<p><strong>ರಾಂಚಿ</strong>: ಪರಿಶಿಷ್ಟ ಪಂಗಡದ (ಎಸ್ಟಿ) ಸ್ಥಾನಮಾನಕ್ಕಾಗಿ ಆಗ್ರಹಿಸುತ್ತಿರುವ ಕುರ್ಮಿ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ಬುಡಕಟ್ಟು ಸಮುದಾಯಗಳ ಸಾವಿರಾರು ಮಂದಿ ಶುಕ್ರವಾರ ಪ್ರತಿಭಟನಾ ರ್ಯಾಲಿ ನಡೆಸಿದರು.</p>.<p>‘ಆದಿವಾಸಿ ಬಚಾವೊ ಮೋರ್ಚಾ’ ಬ್ಯಾನರ್ನಡಿ ಆಯೋಜಿಸಿದ್ದ ‘ಆದಿವಾಸಿ ಹೂಂಕಾರ್ ಮಹಾರ್ಯಾಲಿ’ಯು ಧುರ್ವಾದ ಪ್ರಭಾತ್ ತಾರಾ ಮೈದಾನದಲ್ಲಿ ನಡೆಯಿತು. ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಬುಡಕಟ್ಟಿನ 33 ಸಮುದಾಯಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದವು.</p>.<p class="bodytext">‘ರ್ಯಾಲಿಯಲ್ಲಿ ಬುಡಕಟ್ಟು ಸಮುದಾಯವು ಒಗ್ಗಟ್ಟು ಪ್ರದರ್ಶಿಸಿದೆ. ಕುರ್ಮಿ ಸಮುದಾಯದ ಮನಸ್ಥಿತಿ ಬದಲಾಗುವವರೆಗೂ ಇಂತಹ ಚಳವಳಿಗಳು ಮುಂದುವರಿಯುತ್ತವೆ’ ಎಂದು ಮಾಜಿ ಸಚಿವೆ, ಆದಿವಾಸಿ ಬಚಾವೊ ಮೋರ್ಚಾ ಸಂಚಾಲಕಿ ಗೀತಾಶ್ರೀ ಒರಾಯನ್ ತಿಳಿಸಿದರು.</p>.<p class="bodytext">‘ಜಾರ್ಖಂಡ್ನ ಕುರ್ಮಿಗಳು ಎಂದಿಗೂ ಬುಡಕಟ್ಟು ಜನಾಂಗವಾಗಲು ಸಾಧ್ಯವಿಲ್ಲ. ಅವರು ಎಂದಿಗೂ ಬುಡಕಟ್ಟು ಸಮುದಾಯಕ್ಕೆ ಸೇರಿರಲಿಲ್ಲ ಎಂಬುದನ್ನು ಐತಿಹಾಸಿಕ ದಾಖಲೆಗಳು ಸಾಬೀತುಪಡಿಸುತ್ತವೆ. ಅವರ ಪೂರ್ವಜರು ಸತ್ಯವನ್ನು ಕಲಿತ ನಂತರ ಬುಡಕಟ್ಟು ಜನರಿಂದ ದೂರ ಸರಿದರು’ ಎಂದು ಹೇಳಿದರು.</p>.<p class="bodytext">‘ಶಿವಾಜಿ ವಂಶಸ್ಥರು ಎಂದು ಕುರ್ಮಿಗಳು ಒಂದು ಕಾಲದಲ್ಲಿ ಹೇಳಿಕೊಂಡಿದ್ದರು. ಆದರೆ, ಈಗ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಆದಿವಾಸಿಗಳ ವಿರೋಧವಿದೆ. ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರು ಈ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು’ ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಂಚಿ</strong>: ಪರಿಶಿಷ್ಟ ಪಂಗಡದ (ಎಸ್ಟಿ) ಸ್ಥಾನಮಾನಕ್ಕಾಗಿ ಆಗ್ರಹಿಸುತ್ತಿರುವ ಕುರ್ಮಿ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ಬುಡಕಟ್ಟು ಸಮುದಾಯಗಳ ಸಾವಿರಾರು ಮಂದಿ ಶುಕ್ರವಾರ ಪ್ರತಿಭಟನಾ ರ್ಯಾಲಿ ನಡೆಸಿದರು.</p>.<p>‘ಆದಿವಾಸಿ ಬಚಾವೊ ಮೋರ್ಚಾ’ ಬ್ಯಾನರ್ನಡಿ ಆಯೋಜಿಸಿದ್ದ ‘ಆದಿವಾಸಿ ಹೂಂಕಾರ್ ಮಹಾರ್ಯಾಲಿ’ಯು ಧುರ್ವಾದ ಪ್ರಭಾತ್ ತಾರಾ ಮೈದಾನದಲ್ಲಿ ನಡೆಯಿತು. ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಬುಡಕಟ್ಟಿನ 33 ಸಮುದಾಯಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದವು.</p>.<p class="bodytext">‘ರ್ಯಾಲಿಯಲ್ಲಿ ಬುಡಕಟ್ಟು ಸಮುದಾಯವು ಒಗ್ಗಟ್ಟು ಪ್ರದರ್ಶಿಸಿದೆ. ಕುರ್ಮಿ ಸಮುದಾಯದ ಮನಸ್ಥಿತಿ ಬದಲಾಗುವವರೆಗೂ ಇಂತಹ ಚಳವಳಿಗಳು ಮುಂದುವರಿಯುತ್ತವೆ’ ಎಂದು ಮಾಜಿ ಸಚಿವೆ, ಆದಿವಾಸಿ ಬಚಾವೊ ಮೋರ್ಚಾ ಸಂಚಾಲಕಿ ಗೀತಾಶ್ರೀ ಒರಾಯನ್ ತಿಳಿಸಿದರು.</p>.<p class="bodytext">‘ಜಾರ್ಖಂಡ್ನ ಕುರ್ಮಿಗಳು ಎಂದಿಗೂ ಬುಡಕಟ್ಟು ಜನಾಂಗವಾಗಲು ಸಾಧ್ಯವಿಲ್ಲ. ಅವರು ಎಂದಿಗೂ ಬುಡಕಟ್ಟು ಸಮುದಾಯಕ್ಕೆ ಸೇರಿರಲಿಲ್ಲ ಎಂಬುದನ್ನು ಐತಿಹಾಸಿಕ ದಾಖಲೆಗಳು ಸಾಬೀತುಪಡಿಸುತ್ತವೆ. ಅವರ ಪೂರ್ವಜರು ಸತ್ಯವನ್ನು ಕಲಿತ ನಂತರ ಬುಡಕಟ್ಟು ಜನರಿಂದ ದೂರ ಸರಿದರು’ ಎಂದು ಹೇಳಿದರು.</p>.<p class="bodytext">‘ಶಿವಾಜಿ ವಂಶಸ್ಥರು ಎಂದು ಕುರ್ಮಿಗಳು ಒಂದು ಕಾಲದಲ್ಲಿ ಹೇಳಿಕೊಂಡಿದ್ದರು. ಆದರೆ, ಈಗ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಆದಿವಾಸಿಗಳ ವಿರೋಧವಿದೆ. ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರು ಈ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು’ ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>