<p><strong>ಲಖನೌ:</strong> ಉತ್ತರ ಪ್ರದೇಶದಲ್ಲಿ ಡ್ರೋನ್ ಬಳಸಿ ಕಳ್ಳತನ ನಡೆಸಲಾಗುತ್ತಿದೆ ಎಂಬ ವರದಿ ಹರಡಿದೆ. ರಾಜ್ಯದ ಪಶ್ಚಿಮ ಭಾಗದ ಸುಮಾರು 12 ಜಿಲ್ಲೆಗಳ 300ಕ್ಕೂ ಅಧಿಕ ಗ್ರಾಮಗಳಲ್ಲಿ ಜನರು ‘ಡ್ರೋನ್ ಚೋರ’ರ ಬಗ್ಗೆ ಆತಂಕಗೊಂಡಿದ್ದಾರೆ.</p>.<p>ರಾತ್ರಿ ಗ್ರಾಮಗಳಿಗೆ ಬಂದು ಡ್ರೋನ್ ಮೂಲಕ ದರೋಡೆ ನಡೆಸುತ್ತಾರೆ. ಕತ್ತಲಾದ ಬಳಿಕ ಗ್ರಾಮದ ಮೇಲೆ ಅನುಮಾನಾಸ್ಪದ ಡ್ರೋನ್ಗಳು ಹಾರಾಟ ನಡೆಸುತ್ತವೆ ಎಂದು ಗ್ರಾಮಸ್ಥರು ಭಯಗೊಂಡಿದ್ದಾರೆ.</p>.<p>‘ಡ್ರೋನ್ ಬಳಸಿ ಯಾವುದೇ ಕಳ್ಳತನ ಈವರೆಗೆ ವರದಿಯಾಗಿಲ್ಲ. ಇದು ಕೇವಲ ವದಂತಿಯಾಗಿದೆ’ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. </p>.<p>‘ಅಮ್ರೋಹಾದಲ್ಲಿ ಮೂವರು ಯೂಟ್ಯೂಬರ್ಗಳು ಅನುಮತಿ ಇಲ್ಲದೇ ಡ್ರೋನ್ ಹಾರಾಟ ನಡೆಸಿದ್ದರು. ಹೀಗಾಗಿ ಅವರನ್ನು ಬಂಧಿಸಿ, ವಿಚಾರಣೆ ನಡೆಸಿದ ಬಳಿಕ ಬಿಡುಗಡೆ ಮಾಡಲಾಯಿತು. ಈ ಘಟನೆ ಸ್ಥಳೀಯರಲ್ಲಿ ಅನುಮಾನಕ್ಕೆ ಕಾರಣವಾಯಿತು. ನಂತರ ವದಂತಿ ಹಬ್ಬಿದೆ’ ಎಂದು ಡಿಐಜಿ ನೈಥಾನಿ ಅವರು ಮಾಹಿತಿ ನೀಡಿದರು. </p>.<p>ಕಾನೂನು ಮತ್ತು ಸುವ್ಯವಸ್ಥೆ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ಕಳೆದ ವಾರ ನಡೆದ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಯಿತು. ‘ವದಂತಿಗಳನ್ನು ಹರಡುವವರ ಮತ್ತು ಅನುಮತಿ ಇಲ್ಲದೆ ಡ್ರೋನ್ಗಳನ್ನು ಹಾರಿಸುವವರ ವಿರುದ್ಧ ‘ಗ್ಯಾಂಗ್ಸ್ಟರ್’ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು. </p>.<p>ದರೋಡೆಕೋರರ ಭಯದಿಂದಾಗಿ ಪಿಲಿಭಿತ್ ಜಿಲ್ಲೆಯ ಪುರಾನಪುರ ಗ್ರಾಮಸ್ಥರು ಗಸ್ತು ಕಾವಲುಗಾರರನ್ನು ನೇಮಿಸಿಕೊಂಡಿದ್ದಾರೆ. 45 ವರ್ಷದ ಭುರೆಯ್ ಸಿಂಗ್ ಅವರು ತಮ್ಮ ಸೈಕಲ್ಗೆ ಬ್ಯಾಟರಿ ಕಟ್ಟಿಕೊಂಡು, ಕೈಯಲ್ಲೊಂದು ದಪ್ಪ ಕೋಲು ಹಿಡಿದು ರಾತ್ರಿಯೆಲ್ಲ ಊರಿನ ಕಾವಲು ಕಾಯುತ್ತಿದ್ದಾರೆ. </p>.<p>‘ಡ್ರೋನ್ ಬಳಸಿ ಕಳ್ಳತನ ಮಾಡುತ್ತಿರುವುದು ನಿಜವೇ ಅಥವಾ ಸುಳ್ಳೇ ಎಂಬುದು ಗೊತ್ತಿಲ್ಲ. ಆದರೆ ಹಗುರವಾಗಿ ತೆಗೆದುಕೊಳ್ಳಲಾಗುವುದಿಲ್ಲ’ ಎಂದು ಭುರೆಯ್ ಹೇಳಿದರು. </p>.<p>ಪ್ರಕರಣ ಸಂಬಂಧ ಪೊಲೀಸರು ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದಾರೆ. ಸುಳ್ಳು ಸುದ್ದಿ ಹರಡಿದ ಹಾಗೂ ಭಯವನ್ನು ಪ್ರಚೋದಿಸಿದ ಆರೋಪದ ಮೇಲೆ 40 ಮಂದಿಯನ್ನು ಬಂಧಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ಉತ್ತರ ಪ್ರದೇಶದಲ್ಲಿ ಡ್ರೋನ್ ಬಳಸಿ ಕಳ್ಳತನ ನಡೆಸಲಾಗುತ್ತಿದೆ ಎಂಬ ವರದಿ ಹರಡಿದೆ. ರಾಜ್ಯದ ಪಶ್ಚಿಮ ಭಾಗದ ಸುಮಾರು 12 ಜಿಲ್ಲೆಗಳ 300ಕ್ಕೂ ಅಧಿಕ ಗ್ರಾಮಗಳಲ್ಲಿ ಜನರು ‘ಡ್ರೋನ್ ಚೋರ’ರ ಬಗ್ಗೆ ಆತಂಕಗೊಂಡಿದ್ದಾರೆ.</p>.<p>ರಾತ್ರಿ ಗ್ರಾಮಗಳಿಗೆ ಬಂದು ಡ್ರೋನ್ ಮೂಲಕ ದರೋಡೆ ನಡೆಸುತ್ತಾರೆ. ಕತ್ತಲಾದ ಬಳಿಕ ಗ್ರಾಮದ ಮೇಲೆ ಅನುಮಾನಾಸ್ಪದ ಡ್ರೋನ್ಗಳು ಹಾರಾಟ ನಡೆಸುತ್ತವೆ ಎಂದು ಗ್ರಾಮಸ್ಥರು ಭಯಗೊಂಡಿದ್ದಾರೆ.</p>.<p>‘ಡ್ರೋನ್ ಬಳಸಿ ಯಾವುದೇ ಕಳ್ಳತನ ಈವರೆಗೆ ವರದಿಯಾಗಿಲ್ಲ. ಇದು ಕೇವಲ ವದಂತಿಯಾಗಿದೆ’ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. </p>.<p>‘ಅಮ್ರೋಹಾದಲ್ಲಿ ಮೂವರು ಯೂಟ್ಯೂಬರ್ಗಳು ಅನುಮತಿ ಇಲ್ಲದೇ ಡ್ರೋನ್ ಹಾರಾಟ ನಡೆಸಿದ್ದರು. ಹೀಗಾಗಿ ಅವರನ್ನು ಬಂಧಿಸಿ, ವಿಚಾರಣೆ ನಡೆಸಿದ ಬಳಿಕ ಬಿಡುಗಡೆ ಮಾಡಲಾಯಿತು. ಈ ಘಟನೆ ಸ್ಥಳೀಯರಲ್ಲಿ ಅನುಮಾನಕ್ಕೆ ಕಾರಣವಾಯಿತು. ನಂತರ ವದಂತಿ ಹಬ್ಬಿದೆ’ ಎಂದು ಡಿಐಜಿ ನೈಥಾನಿ ಅವರು ಮಾಹಿತಿ ನೀಡಿದರು. </p>.<p>ಕಾನೂನು ಮತ್ತು ಸುವ್ಯವಸ್ಥೆ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ಕಳೆದ ವಾರ ನಡೆದ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಯಿತು. ‘ವದಂತಿಗಳನ್ನು ಹರಡುವವರ ಮತ್ತು ಅನುಮತಿ ಇಲ್ಲದೆ ಡ್ರೋನ್ಗಳನ್ನು ಹಾರಿಸುವವರ ವಿರುದ್ಧ ‘ಗ್ಯಾಂಗ್ಸ್ಟರ್’ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು. </p>.<p>ದರೋಡೆಕೋರರ ಭಯದಿಂದಾಗಿ ಪಿಲಿಭಿತ್ ಜಿಲ್ಲೆಯ ಪುರಾನಪುರ ಗ್ರಾಮಸ್ಥರು ಗಸ್ತು ಕಾವಲುಗಾರರನ್ನು ನೇಮಿಸಿಕೊಂಡಿದ್ದಾರೆ. 45 ವರ್ಷದ ಭುರೆಯ್ ಸಿಂಗ್ ಅವರು ತಮ್ಮ ಸೈಕಲ್ಗೆ ಬ್ಯಾಟರಿ ಕಟ್ಟಿಕೊಂಡು, ಕೈಯಲ್ಲೊಂದು ದಪ್ಪ ಕೋಲು ಹಿಡಿದು ರಾತ್ರಿಯೆಲ್ಲ ಊರಿನ ಕಾವಲು ಕಾಯುತ್ತಿದ್ದಾರೆ. </p>.<p>‘ಡ್ರೋನ್ ಬಳಸಿ ಕಳ್ಳತನ ಮಾಡುತ್ತಿರುವುದು ನಿಜವೇ ಅಥವಾ ಸುಳ್ಳೇ ಎಂಬುದು ಗೊತ್ತಿಲ್ಲ. ಆದರೆ ಹಗುರವಾಗಿ ತೆಗೆದುಕೊಳ್ಳಲಾಗುವುದಿಲ್ಲ’ ಎಂದು ಭುರೆಯ್ ಹೇಳಿದರು. </p>.<p>ಪ್ರಕರಣ ಸಂಬಂಧ ಪೊಲೀಸರು ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದಾರೆ. ಸುಳ್ಳು ಸುದ್ದಿ ಹರಡಿದ ಹಾಗೂ ಭಯವನ್ನು ಪ್ರಚೋದಿಸಿದ ಆರೋಪದ ಮೇಲೆ 40 ಮಂದಿಯನ್ನು ಬಂಧಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>