<p><strong>ಬೆಂಗಳೂರು</strong>: ಉತ್ತರಾಖಂಡದ ಸಹಸ್ತ್ರ ಸರೋವರಕ್ಕೆ ಚಾರಣಕ್ಕೆ ತೆರಳಿ ತೀವ್ರ ಹಿಮಗಾಳಿಗೆ ಸಿಲುಕಿ ಮೃತರಾದ ರಾಜ್ಯದ 9 ಮಂದಿಯ ಮೃತದೇಹಗಳೊಂದಿಗೆ ಅವರ ಸ್ನೇಹಿತರು 36 ಗಂಟೆ ಕಳೆದಿದ್ದರು ಎಂದು ಕರ್ನಾಟಕ ಪರ್ವತಾರೋಹಿಗಳ ಸಂಘಟನೆಯ (ಕೆಎಂಎ) ಎಸ್.ಶ್ರೀವಾಸ್ತವ ಹೇಳಿದರು.</p>.<p>‘ಚಾರಣ ತಂಡದಲ್ಲಿದ್ದ ಪ್ರತಿಯೊಬ್ಬರನ್ನೂ ನಾನು ಬಲ್ಲೆ. ಎಲ್ಲರೂ ಕೆಎಂಎ ಸದಸ್ಯರು. ನಾನು ಅವರೊಂದಿಗೆ ಅನೇಕ ಚಾರಣಗಳಲ್ಲಿ ಭಾಗವಹಿಸಿದ್ದೆ. ಆದರೆ, ಈ ಬಾರಿ ನಾನು ನೇಪಾಳದಲ್ಲಿದ್ದೆ. ದುರ್ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ನಾನು ಡೆಹ್ರಾಡೂನ್ಗೆ ಹೋದೆ’ ಎಂದು ಹೇಳಿದರು.</p>.<p>ಡೆಹ್ರಾಡೂನ್ನ ಆಸ್ಪತ್ರೆಯಲ್ಲಿ ತಾವು ದುರಂತದಲ್ಲಿ ಬದುಕುಳಿದವರನ್ನು ಭೇಟಿ ಮಾಡಿದಾಗ ಅವರ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನು ಶ್ರೀವಾಸ್ತವ ನೆನಪಿಸಿಕೊಂಡರು.</p>.<p>‘ಅವರು ಆಘಾತಗೊಂಡಿದ್ದರು, ಜರ್ಜರಿತರಾಗಿದ್ದರು. ಅವರಲ್ಲಿ ಕೆಲವರು ತಮ್ಮ ಸ್ನೇಹಿತರ ಮೃತದೇಹಗಳೊಂದಿಗೆ 36 ಗಂಟೆ ಕಳೆದಿದ್ದರು. ಅದು ತೀರಾ ಹತಾಶೆಯ ಸಂಗತಿ’ ಎಂದು ವಿವರಿಸಿದರು.</p>.<p>‘ಅವರೆಲ್ಲ ಉತ್ತಮ ತರಬೇತಿ ಪಡೆದಿರುವ, ಅನುಭವಿ ಚಾರಣಿಗರು. ಜತೆಗೆ ಅದು ಕಡಿದಾದ ಹಾದಿಯೇನಲ್ಲ. ಸಾಮಾನ್ಯರು ಕೂಡ ಕ್ರಮಿಸಬಹುದಾದ ಮಾರ್ಗ. ಆದರೆ, ಕೇವಲ ಕೆಟ್ಟ ಹವಾಮಾನದಿಂದಾಗಿ ಈ ದುರ್ಘಟನೆ ಸಂಭವಿಸಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಉತ್ತರಾಖಂಡದ ಸಹಸ್ತ್ರ ಸರೋವರಕ್ಕೆ ಚಾರಣಕ್ಕೆ ತೆರಳಿ ತೀವ್ರ ಹಿಮಗಾಳಿಗೆ ಸಿಲುಕಿ ಮೃತರಾದ ರಾಜ್ಯದ 9 ಮಂದಿಯ ಮೃತದೇಹಗಳೊಂದಿಗೆ ಅವರ ಸ್ನೇಹಿತರು 36 ಗಂಟೆ ಕಳೆದಿದ್ದರು ಎಂದು ಕರ್ನಾಟಕ ಪರ್ವತಾರೋಹಿಗಳ ಸಂಘಟನೆಯ (ಕೆಎಂಎ) ಎಸ್.ಶ್ರೀವಾಸ್ತವ ಹೇಳಿದರು.</p>.<p>‘ಚಾರಣ ತಂಡದಲ್ಲಿದ್ದ ಪ್ರತಿಯೊಬ್ಬರನ್ನೂ ನಾನು ಬಲ್ಲೆ. ಎಲ್ಲರೂ ಕೆಎಂಎ ಸದಸ್ಯರು. ನಾನು ಅವರೊಂದಿಗೆ ಅನೇಕ ಚಾರಣಗಳಲ್ಲಿ ಭಾಗವಹಿಸಿದ್ದೆ. ಆದರೆ, ಈ ಬಾರಿ ನಾನು ನೇಪಾಳದಲ್ಲಿದ್ದೆ. ದುರ್ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ನಾನು ಡೆಹ್ರಾಡೂನ್ಗೆ ಹೋದೆ’ ಎಂದು ಹೇಳಿದರು.</p>.<p>ಡೆಹ್ರಾಡೂನ್ನ ಆಸ್ಪತ್ರೆಯಲ್ಲಿ ತಾವು ದುರಂತದಲ್ಲಿ ಬದುಕುಳಿದವರನ್ನು ಭೇಟಿ ಮಾಡಿದಾಗ ಅವರ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನು ಶ್ರೀವಾಸ್ತವ ನೆನಪಿಸಿಕೊಂಡರು.</p>.<p>‘ಅವರು ಆಘಾತಗೊಂಡಿದ್ದರು, ಜರ್ಜರಿತರಾಗಿದ್ದರು. ಅವರಲ್ಲಿ ಕೆಲವರು ತಮ್ಮ ಸ್ನೇಹಿತರ ಮೃತದೇಹಗಳೊಂದಿಗೆ 36 ಗಂಟೆ ಕಳೆದಿದ್ದರು. ಅದು ತೀರಾ ಹತಾಶೆಯ ಸಂಗತಿ’ ಎಂದು ವಿವರಿಸಿದರು.</p>.<p>‘ಅವರೆಲ್ಲ ಉತ್ತಮ ತರಬೇತಿ ಪಡೆದಿರುವ, ಅನುಭವಿ ಚಾರಣಿಗರು. ಜತೆಗೆ ಅದು ಕಡಿದಾದ ಹಾದಿಯೇನಲ್ಲ. ಸಾಮಾನ್ಯರು ಕೂಡ ಕ್ರಮಿಸಬಹುದಾದ ಮಾರ್ಗ. ಆದರೆ, ಕೇವಲ ಕೆಟ್ಟ ಹವಾಮಾನದಿಂದಾಗಿ ಈ ದುರ್ಘಟನೆ ಸಂಭವಿಸಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>