<p><strong>ತಿರುವರೂರು:</strong> ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ವಿಜಯ್ ಅವರು ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದರು. ತಮಿಳುನಾಡಿನಲ್ಲಿ ‘ಕುಟುಂಬ ಪ್ರಾಬಲ್ಯ’ವನ್ನು ತೊಡೆದುಹಾಕುವುದೇ ಟಿವಿಕೆ ಗುರಿ ಎಂದು ಹೇಳಿದರು.</p>.<p>ಬೃಹತ್ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ನೀವು ಮತ ಹಾಕುವುದಿಲ್ಲವೇ? ಇದು ಶೂನ್ಯ ಸಭೆಯೇ ಎಂದು ಭಾಗಿಯಾದ ಜನರನ್ನು ಪ್ರಶ್ನಿಸಿದರು. ಆಗ ‘ವಿಜಯ್... ವಿಜಯ್’ ಎಂಬ ಘೋಷಣೆ ಮೊಳಗಿತು.</p>.<p>‘ಡಿಎಂಕೆ ಸರ್ಕಾರವು ತಿರುವರೂರನ್ನು ನಿರ್ಲಕ್ಷಿಸಿದೆ. ಜಿಲ್ಲೆಯಲ್ಲಿ ರಸ್ತೆ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಇದೆ’ ಎಂದರು.</p>.<p>ಸುಮಾರು 50 ವರ್ಷಗಳಿಂದ ತಿರುವರೂರು ಡಿಎಂಕೆಯ ಭದ್ರಕೋಟೆಯಾಗಿದೆ. ಡಿಎಂಕೆಯ ದಿಗ್ಗಜ ನಾಯಕ ಎಂ.ಕರುಣಾನಿಧಿ ಅವರ ಜನ್ಮಸ್ಥಳವೂ ಹೌದು.</p>.ತಮಿಳುನಾಡು | ರಾಜಕೀಯ ಸಭೆಗಳಿಗೆ DMK ಷರತ್ತು: ನಟ ವಿಜಯ್ ತಿರುಗೇಟು ಹೀಗಿತ್ತು....<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವರೂರು:</strong> ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ವಿಜಯ್ ಅವರು ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದರು. ತಮಿಳುನಾಡಿನಲ್ಲಿ ‘ಕುಟುಂಬ ಪ್ರಾಬಲ್ಯ’ವನ್ನು ತೊಡೆದುಹಾಕುವುದೇ ಟಿವಿಕೆ ಗುರಿ ಎಂದು ಹೇಳಿದರು.</p>.<p>ಬೃಹತ್ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ನೀವು ಮತ ಹಾಕುವುದಿಲ್ಲವೇ? ಇದು ಶೂನ್ಯ ಸಭೆಯೇ ಎಂದು ಭಾಗಿಯಾದ ಜನರನ್ನು ಪ್ರಶ್ನಿಸಿದರು. ಆಗ ‘ವಿಜಯ್... ವಿಜಯ್’ ಎಂಬ ಘೋಷಣೆ ಮೊಳಗಿತು.</p>.<p>‘ಡಿಎಂಕೆ ಸರ್ಕಾರವು ತಿರುವರೂರನ್ನು ನಿರ್ಲಕ್ಷಿಸಿದೆ. ಜಿಲ್ಲೆಯಲ್ಲಿ ರಸ್ತೆ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಇದೆ’ ಎಂದರು.</p>.<p>ಸುಮಾರು 50 ವರ್ಷಗಳಿಂದ ತಿರುವರೂರು ಡಿಎಂಕೆಯ ಭದ್ರಕೋಟೆಯಾಗಿದೆ. ಡಿಎಂಕೆಯ ದಿಗ್ಗಜ ನಾಯಕ ಎಂ.ಕರುಣಾನಿಧಿ ಅವರ ಜನ್ಮಸ್ಥಳವೂ ಹೌದು.</p>.ತಮಿಳುನಾಡು | ರಾಜಕೀಯ ಸಭೆಗಳಿಗೆ DMK ಷರತ್ತು: ನಟ ವಿಜಯ್ ತಿರುಗೇಟು ಹೀಗಿತ್ತು....<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>