<p><strong>ನವದೆಹಲಿ: </strong>ಡಿಎಪಿ ಮತ್ತು ಯೂರಿಯಾ ರಹಿತಇತರ ಕೆಲವು ರಸಗೊಬ್ಬರಗಳಿಗೆ ₹14,775 ಕೋಟಿ ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಬುಧವಾರ ನಿರ್ಧರಿಸಿದೆ. ಕೋವಿಡ್ ಸಾಂಕ್ರಾಮಿಕದ ಈ ಹೊತ್ತಿನಲ್ಲಿ ಕೇಂದ್ರದ ಈ ತೀರ್ಮಾನದಿಂದ ರೈತರಿಗೆ ರಸಗೊಬ್ಬರದ ಮೇಲಿನ ಹೊರೆ ಕಡಿಮೆಯಾಗಲಿದೆ.</p>.<p>ಯೂರಿಯಾವನ್ನು ಹೊರತುಪಡಿಸಿದರೆ, ದೇಶದಲ್ಲಿ ಡಿಎಪಿ ಗೊಬ್ಬರವನ್ನು ಅತಿಹೆಚ್ಚಾಗಿ ಬಳಸಲಾಗುತ್ತದೆ.</p>.<p>ಕಳೆದ ತಿಂಗಳು ಡಿಎಪಿ ಗೊಬ್ಬರದ ಮೇಲಿನ ಸಬ್ಸಿಡಿಯನ್ನು ಶೇ 140ರಷ್ಟು ಹೆಚ್ಚಿಸಲು ಕೇಂದ್ರ ನಿರ್ಧರಿಸಿತ್ತು.</p>.<p>ರೈತರ ಅನುಕೂಲಕ್ಕಾಗಿ ಡಿಎಪಿ ಗೊಬ್ಬರಕ್ಕೆ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಅನುಮೋದನೆ ನೀಡಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದರು.</p>.<p>‘ರೈತರು ಪ್ರತೀ ಚೀಲಕ್ಕೆ ಹಳೆಯ ದರ ₹1,200ಕ್ಕೆ ಡಿಎಪಿ ಗೊಬ್ಬರ ಪಡೆಯಬಹುದು’ ಎಂದು ಅವರು ಹೇಳಿದರು. ಒಂದು ಚೀಲವು 50 ಕೆ.ಜಿ ತೂಕವಿರುತ್ತದೆ.</p>.<p>ರೈತರಿಗೆ ಪರಿಹಾರ ನೀಡುವ ಉದ್ದೇಶದಿಂದ ಡಿಎಪಿ ಗೊಬ್ಬರದ ಸಬ್ಸಿಡಿಯನ್ನು ಪ್ರತಿ ಚೀಲಕ್ಕೆ ₹500ದಿಂದ ₹1,200ಕ್ಕೆ ಹೆಚ್ಚಿಸಲಾಗಿದೆ. ಕೇಂದ್ರದ ಈ ನಿರ್ಧಾರದಿಂದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ₹14,775 ಕೋಟಿ ಹೊರೆ ಬೀಳಲಿದೆ.</p>.<p>ರಸಗೊಬ್ಬರ ಸಹಾಯಧನಕ್ಕಾಗಿ 2021-22ರ ಬಜೆಟ್ನಲ್ಲಿ ಸರ್ಕಾರ ಸುಮಾರು ₹79,600 ಕೋಟಿ ಹಂಚಿಕೆ ಮಾಡಿದೆ.</p>.<p>ಕಳೆದ ವರ್ಷ ಡಿಎಪಿ ನೈಜ ಬೆಲೆ ಪ್ರತಿ ಚೀಲಕ್ಕೆ ₹1,700 ಇತ್ತು. ಇದರ ಮೇಲೆ ಕೇಂದ್ರ ಸರ್ಕಾರ ₹500 ಸಬ್ಸಿಡಿ ನೀಡುತ್ತಿದೆ. ಆದ್ದರಿಂದ ಕಂಪನಿಗಳು ಗೊಬ್ಬರವನ್ನು ರೈತರಿಗೆ ಚೀಲಕ್ಕೆ ₹1,200ರಂತೆ ಮಾರಾಟ ಮಾಡುತ್ತಿದ್ದವು.</p>.<p>ಜಾಗತಿಕ ಬೆಲೆಗಳ ಏರಿಕೆಯಿಂದ ಡಿಎಪಿ ನಿಜವಾದ ಬೆಲೆ ಪ್ರತಿ ಚೀಲಕ್ಕೆ ₹2,400ಕ್ಕೆ ಏರಿಕೆಯಾಗಿದೆ. ಆದರೆ ಹಳೆಯ ದರವಾದ ₹1,200ಕ್ಕೆ ಡಿಎಪಿ ನೀಡಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಸಬ್ಸಿಡಿಯನ್ನು ಪ್ರತಿ ಚೀಲಕ್ಕೆ ₹1,200ಗೆ ಹೆಚ್ಚಿಸಲು ಕೇಂದ್ರ ನಿರ್ಧರಿಸಿದೆ.</p>.<p>ಸರ್ಕಾರವುಯೂರಿಯಾದ ಪ್ರತಿ ಚೀಲಕ್ಕೆ ₹900 ಸಬ್ಸಿಡಿ ನೀಡುತ್ತಿದೆ. ಆದರೆ, ಡಿಎಪಿ ಸೇರಿದಂತೆ ಯೂರಿಯಾ ರಹಿತ ರಸಗೊಬ್ಬರಗಳಿಗೆ ಸರ್ಕಾರ ನಿಗದಿತ ಪ್ರಮಾಣದ ಸಹಾಯಧನವನ್ನು ನೀಡುತ್ತದೆ ಎಂದು ಸಚಿವರು ಹೇಳಿದರು.</p>.<p>ಎನ್ ಗೊಬ್ಬರಕ್ಕೆ (ನೈಟ್ರೊಜನ್) ₹18.7, ಪಿ. ಗೊಬ್ಬರಕ್ಕೆ (ರಂಜಕ) ₹45.3, ಕೆ. ಗೊಬ್ಬರಕ್ಕೆ (ಪೊಟ್ಯಾಶ್) ₹10.1 ಮತ್ತು ಎಸ್ ಗೊಬ್ಬರಕ್ಕೆ (ಸಲ್ಫರ್) ₹2.3 ಸಹಾಯಧನ (ಪ್ರತಿ ಕೆ.ಜಿ.ಗೆ) ನೀಡಲಾಗುತ್ತದೆ.</p>.<p>ದಾಸ್ತಾನಿರುವ ಡಿಎಪಿ ಗೊಬ್ಬರವನ್ನುಹಳೆಯ ದರಕ್ಕೆ ಮಾರಾಟ ಮಾಡುವಂತೆ ರಸಗೊಬ್ಬರ ಉತ್ಪಾದಕ ಸಂಸ್ಥೆಗಳಿಗೆ ಸರ್ಕಾರ ಈಗಾಗಲೇ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಡಿಎಪಿ ಮತ್ತು ಯೂರಿಯಾ ರಹಿತಇತರ ಕೆಲವು ರಸಗೊಬ್ಬರಗಳಿಗೆ ₹14,775 ಕೋಟಿ ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಬುಧವಾರ ನಿರ್ಧರಿಸಿದೆ. ಕೋವಿಡ್ ಸಾಂಕ್ರಾಮಿಕದ ಈ ಹೊತ್ತಿನಲ್ಲಿ ಕೇಂದ್ರದ ಈ ತೀರ್ಮಾನದಿಂದ ರೈತರಿಗೆ ರಸಗೊಬ್ಬರದ ಮೇಲಿನ ಹೊರೆ ಕಡಿಮೆಯಾಗಲಿದೆ.</p>.<p>ಯೂರಿಯಾವನ್ನು ಹೊರತುಪಡಿಸಿದರೆ, ದೇಶದಲ್ಲಿ ಡಿಎಪಿ ಗೊಬ್ಬರವನ್ನು ಅತಿಹೆಚ್ಚಾಗಿ ಬಳಸಲಾಗುತ್ತದೆ.</p>.<p>ಕಳೆದ ತಿಂಗಳು ಡಿಎಪಿ ಗೊಬ್ಬರದ ಮೇಲಿನ ಸಬ್ಸಿಡಿಯನ್ನು ಶೇ 140ರಷ್ಟು ಹೆಚ್ಚಿಸಲು ಕೇಂದ್ರ ನಿರ್ಧರಿಸಿತ್ತು.</p>.<p>ರೈತರ ಅನುಕೂಲಕ್ಕಾಗಿ ಡಿಎಪಿ ಗೊಬ್ಬರಕ್ಕೆ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಅನುಮೋದನೆ ನೀಡಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದರು.</p>.<p>‘ರೈತರು ಪ್ರತೀ ಚೀಲಕ್ಕೆ ಹಳೆಯ ದರ ₹1,200ಕ್ಕೆ ಡಿಎಪಿ ಗೊಬ್ಬರ ಪಡೆಯಬಹುದು’ ಎಂದು ಅವರು ಹೇಳಿದರು. ಒಂದು ಚೀಲವು 50 ಕೆ.ಜಿ ತೂಕವಿರುತ್ತದೆ.</p>.<p>ರೈತರಿಗೆ ಪರಿಹಾರ ನೀಡುವ ಉದ್ದೇಶದಿಂದ ಡಿಎಪಿ ಗೊಬ್ಬರದ ಸಬ್ಸಿಡಿಯನ್ನು ಪ್ರತಿ ಚೀಲಕ್ಕೆ ₹500ದಿಂದ ₹1,200ಕ್ಕೆ ಹೆಚ್ಚಿಸಲಾಗಿದೆ. ಕೇಂದ್ರದ ಈ ನಿರ್ಧಾರದಿಂದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ₹14,775 ಕೋಟಿ ಹೊರೆ ಬೀಳಲಿದೆ.</p>.<p>ರಸಗೊಬ್ಬರ ಸಹಾಯಧನಕ್ಕಾಗಿ 2021-22ರ ಬಜೆಟ್ನಲ್ಲಿ ಸರ್ಕಾರ ಸುಮಾರು ₹79,600 ಕೋಟಿ ಹಂಚಿಕೆ ಮಾಡಿದೆ.</p>.<p>ಕಳೆದ ವರ್ಷ ಡಿಎಪಿ ನೈಜ ಬೆಲೆ ಪ್ರತಿ ಚೀಲಕ್ಕೆ ₹1,700 ಇತ್ತು. ಇದರ ಮೇಲೆ ಕೇಂದ್ರ ಸರ್ಕಾರ ₹500 ಸಬ್ಸಿಡಿ ನೀಡುತ್ತಿದೆ. ಆದ್ದರಿಂದ ಕಂಪನಿಗಳು ಗೊಬ್ಬರವನ್ನು ರೈತರಿಗೆ ಚೀಲಕ್ಕೆ ₹1,200ರಂತೆ ಮಾರಾಟ ಮಾಡುತ್ತಿದ್ದವು.</p>.<p>ಜಾಗತಿಕ ಬೆಲೆಗಳ ಏರಿಕೆಯಿಂದ ಡಿಎಪಿ ನಿಜವಾದ ಬೆಲೆ ಪ್ರತಿ ಚೀಲಕ್ಕೆ ₹2,400ಕ್ಕೆ ಏರಿಕೆಯಾಗಿದೆ. ಆದರೆ ಹಳೆಯ ದರವಾದ ₹1,200ಕ್ಕೆ ಡಿಎಪಿ ನೀಡಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಸಬ್ಸಿಡಿಯನ್ನು ಪ್ರತಿ ಚೀಲಕ್ಕೆ ₹1,200ಗೆ ಹೆಚ್ಚಿಸಲು ಕೇಂದ್ರ ನಿರ್ಧರಿಸಿದೆ.</p>.<p>ಸರ್ಕಾರವುಯೂರಿಯಾದ ಪ್ರತಿ ಚೀಲಕ್ಕೆ ₹900 ಸಬ್ಸಿಡಿ ನೀಡುತ್ತಿದೆ. ಆದರೆ, ಡಿಎಪಿ ಸೇರಿದಂತೆ ಯೂರಿಯಾ ರಹಿತ ರಸಗೊಬ್ಬರಗಳಿಗೆ ಸರ್ಕಾರ ನಿಗದಿತ ಪ್ರಮಾಣದ ಸಹಾಯಧನವನ್ನು ನೀಡುತ್ತದೆ ಎಂದು ಸಚಿವರು ಹೇಳಿದರು.</p>.<p>ಎನ್ ಗೊಬ್ಬರಕ್ಕೆ (ನೈಟ್ರೊಜನ್) ₹18.7, ಪಿ. ಗೊಬ್ಬರಕ್ಕೆ (ರಂಜಕ) ₹45.3, ಕೆ. ಗೊಬ್ಬರಕ್ಕೆ (ಪೊಟ್ಯಾಶ್) ₹10.1 ಮತ್ತು ಎಸ್ ಗೊಬ್ಬರಕ್ಕೆ (ಸಲ್ಫರ್) ₹2.3 ಸಹಾಯಧನ (ಪ್ರತಿ ಕೆ.ಜಿ.ಗೆ) ನೀಡಲಾಗುತ್ತದೆ.</p>.<p>ದಾಸ್ತಾನಿರುವ ಡಿಎಪಿ ಗೊಬ್ಬರವನ್ನುಹಳೆಯ ದರಕ್ಕೆ ಮಾರಾಟ ಮಾಡುವಂತೆ ರಸಗೊಬ್ಬರ ಉತ್ಪಾದಕ ಸಂಸ್ಥೆಗಳಿಗೆ ಸರ್ಕಾರ ಈಗಾಗಲೇ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>