<p><strong>ಲಖನೌ:</strong> ರಾಮ ಮಂದಿರ–ಬಾಬರಿ ಮಸೀದಿ ವಿಚಾರವಾಗಿ ಸದ್ಯದಲ್ಲೇ ತೀರ್ಪು ಬರಬಹುದೆಂಬ ಭಾವನೆ ದಟ್ಟವಾಗಿದ್ದು, ವಿಶ್ವ ಹಿಂದೂ ಪರಿಷತ್ತಿನವರು (ವಿಎಚ್ಪಿ) ಮಂದಿರ ನಿರ್ಮಾಣಕ್ಕೆ ಬೇಕಾದ ಸಿದ್ಧತೆಗಳನ್ನು ಚುರುಕುಗೊಳಿಸಿದ್ದಾರೆ.</p>.<p>ರಾಮ ಮಂದಿರ ನಿರ್ಮಾಣಕ್ಕಾಗಿ ಕೆತ್ತನೆ ಮಾಡಿರುವ ಕಲ್ಲುಗಳನ್ನು ಬಳಸಲು ನಿರ್ಧರಿಸಿರುವ ವಿಎಚ್ಪಿಯವರು ಈಚೆಗೆ ಕೆತ್ತನೆ ಕೆಲಸಗಳನ್ನು ತ್ವರಿತಗೊಳಿಸಿದ್ದಾರೆ. ಅಯೋಧ್ಯೆಯ ಕರಸೇವಕಪುರದಲ್ಲಿರುವ ಕಾರ್ಯಾಗಾರದಲ್ಲಿ ಕಲ್ಲುಗಳನ್ನು ಶುಚಿಗೊಳಿಸುವ ಕೆಲಸದಲ್ಲಿ ಮುಸ್ಲಿಂ ಸಮುದಾಯದವರು ಸಹ ನೆರವಾಗುತ್ತಿದ್ದಾರೆ.</p>.<p>‘ಸುಪ್ರೀಂ ಕೋರ್ಟ್ ಈಗ ಪ್ರತಿನಿತ್ಯ ವಿಚಾರಣೆ ನಡೆಸುತ್ತಿದೆ. ಶೀಘ್ರದಲ್ಲೇ ತೀರ್ಪು ಬರಬಹುದೆಂಬ ನಿರೀಕ್ಷೆಯಲ್ಲಿದ್ದೇವೆ. ರಾಜಸ್ಥಾನದಿಂದ ಇನ್ನಷ್ಟು ಕಲ್ಲುಗಳು ಕಾರ್ಯಾಗಾರಕ್ಕೆ ಬರಲಿದ್ದು, ಆನಂತರ ಕೆತ್ತನೆ ಕೆಲಸ ಪೂರ್ಣಪ್ರಮಾಣದಲ್ಲಿ ನಡೆಯಲಿದೆ’ ಎಂದು ವಿಎಚ್ಪಿ ನಾಯಕರೊಬ್ಬರು ಹೇಳಿದ್ದಾರೆ.</p>.<p>2017ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ ಇಲ್ಲಿಗೆ ಹಲವು ಲೋಡ್ಗಳಷ್ಟು ಕಲ್ಲುಗಳು ಬಂದಿವೆ. ಸಾಧ್ಯವಾದಷ್ಟು ಬೇಗ ಕೆಲಸವನ್ನು ಪೂರ್ಣಗೊಳಿಸುವ ಸಲುವಾಗಿ ವಿಎಚ್ಪಿಯವರು ಇನ್ನಷ್ಟು ಕುಶಲಕರ್ಮಿಗಳನ್ನು ಇಲ್ಲಿಗೆ ಕರೆತರುವ ನಿರೀಕ್ಷೆ ಇದೆ.</p>.<p>ಮುಸ್ಲಿಂ ಸಮುದಾಯದ ಸುಮಾರು 25 ಮಂದಿ ಸೋಮವಾರ ಕಾರ್ಯಾಗಾರಕ್ಕೆ ಬಂದು ಶುಚೀಕರಣ ಕೆಲಸದಲ್ಲಿ ತೊಡಗಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಸಮರ್ಥಿಸುತ್ತಿರುವ ಬಬ್ಲು ಖಾನ್ ಅವರು ಈ ತಂಡದ ನೇತೃತ್ವ ವಹಿಸಿದ್ದಾರೆ.</p>.<p>ವಿವಾದಿತ ಜಾಗದ ಮಾಲೀಕತ್ವವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿರುವ ಮುಸ್ಲಿಂ ಸಂಘಟನೆಗಳು ಅಯೋಧ್ಯೆಯಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗೆ ಹೆಚ್ಚಿನ ಮಹತ್ವ ನೀಡಿಲ್ಲ. ‘ಅದು (ಕೆತ್ತನೆ ಕೆಲಸ) ಒಟ್ಟಾರೆ ಪ್ರಕರಣದ ಮೇಲೆ ಯಾವುದೇ ಪರಿಣಾಮ ಉಂಟುಮಾಡುವುದಿಲ್ಲ. ನಾವು ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿರುತ್ತೇವೆ’ ಎಂದು ಫಿರ್ಯಾದಿದಾರರಲ್ಲಿ ಒಬ್ಬರಾದ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.</p>.<p><strong>ಬಾಬರನ ವಂಶಸ್ಥನಿಂದ ಚಿನ್ನದ ಇಟ್ಟಿಗೆ!</strong><br />ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರಕ್ಕಾಗಿ ಚಿನ್ನದ ಇಟ್ಟಿಗೆಯನ್ನು ದೇಣಿಗೆಯಾಗಿ ನೀಡುವುದಾಗಿ ಮೊಘಲರ ಕೊನೆಯ ದೊರೆ ಬಹಾದುರ್ ಶಾ ಜಫರ್ ಅವರ ವಂಶಸ್ಥ ಎನ್ನಲಾದ ಪ್ರಿನ್ಸ್ ಹಬೀಬುದ್ದೀನ್ ತುಸಿ ಹೇಳಿದ್ದಾರೆ.</p>.<p>‘1529ರಲ್ಲಿ ಬಾಬರಿ ಮಸೀದಿ ನಿರ್ಮಾಣವಾಗುವ ಸಂದರ್ಭದಲ್ಲಿ ದೊರೆಯಾಗಿದ್ದ ಚಕ್ರವರ್ತಿ ಬಾಬರನ ವಂಶಸ್ಥನಾಗಿರುವುದರಿಂದ ಅಯೋಧ್ಯೆಯ ವಿವಾದಿತ ಭೂಮಿಯ ಮೇಲೆ ಮೊದಲ ಅಧಿಕಾರ ನನಗಿದೆ. ಸುಪ್ರೀಂ ಕೋರ್ಟ್ ಆ ಭೂಮಿಯನ್ನು ನನಗೆ ಹಸ್ತಾಂತರಿಸಬೇಕು. ಬಾಬರಿ ಮಸೀದಿ ಇದ್ದ ಜಾಗದಲ್ಲಿ ರಾಮ ಮಂದಿರ ಇತ್ತು ಎಂದು ನಂಬಿರುವವರ ಭಾವನೆಯನ್ನು ನಾನು ಗೌರವಿಸುತ್ತೇನೆ. ಆದ್ದರಿಂದ ಸುಪ್ರೀಂ ಕೋರ್ಟ್ ಆ ಭೂಮಿಯನ್ನು ನನಗೆ ಕೊಟ್ಟರೆ ಅದನ್ನು ರಾಮ ಮಂದಿರ ನಿರ್ಮಾಣಕ್ಕಾಗಿ ದಾನವಾಗಿ ನೀಡುತ್ತೇನೆ’ ಎಂದು ತುಸಿ ಹೇಳಿದ್ದಾರೆ.</p>.<p>ಭೂಮಿಯ ಮಾಲೀಕತ್ವದ ವಿಚಾರವಾಗಿ ತುಸಿ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿಯೊಂದನ್ನು ಸಲ್ಲಿಸಿದ್ದು, ಅದನ್ನು ಕೋರ್ಟ್ ಇನ್ನೂ ಮಾನ್ಯ ಮಾಡಿಲ್ಲ. ‘ಕೋರ್ಟ್ ಮೊರೆ ಹೋಗಿರುವ ಯಾರ ಬಳಿಯೂ ಭೂಮಿಗೆ ಸಂಬಂಧಿಸಿದ ದಾಖಲೆಗಳಿಲ್ಲ. ಆದರೆ ನನ್ನ ಬಳಿ ಇವೆ’ ಎಂದು ತುಸಿ ಹೇಳಿದ್ದಾರೆ.</p>.<p>ತುಸಿ ಅವರು ಅಯೋಧ್ಯೆಗೆ ಈಗಾಗಲೇ ಮೂರು ಬಾರಿ ಭೇಟಿ ನೀಡಿದ್ದಾರೆ. ಕಳೆದ ವರ್ಷ ಭೇಟಿ ನೀಡಿದ್ದಾಗ ರಾಮನ ‘ಚರಣ ಪಾದುಕೆ’ಗಳನ್ನು ತಲೆಯ ಮೇಲಿಟ್ಟು, ಮಂದಿರವನ್ನು ನಾಶಮಾಡಿರುವುದಕ್ಕಾಗಿ ಸಾಂಕೇತಿಕವಾಗಿ ಹಿಂದೂಗಳ ಕ್ಷಮೆ ಯಾಚಿಸಿ, ಭೂಮಿಯನ್ನು ಕೊಡುವ ವಾಗ್ದಾನ ಮಾಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ರಾಮ ಮಂದಿರ–ಬಾಬರಿ ಮಸೀದಿ ವಿಚಾರವಾಗಿ ಸದ್ಯದಲ್ಲೇ ತೀರ್ಪು ಬರಬಹುದೆಂಬ ಭಾವನೆ ದಟ್ಟವಾಗಿದ್ದು, ವಿಶ್ವ ಹಿಂದೂ ಪರಿಷತ್ತಿನವರು (ವಿಎಚ್ಪಿ) ಮಂದಿರ ನಿರ್ಮಾಣಕ್ಕೆ ಬೇಕಾದ ಸಿದ್ಧತೆಗಳನ್ನು ಚುರುಕುಗೊಳಿಸಿದ್ದಾರೆ.</p>.<p>ರಾಮ ಮಂದಿರ ನಿರ್ಮಾಣಕ್ಕಾಗಿ ಕೆತ್ತನೆ ಮಾಡಿರುವ ಕಲ್ಲುಗಳನ್ನು ಬಳಸಲು ನಿರ್ಧರಿಸಿರುವ ವಿಎಚ್ಪಿಯವರು ಈಚೆಗೆ ಕೆತ್ತನೆ ಕೆಲಸಗಳನ್ನು ತ್ವರಿತಗೊಳಿಸಿದ್ದಾರೆ. ಅಯೋಧ್ಯೆಯ ಕರಸೇವಕಪುರದಲ್ಲಿರುವ ಕಾರ್ಯಾಗಾರದಲ್ಲಿ ಕಲ್ಲುಗಳನ್ನು ಶುಚಿಗೊಳಿಸುವ ಕೆಲಸದಲ್ಲಿ ಮುಸ್ಲಿಂ ಸಮುದಾಯದವರು ಸಹ ನೆರವಾಗುತ್ತಿದ್ದಾರೆ.</p>.<p>‘ಸುಪ್ರೀಂ ಕೋರ್ಟ್ ಈಗ ಪ್ರತಿನಿತ್ಯ ವಿಚಾರಣೆ ನಡೆಸುತ್ತಿದೆ. ಶೀಘ್ರದಲ್ಲೇ ತೀರ್ಪು ಬರಬಹುದೆಂಬ ನಿರೀಕ್ಷೆಯಲ್ಲಿದ್ದೇವೆ. ರಾಜಸ್ಥಾನದಿಂದ ಇನ್ನಷ್ಟು ಕಲ್ಲುಗಳು ಕಾರ್ಯಾಗಾರಕ್ಕೆ ಬರಲಿದ್ದು, ಆನಂತರ ಕೆತ್ತನೆ ಕೆಲಸ ಪೂರ್ಣಪ್ರಮಾಣದಲ್ಲಿ ನಡೆಯಲಿದೆ’ ಎಂದು ವಿಎಚ್ಪಿ ನಾಯಕರೊಬ್ಬರು ಹೇಳಿದ್ದಾರೆ.</p>.<p>2017ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ ಇಲ್ಲಿಗೆ ಹಲವು ಲೋಡ್ಗಳಷ್ಟು ಕಲ್ಲುಗಳು ಬಂದಿವೆ. ಸಾಧ್ಯವಾದಷ್ಟು ಬೇಗ ಕೆಲಸವನ್ನು ಪೂರ್ಣಗೊಳಿಸುವ ಸಲುವಾಗಿ ವಿಎಚ್ಪಿಯವರು ಇನ್ನಷ್ಟು ಕುಶಲಕರ್ಮಿಗಳನ್ನು ಇಲ್ಲಿಗೆ ಕರೆತರುವ ನಿರೀಕ್ಷೆ ಇದೆ.</p>.<p>ಮುಸ್ಲಿಂ ಸಮುದಾಯದ ಸುಮಾರು 25 ಮಂದಿ ಸೋಮವಾರ ಕಾರ್ಯಾಗಾರಕ್ಕೆ ಬಂದು ಶುಚೀಕರಣ ಕೆಲಸದಲ್ಲಿ ತೊಡಗಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಸಮರ್ಥಿಸುತ್ತಿರುವ ಬಬ್ಲು ಖಾನ್ ಅವರು ಈ ತಂಡದ ನೇತೃತ್ವ ವಹಿಸಿದ್ದಾರೆ.</p>.<p>ವಿವಾದಿತ ಜಾಗದ ಮಾಲೀಕತ್ವವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿರುವ ಮುಸ್ಲಿಂ ಸಂಘಟನೆಗಳು ಅಯೋಧ್ಯೆಯಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗೆ ಹೆಚ್ಚಿನ ಮಹತ್ವ ನೀಡಿಲ್ಲ. ‘ಅದು (ಕೆತ್ತನೆ ಕೆಲಸ) ಒಟ್ಟಾರೆ ಪ್ರಕರಣದ ಮೇಲೆ ಯಾವುದೇ ಪರಿಣಾಮ ಉಂಟುಮಾಡುವುದಿಲ್ಲ. ನಾವು ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿರುತ್ತೇವೆ’ ಎಂದು ಫಿರ್ಯಾದಿದಾರರಲ್ಲಿ ಒಬ್ಬರಾದ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.</p>.<p><strong>ಬಾಬರನ ವಂಶಸ್ಥನಿಂದ ಚಿನ್ನದ ಇಟ್ಟಿಗೆ!</strong><br />ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರಕ್ಕಾಗಿ ಚಿನ್ನದ ಇಟ್ಟಿಗೆಯನ್ನು ದೇಣಿಗೆಯಾಗಿ ನೀಡುವುದಾಗಿ ಮೊಘಲರ ಕೊನೆಯ ದೊರೆ ಬಹಾದುರ್ ಶಾ ಜಫರ್ ಅವರ ವಂಶಸ್ಥ ಎನ್ನಲಾದ ಪ್ರಿನ್ಸ್ ಹಬೀಬುದ್ದೀನ್ ತುಸಿ ಹೇಳಿದ್ದಾರೆ.</p>.<p>‘1529ರಲ್ಲಿ ಬಾಬರಿ ಮಸೀದಿ ನಿರ್ಮಾಣವಾಗುವ ಸಂದರ್ಭದಲ್ಲಿ ದೊರೆಯಾಗಿದ್ದ ಚಕ್ರವರ್ತಿ ಬಾಬರನ ವಂಶಸ್ಥನಾಗಿರುವುದರಿಂದ ಅಯೋಧ್ಯೆಯ ವಿವಾದಿತ ಭೂಮಿಯ ಮೇಲೆ ಮೊದಲ ಅಧಿಕಾರ ನನಗಿದೆ. ಸುಪ್ರೀಂ ಕೋರ್ಟ್ ಆ ಭೂಮಿಯನ್ನು ನನಗೆ ಹಸ್ತಾಂತರಿಸಬೇಕು. ಬಾಬರಿ ಮಸೀದಿ ಇದ್ದ ಜಾಗದಲ್ಲಿ ರಾಮ ಮಂದಿರ ಇತ್ತು ಎಂದು ನಂಬಿರುವವರ ಭಾವನೆಯನ್ನು ನಾನು ಗೌರವಿಸುತ್ತೇನೆ. ಆದ್ದರಿಂದ ಸುಪ್ರೀಂ ಕೋರ್ಟ್ ಆ ಭೂಮಿಯನ್ನು ನನಗೆ ಕೊಟ್ಟರೆ ಅದನ್ನು ರಾಮ ಮಂದಿರ ನಿರ್ಮಾಣಕ್ಕಾಗಿ ದಾನವಾಗಿ ನೀಡುತ್ತೇನೆ’ ಎಂದು ತುಸಿ ಹೇಳಿದ್ದಾರೆ.</p>.<p>ಭೂಮಿಯ ಮಾಲೀಕತ್ವದ ವಿಚಾರವಾಗಿ ತುಸಿ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿಯೊಂದನ್ನು ಸಲ್ಲಿಸಿದ್ದು, ಅದನ್ನು ಕೋರ್ಟ್ ಇನ್ನೂ ಮಾನ್ಯ ಮಾಡಿಲ್ಲ. ‘ಕೋರ್ಟ್ ಮೊರೆ ಹೋಗಿರುವ ಯಾರ ಬಳಿಯೂ ಭೂಮಿಗೆ ಸಂಬಂಧಿಸಿದ ದಾಖಲೆಗಳಿಲ್ಲ. ಆದರೆ ನನ್ನ ಬಳಿ ಇವೆ’ ಎಂದು ತುಸಿ ಹೇಳಿದ್ದಾರೆ.</p>.<p>ತುಸಿ ಅವರು ಅಯೋಧ್ಯೆಗೆ ಈಗಾಗಲೇ ಮೂರು ಬಾರಿ ಭೇಟಿ ನೀಡಿದ್ದಾರೆ. ಕಳೆದ ವರ್ಷ ಭೇಟಿ ನೀಡಿದ್ದಾಗ ರಾಮನ ‘ಚರಣ ಪಾದುಕೆ’ಗಳನ್ನು ತಲೆಯ ಮೇಲಿಟ್ಟು, ಮಂದಿರವನ್ನು ನಾಶಮಾಡಿರುವುದಕ್ಕಾಗಿ ಸಾಂಕೇತಿಕವಾಗಿ ಹಿಂದೂಗಳ ಕ್ಷಮೆ ಯಾಚಿಸಿ, ಭೂಮಿಯನ್ನು ಕೊಡುವ ವಾಗ್ದಾನ ಮಾಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>