<p><strong>ಮುಂಬೈ</strong>: ದ್ವೇಷ ರಾಜಕೀಯವನ್ನು ವಿರೋಧಿಸಿ ಮಹಾತ್ಮ ಗಾಂಧಿ ಅವರ ಮರಿಮೊಮ್ಮಗ ತುಷಾರ್ ಗಾಂಧಿ ನೇತೃತ್ವದ ಸಂವಿಧಾನ ಸತ್ಯಾಗ್ರಹ ಯಾತ್ರೆಯು ಸೋಮವಾರ ಆರಂಭವಾಯಿತು. ನಾಗಪುರದಿಂದ ವಾರ್ಧಾವರೆಗೆ ಸುಮಾರು 91 ಕಿ.ಮೀ. ನಡೆಲಿರುವ ಈ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿಯ ಎನ್ಸಿಪಿ(ಶರದ್ ಪವಾರ್), ಶಿವಸೇನೆ (ಉದ್ಧವ್ ಠಾಕ್ರೆ) ಮತ್ತು ಇತರ ಹಲವು ಸಂಘಟನೆಗಳು ಕೂಡ ಭಾಗವಹಿಸುತ್ತಿವೆ. </p>.<p>1956ರಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ತಮ್ಮ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದ ನಾಗ್ಪುರದ ದೀಕ್ಷಭೂಮಿಯಲ್ಲಿ ಈ ಪಾದಯಾತ್ರೆ ಆರಂಭವಾಯಿತು. ಮಹಾತ್ಮ ಗಾಂಧಿ ಅವರ ನಿವಾಸವಾದ ಸೇವಾಗ್ರಾಮ ಆಶ್ರಮದಲ್ಲಿ ಅಕ್ಟೋಬರ್ 2ರಂದು ಪಾದಯಾತ್ರೆ ಕೊನೆಗೊಳ್ಳಲಿದೆ.</p>.<p>‘ಸಂವಿಧಾನವನ್ನು ಬಲಪಡಿಸಲು ಮತ್ತು ರಕ್ಷಿಸಲು ನಾವು ಸಂವಿಧಾನ ಸತ್ಯಾಗ್ರಹ ಪಾದಯಾತ್ರೆಯನ್ನು ಕೈಗೊಂಡಿದ್ದೇವೆ. ಸಂಘ ಪರಿವಾರ ಸಮಾಜದಲ್ಲಿ ಮತ್ತು ರಾಜಕೀಯದಲ್ಲಿ ಹರಡುವ ದ್ವೇಷದ ವಿರುದ್ಧ ನಾವು ಪ್ರೀತಿಯ ಸಂದೇಶವನ್ನು ಈ ಯಾತ್ರೆಯಲ್ಲಿ ನೀಡಲಿದ್ದೇವೆ. ಈ ದ್ವೇಷವು ದೇಶದ ಒಗ್ಗಟ್ಟಿಗೆ ಮಾರಕವಾಗಿದೆ’ ಎಂದು ತುಷಾರ್ ಗಾಂಧಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ದ್ವೇಷ ರಾಜಕೀಯವನ್ನು ವಿರೋಧಿಸಿ ಮಹಾತ್ಮ ಗಾಂಧಿ ಅವರ ಮರಿಮೊಮ್ಮಗ ತುಷಾರ್ ಗಾಂಧಿ ನೇತೃತ್ವದ ಸಂವಿಧಾನ ಸತ್ಯಾಗ್ರಹ ಯಾತ್ರೆಯು ಸೋಮವಾರ ಆರಂಭವಾಯಿತು. ನಾಗಪುರದಿಂದ ವಾರ್ಧಾವರೆಗೆ ಸುಮಾರು 91 ಕಿ.ಮೀ. ನಡೆಲಿರುವ ಈ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿಯ ಎನ್ಸಿಪಿ(ಶರದ್ ಪವಾರ್), ಶಿವಸೇನೆ (ಉದ್ಧವ್ ಠಾಕ್ರೆ) ಮತ್ತು ಇತರ ಹಲವು ಸಂಘಟನೆಗಳು ಕೂಡ ಭಾಗವಹಿಸುತ್ತಿವೆ. </p>.<p>1956ರಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ತಮ್ಮ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದ ನಾಗ್ಪುರದ ದೀಕ್ಷಭೂಮಿಯಲ್ಲಿ ಈ ಪಾದಯಾತ್ರೆ ಆರಂಭವಾಯಿತು. ಮಹಾತ್ಮ ಗಾಂಧಿ ಅವರ ನಿವಾಸವಾದ ಸೇವಾಗ್ರಾಮ ಆಶ್ರಮದಲ್ಲಿ ಅಕ್ಟೋಬರ್ 2ರಂದು ಪಾದಯಾತ್ರೆ ಕೊನೆಗೊಳ್ಳಲಿದೆ.</p>.<p>‘ಸಂವಿಧಾನವನ್ನು ಬಲಪಡಿಸಲು ಮತ್ತು ರಕ್ಷಿಸಲು ನಾವು ಸಂವಿಧಾನ ಸತ್ಯಾಗ್ರಹ ಪಾದಯಾತ್ರೆಯನ್ನು ಕೈಗೊಂಡಿದ್ದೇವೆ. ಸಂಘ ಪರಿವಾರ ಸಮಾಜದಲ್ಲಿ ಮತ್ತು ರಾಜಕೀಯದಲ್ಲಿ ಹರಡುವ ದ್ವೇಷದ ವಿರುದ್ಧ ನಾವು ಪ್ರೀತಿಯ ಸಂದೇಶವನ್ನು ಈ ಯಾತ್ರೆಯಲ್ಲಿ ನೀಡಲಿದ್ದೇವೆ. ಈ ದ್ವೇಷವು ದೇಶದ ಒಗ್ಗಟ್ಟಿಗೆ ಮಾರಕವಾಗಿದೆ’ ಎಂದು ತುಷಾರ್ ಗಾಂಧಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>