<p><strong>ಪಟ್ನಾ (ಪಿಟಿಐ):</strong> ಜನ ಸೂರಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರ ಬಳಕೆಗಾಗಿ ಇಲ್ಲಿನ ಗಾಂಧಿ ಮೈದಾನದ ಬಳಿ ನಿಲ್ಲಿಸಿರುವ ಐಷಾರಾಮಿ ವಾಹನವು ಇದೀಗ ವಿವಾದದ ಕೇಂದ್ರಬಿಂದುವಾಗಿದೆ.</p>.<p>ಬಿಪಿಎಸ್ಸಿ ನಡೆಸಿದ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿವೆ ಎಂದು ಆರೋಪಿಸಿ ಗುರುವಾರ ಸಂಜೆಯಿಂದ ಪ್ರಶಾಂತ್ ಪ್ರತಿಭಟಿಸುತ್ತಿದ್ದಾರೆ.</p>.<p>ತಮ್ಮ ಬಳಕೆಗಾಗಿ ಗಾಂಧಿ ಮೈದಾನದ ಬಳಿ ನಿಲ್ಲಿಸಿಕೊಂಡಿರುವ ಐಷಾರಾಮಿ ವಾಹನದ ಬಗ್ಗೆ ಟೀಕೆಗಳು ಕೇಳಿ ಬರುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. </p>.<p>‘ವಾಹನದ ಬೆಲೆ ₹2 ಕೋಟಿ. ದಿನಕ್ಕೆ ₹25 ಲಕ್ಷ ಬಾಡಿಗೆಯಿದೆ ಎಂದೆಲ್ಲಾ ಹೇಳುತ್ತಿದ್ದಾರೆ. ಈ ವಾಹನವನ್ನು ನೀವೇ ಕೊಂಡೊಯ್ಯಿರಿ. ನನಗೆ ದಿನದ ಬಾಡಿಗೆಯಾಗಿ ₹25 ಲಕ್ಷ ನೀಡಿ. ಇದರೊಟ್ಟಿಗೆ ವಾಶ್ರೂಂಗಾಗಿ ಪರ್ಯಾಯ ಜಾಗ ಕಲ್ಪಿಸಿಕೊಡಿ’ ಎಂದು ಹರಿಹಾಯ್ದಿದ್ದಾರೆ.</p>.<p>ಬಿಪಿಎಸ್ಸಿ ಆಕಾಂಕ್ಷಿಗಳ ಭವಿಷ್ಯಕ್ಕಿಂತ ಈ ಪ್ರಶ್ನೆ ಮುಖ್ಯವೇ ಎಂದ ಪ್ರಶಾಂತ್, ‘ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಹೊಂದಿರುವ ಸೌಲಭ್ಯಗಳ ಬಗ್ಗೆ ಪ್ರಶ್ನಿಸಲು ನಿಮಗೆ ಸಾಧ್ಯವೇ?’ ಎಂದು ಗರಂ ಆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟ್ನಾ (ಪಿಟಿಐ):</strong> ಜನ ಸೂರಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರ ಬಳಕೆಗಾಗಿ ಇಲ್ಲಿನ ಗಾಂಧಿ ಮೈದಾನದ ಬಳಿ ನಿಲ್ಲಿಸಿರುವ ಐಷಾರಾಮಿ ವಾಹನವು ಇದೀಗ ವಿವಾದದ ಕೇಂದ್ರಬಿಂದುವಾಗಿದೆ.</p>.<p>ಬಿಪಿಎಸ್ಸಿ ನಡೆಸಿದ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿವೆ ಎಂದು ಆರೋಪಿಸಿ ಗುರುವಾರ ಸಂಜೆಯಿಂದ ಪ್ರಶಾಂತ್ ಪ್ರತಿಭಟಿಸುತ್ತಿದ್ದಾರೆ.</p>.<p>ತಮ್ಮ ಬಳಕೆಗಾಗಿ ಗಾಂಧಿ ಮೈದಾನದ ಬಳಿ ನಿಲ್ಲಿಸಿಕೊಂಡಿರುವ ಐಷಾರಾಮಿ ವಾಹನದ ಬಗ್ಗೆ ಟೀಕೆಗಳು ಕೇಳಿ ಬರುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. </p>.<p>‘ವಾಹನದ ಬೆಲೆ ₹2 ಕೋಟಿ. ದಿನಕ್ಕೆ ₹25 ಲಕ್ಷ ಬಾಡಿಗೆಯಿದೆ ಎಂದೆಲ್ಲಾ ಹೇಳುತ್ತಿದ್ದಾರೆ. ಈ ವಾಹನವನ್ನು ನೀವೇ ಕೊಂಡೊಯ್ಯಿರಿ. ನನಗೆ ದಿನದ ಬಾಡಿಗೆಯಾಗಿ ₹25 ಲಕ್ಷ ನೀಡಿ. ಇದರೊಟ್ಟಿಗೆ ವಾಶ್ರೂಂಗಾಗಿ ಪರ್ಯಾಯ ಜಾಗ ಕಲ್ಪಿಸಿಕೊಡಿ’ ಎಂದು ಹರಿಹಾಯ್ದಿದ್ದಾರೆ.</p>.<p>ಬಿಪಿಎಸ್ಸಿ ಆಕಾಂಕ್ಷಿಗಳ ಭವಿಷ್ಯಕ್ಕಿಂತ ಈ ಪ್ರಶ್ನೆ ಮುಖ್ಯವೇ ಎಂದ ಪ್ರಶಾಂತ್, ‘ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಹೊಂದಿರುವ ಸೌಲಭ್ಯಗಳ ಬಗ್ಗೆ ಪ್ರಶ್ನಿಸಲು ನಿಮಗೆ ಸಾಧ್ಯವೇ?’ ಎಂದು ಗರಂ ಆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>