ಪ್ರತಿಯೊಬ್ಬ ಕಾರ್ಮಿಕನ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸಿಎಂ ವೈಯಕ್ತಿಕವಾಗಿ ವಿಚಾರಿಸಿದರು. ಕಾರ್ಮಿಕರ ಕುಟುಂಬದವರ ಬಗ್ಗೆಯೂ ಕೇಳಿದರು. ಅಲ್ಲದೆ, ಕಾರ್ಮಿಕರಿಗೆ ಶಾಲು ಮತ್ತು ಉಡುಗೊರೆಗಳನ್ನು ನೀಡುವ ಮೂಲಕ ಧೈರ್ಯ ತುಂಬಿದರು ಎಂದು ವಕ್ತಾರರು ತಿಳಿಸಿದ್ದಾರೆ.
ಶ್ರಾವಸ್ತಿ ಜಿಲ್ಲೆಯವರಾದ ಅಂಕಿತ್, ರಾಮ್ ಮಿಲನ್, ಸತ್ಯದೇವ, ಸಂತೋಷ್, ಜೈ ಪ್ರಕಾಶ್ ಮತ್ತು ರಾಮ ಸುಂದರ್ ಹಾಗೂ ಲಖೀಂಪುರ ಖೇರಿಯ ಮಂಜಿತ್, ಮಿರ್ಜಾಪುರದ ಅಖಿಲೇಶ್ ಕುಮಾರ್ ಸಿಎಂ ಭೇಟಿ ಮಾಡಿದ ಕಾರ್ಮಿಕರಾಗಿದ್ದಾರೆ.
ನವೆಂಬರ್ 12 ರಂದು ಸುರಂಗ ಮಾರ್ಗದ ಒಂದು ಭಾಗ ಕುಸಿದ ಪರಿಣಾಮ ಸುಮಾರು 41 ಕಾರ್ಮಿಕರು ಸುರಂಗದೊಳಗೆ ಸಿಲುಕಿದ್ದರು. ಸುಮಾರು 17 ದಿನಗಳ ಕಾರ್ಯಾಚರಣೆಯ ನಂತರ ಕಾರ್ಮಿಕರನ್ನು ರಕ್ಷಿಸಲಾಯಿತು.