಯಾರಿಗೂ ಗೊತ್ತಾಗಲಿಲ್ಲ’ ಎಂದು ವಿವರಿಸಿದ್ದಾರೆ.</p><p>‘ನಾನು ಬುಧವಾರ ಬೆಳಿಗ್ಗೆ 11ರ ವೇಳೆಗೆ ಇಲ್ಲಿಗೆ ಬಂದೆ. ಸಂಜೆ 7ಕ್ಕೆ ಬಾಗಿಲು ತೆರೆಯಿತು. ಭಕ್ತರು ಸಾಲಾಗಿ ಹೋಗುವಂತೆ ಒಬ್ಬ ಸಿಬ್ಬಂದಿ ಹೇಳಿದರು. ಆದರೆ, ಅವರ ಮಾತನ್ನು ಯಾರೂ ಕೇಳಲಿಲ್ಲ. ಪೊಲೀಸರು ಕೂಡ ಹೊರಗಡೆಯೇ ಇದ್ದರು’ ಎಂದು ಮತ್ತೊಬ್ಬ ಭಕ್ತೆ ಹೇಳಿದ್ದಾರೆ.</p><p>‘5 ಸಾವಿರ ಜನರು ಜಮಾಯಿಸಿದ್ದಾರೆ ಎಂಬುದಾಗಿ ಪೊಲೀಸರಿಗೆ ತಿಳಿಸುವಂತೆ ಭಕ್ತರೊಬ್ಬರು ಸೂಚಿಸಿದರು. ಈ ವೇಳೆ, ಪೊಲೀಸರು ದಿಢೀರ್ನೆ ಬಾಗಿಲುಗಳನ್ನು ತೆಗೆದಿದ್ದರಿಂದ ಕಾಲ್ತುಳಿತ ಉಂಟಾಯಿತು’ ಎಂದೂ ವಿವರಿಸಿದ್ದಾರೆ.</p>.ತಿರುಪತಿ ದೇವಸ್ಥಾನದಲ್ಲಿ ಕಾಲ್ತುಳಿತ: ಆರು ಮಂದಿ ಭಕ್ತರು ಸಾವು.ತಿರುಪತಿ ದುರಂತ: ಮೃತರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಘೋಷಣೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುಪತಿ(ಆಂಧ್ರಪ್ರದೇಶ):</strong> ‘ಐದು ನಿಮಿಷ, ನಾವೆಲ್ಲಾ ಸತ್ತು ಹೋಗಿದ್ದೇವೆ ಎಂಬ ಭಾವನೆ ಮೂಡಿತ್ತು. ನಾನು ಕಳೆದ 25 ವರ್ಷಗಳಿಂದ ಈ ದೇವಸ್ಥಾನಕ್ಕೆ ಬರುತ್ತಿದ್ದೇನೆ. ಆದರೆ, ಈ ರೀತಿ ಎಂದೂ ಆಗಿರಲಿಲ್ಲ...’</p><p>–ಇದು, ಇಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನಕ್ಕಾಗಿ ಟಿಕೆಟ್ ಪಡೆಯುವ ವೇಳೆ ಉಂಟಾದ ನೂಕು ನುಗ್ಗಲು ಹಾಗೂ ಕಾಲ್ತುಳಿತದಲ್ಲಿ ಬದುಕುಳಿದಿರುವ ಭಕ್ತೆ, ಡಿ.ವೆಂಕಟಲಕ್ಷ್ಮಿ ಹೇಳುವ ಮಾತು.</p><p>ಸ್ಥಳೀಯ ಸುದ್ದಿವಾಹಿನಿ ಜೊತೆ ಮಾತನಾಡಿದ ಅವರು, ‘ಆರು ಜನ ಹುಡುಗರು ನನ್ನನ್ನು ಪಕ್ಕಕ್ಕೆ ಎಳೆದು ಬದುಕಿಸಿದರು. ನಂತರ, ಕುಡಿಯಲು ನೀರು ಕೂಡ ಕೊಟ್ಟರು’ ಎಂದು ಬುಧವಾರದ ಭೀಕರ ಕ್ಷಣಗಳನ್ನು ವಿವರಿಸಿದ್ದಾರೆ.</p><p>‘ಹಠಾತ್ತನೇ ಜನರು ಮುನ್ನುಗ್ಗಿದ್ದರಿಂದ ನೂಕು ನುಗ್ಗಲು ಉಂಟಾಯಿತು. ನಾನು ನಿಂತಿದ್ದ ಸ್ಥಳದಲ್ಲಿಯೇ 10 ಜನರು ಬಿದ್ದು, ಗಾಯಗೊಂಡರು. ಜೋರಾದ ಕಿರುಚಾಟ ಶುರುವಾಯಿತು. ಅಷ್ಟಾದರೂ ಜನರು ಬರುವುದು ನಿಲ್ಲಲಿಲ್ಲ. ದಟ್ಟಣೆಯನ್ನು ನಿಯಂತ್ರಿಸಲಾಗಲಿಲ್ಲ’ ಎಂದೂ ಅವರು ಹೇಳಿದ್ದಾರೆ.</p><p>‘ಭಕ್ತರು ಸಾಗುವುದಕ್ಕೆ ಪೊಲೀಸರು ವ್ಯವಸ್ಥಿತ ಕ್ರಮ ಕೈಗೊಂಡಿದ್ದಲ್ಲಿ, ಇಂತಹ ದುರ್ಘಟನೆ ಸಂಭವಿಸುತ್ತಿರಲಿಲ್ಲ. ಇನ್ನೊಂದೆಡೆ, ಆ ಸ್ಥಳದಲ್ಲಿ ಏನಾಗುತ್ತಿದೆ ಎಂಬುದು ಕೂಡ ಯಾರಿಗೂ ಗೊತ್ತಾಗಲಿಲ್ಲ’ ಎಂದು ವಿವರಿಸಿದ್ದಾರೆ.</p><p>‘ನಾನು ಬುಧವಾರ ಬೆಳಿಗ್ಗೆ 11ರ ವೇಳೆಗೆ ಇಲ್ಲಿಗೆ ಬಂದೆ. ಸಂಜೆ 7ಕ್ಕೆ ಬಾಗಿಲು ತೆರೆಯಿತು. ಭಕ್ತರು ಸಾಲಾಗಿ ಹೋಗುವಂತೆ ಒಬ್ಬ ಸಿಬ್ಬಂದಿ ಹೇಳಿದರು. ಆದರೆ, ಅವರ ಮಾತನ್ನು ಯಾರೂ ಕೇಳಲಿಲ್ಲ. ಪೊಲೀಸರು ಕೂಡ ಹೊರಗಡೆಯೇ ಇದ್ದರು’ ಎಂದು ಮತ್ತೊಬ್ಬ ಭಕ್ತೆ ಹೇಳಿದ್ದಾರೆ.</p><p>‘5 ಸಾವಿರ ಜನರು ಜಮಾಯಿಸಿದ್ದಾರೆ ಎಂಬುದಾಗಿ ಪೊಲೀಸರಿಗೆ ತಿಳಿಸುವಂತೆ ಭಕ್ತರೊಬ್ಬರು ಸೂಚಿಸಿದರು. ಈ ವೇಳೆ, ಪೊಲೀಸರು ದಿಢೀರ್ನೆ ಬಾಗಿಲುಗಳನ್ನು ತೆಗೆದಿದ್ದರಿಂದ ಕಾಲ್ತುಳಿತ ಉಂಟಾಯಿತು’ ಎಂದೂ ವಿವರಿಸಿದ್ದಾರೆ.</p>.ತಿರುಪತಿ ದೇವಸ್ಥಾನದಲ್ಲಿ ಕಾಲ್ತುಳಿತ: ಆರು ಮಂದಿ ಭಕ್ತರು ಸಾವು.ತಿರುಪತಿ ದುರಂತ: ಮೃತರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಘೋಷಣೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>