<p><strong>ಕತಿಹಾರ್</strong>: ಬಿಹಾರದಲ್ಲಿ ‘ಇಂಡಿಯಾ’ ಬಣ ಅಧಿಕಾರಕ್ಕೆ ಬಂದರೆ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಕಸದ ಬುಟ್ಟಿಗೆ ಹಾಕುವುದಾಗಿ ‘ಇಂಡಿಯಾ’ ಬಣದ ಮುಖ್ಯಮಂತ್ರಿ ಅಭ್ಯರ್ಥಿ, ಆರ್ಜೆಡಿ ನಾಯಕ ಜೇಜಸ್ವಿ ಯಾದವ್ ಹೇಳಿದ್ದಾರೆ.</p><p>ಮುಸಲ್ಮಾನರು ಅಧಿಕ ಪ್ರಮಾಣದಲ್ಲಿರುವ ಕತಿಹಾರ್ನಲ್ಲಿ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ತಂದೆ, ಆರ್ಜೆಡಿ ವರಿಷ್ಠ ಲಾಲೂ ಪ್ರಸಾದ್ ಅವರು ದೇಶದಲ್ಲಿ ಕೋಮುವಾದಿಗಳ ಜೊತೆ ಎಂದಿಗೂ ರಾಜಿ ಮಾಡಿಕೊಂಡಿಲ್ಲ ಎಂದಿದ್ದಾರೆ.</p><p>‘ಆದರೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅಂತಹ ಶಕ್ತಿಗಳಿಗೆ ಸದಾ ಬೆಂಬಲ ನೀಡಿದ್ದಾರೆ. ಅವರಿಂದಾಗಿಯೇ ಆರ್ಎಸ್ಎಸ್ ಮತ್ತು ಅದಕ್ಕೆ ಸಂಬಂಧಿಸಿದ ಸಂಘಟನೆಗಳು ದೇಶದಲ್ಲಿ ಕೋಮು ದ್ವೇಷವನ್ನು ಹರಡುತ್ತಿವೆ. ಬಿಜೆಪಿಯನ್ನು ಭಾರತ್ ಜಲಾವೊ ಪಕ್ಷ ಎಂದು ಕರೆಯಬೇಕಿದೆ. ರಾಜ್ಯದಲ್ಲಿ ಇಂಡಿಯಾ ಬಣ ಅಧಿಕಾರಕ್ಕೆ ಬಂದರೆ ನಾವು ವಕ್ಫ್ ಕಾಯ್ದೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ’ಎಂದಿದ್ದಾರೆ.</p><p>ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಸತ್ ಅನುಮೋದನೆ ನೀಡಿದೆ. ಈ ಕಾಯ್ದೆಯು ವಕ್ಫ್ ಮಂಡಳಿಯಲ್ಲಿ ಪಾರದರ್ಶಕತೆ ಮತ್ತು ಹಿಂದುಳಿದ ಮುಸ್ಲಿಮರಿಗೆ ಅನುಕೂಲ ಮಾಡಿಕೊಡಲಿದೆ ಎಂದು ಬಿಜೆಪಿ ನೇತೃತ್ವದ ಎನ್ಡಿಎ ವಾದಿಸಿದರೆ, ಮುಸ್ಲಿಮರ ಹಕ್ಕುಗಳನ್ನು ಕಾಯ್ದೆ ಉಲ್ಲಂಘಿಸುತ್ತದೆ ಎಂದು ವಿರೋಧ ಪಕ್ಷಗಳು ವಾದಿಸುತ್ತಿವೆ.</p><p>ತೇಜಸ್ವಿ ಅಧಿಕಾರಕ್ಕೆ ಬಂದರೆ ವಕ್ಫ್ ಕಾಯ್ದೆ ಸೇರಿ ಎಲ್ಲ ಮಸೂದೆಗಳನ್ನು ಹರಿದು ಹಾಕುತ್ತಾರೆ ಎಂದು ಆರ್ಜೆಡಿ ಎಂಎಲ್ಸಿ ಮೊಹಮ್ಮದ ಖಾರಿ ಸೊಹೈಬ್ ಹೇಳಿದ್ದರು. ಕೇಂದ್ರದ ಕಾಯ್ದೆಯನ್ನು ಒಂದು ರಾಜ್ಯದ ಮುಳ್ಯಮಂತ್ರಿ ಹೇಗೆ ರದ್ದು ಮಾಡಲು ಸಾಧ್ಯ ಎಂದು ಎನ್ಡಿಎ ಪ್ರಶ್ನಿಸಿತ್ತು.</p><p>ರಾಜ್ಯದ ಪ್ರತಿಯೊಂದು ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದೂ ತೇಜಸ್ವಿ ದೂರಿದ್ದಾರೆ.</p> <p>‘ನಾವು ಅಧಿಕಾರಕ್ಕೆ ಬಂದರೆ ಈ ಪ್ರದೇಶದ ಸಂಪೂರ್ಣ ಅಭಿವೃದ್ಧಿಗೆ ಸೀಮಾಚಲ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.</p><p>ವೃದ್ಧಾಪ್ಯ ವೇತನವನ್ನು ನಿತೀಶ್ ಸರ್ಕಾರ ₹1100ಕ್ಕೆ ಹೆಚ್ಚಿಸಿದೆ. ನಾವು ಅದನ್ನು ₹2000ಕ್ಕೆ ಹೆಚ್ಚಿಸುತ್ತೇವೆ ಎಂದಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕತಿಹಾರ್</strong>: ಬಿಹಾರದಲ್ಲಿ ‘ಇಂಡಿಯಾ’ ಬಣ ಅಧಿಕಾರಕ್ಕೆ ಬಂದರೆ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಕಸದ ಬುಟ್ಟಿಗೆ ಹಾಕುವುದಾಗಿ ‘ಇಂಡಿಯಾ’ ಬಣದ ಮುಖ್ಯಮಂತ್ರಿ ಅಭ್ಯರ್ಥಿ, ಆರ್ಜೆಡಿ ನಾಯಕ ಜೇಜಸ್ವಿ ಯಾದವ್ ಹೇಳಿದ್ದಾರೆ.</p><p>ಮುಸಲ್ಮಾನರು ಅಧಿಕ ಪ್ರಮಾಣದಲ್ಲಿರುವ ಕತಿಹಾರ್ನಲ್ಲಿ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ತಂದೆ, ಆರ್ಜೆಡಿ ವರಿಷ್ಠ ಲಾಲೂ ಪ್ರಸಾದ್ ಅವರು ದೇಶದಲ್ಲಿ ಕೋಮುವಾದಿಗಳ ಜೊತೆ ಎಂದಿಗೂ ರಾಜಿ ಮಾಡಿಕೊಂಡಿಲ್ಲ ಎಂದಿದ್ದಾರೆ.</p><p>‘ಆದರೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅಂತಹ ಶಕ್ತಿಗಳಿಗೆ ಸದಾ ಬೆಂಬಲ ನೀಡಿದ್ದಾರೆ. ಅವರಿಂದಾಗಿಯೇ ಆರ್ಎಸ್ಎಸ್ ಮತ್ತು ಅದಕ್ಕೆ ಸಂಬಂಧಿಸಿದ ಸಂಘಟನೆಗಳು ದೇಶದಲ್ಲಿ ಕೋಮು ದ್ವೇಷವನ್ನು ಹರಡುತ್ತಿವೆ. ಬಿಜೆಪಿಯನ್ನು ಭಾರತ್ ಜಲಾವೊ ಪಕ್ಷ ಎಂದು ಕರೆಯಬೇಕಿದೆ. ರಾಜ್ಯದಲ್ಲಿ ಇಂಡಿಯಾ ಬಣ ಅಧಿಕಾರಕ್ಕೆ ಬಂದರೆ ನಾವು ವಕ್ಫ್ ಕಾಯ್ದೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ’ಎಂದಿದ್ದಾರೆ.</p><p>ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಸತ್ ಅನುಮೋದನೆ ನೀಡಿದೆ. ಈ ಕಾಯ್ದೆಯು ವಕ್ಫ್ ಮಂಡಳಿಯಲ್ಲಿ ಪಾರದರ್ಶಕತೆ ಮತ್ತು ಹಿಂದುಳಿದ ಮುಸ್ಲಿಮರಿಗೆ ಅನುಕೂಲ ಮಾಡಿಕೊಡಲಿದೆ ಎಂದು ಬಿಜೆಪಿ ನೇತೃತ್ವದ ಎನ್ಡಿಎ ವಾದಿಸಿದರೆ, ಮುಸ್ಲಿಮರ ಹಕ್ಕುಗಳನ್ನು ಕಾಯ್ದೆ ಉಲ್ಲಂಘಿಸುತ್ತದೆ ಎಂದು ವಿರೋಧ ಪಕ್ಷಗಳು ವಾದಿಸುತ್ತಿವೆ.</p><p>ತೇಜಸ್ವಿ ಅಧಿಕಾರಕ್ಕೆ ಬಂದರೆ ವಕ್ಫ್ ಕಾಯ್ದೆ ಸೇರಿ ಎಲ್ಲ ಮಸೂದೆಗಳನ್ನು ಹರಿದು ಹಾಕುತ್ತಾರೆ ಎಂದು ಆರ್ಜೆಡಿ ಎಂಎಲ್ಸಿ ಮೊಹಮ್ಮದ ಖಾರಿ ಸೊಹೈಬ್ ಹೇಳಿದ್ದರು. ಕೇಂದ್ರದ ಕಾಯ್ದೆಯನ್ನು ಒಂದು ರಾಜ್ಯದ ಮುಳ್ಯಮಂತ್ರಿ ಹೇಗೆ ರದ್ದು ಮಾಡಲು ಸಾಧ್ಯ ಎಂದು ಎನ್ಡಿಎ ಪ್ರಶ್ನಿಸಿತ್ತು.</p><p>ರಾಜ್ಯದ ಪ್ರತಿಯೊಂದು ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದೂ ತೇಜಸ್ವಿ ದೂರಿದ್ದಾರೆ.</p> <p>‘ನಾವು ಅಧಿಕಾರಕ್ಕೆ ಬಂದರೆ ಈ ಪ್ರದೇಶದ ಸಂಪೂರ್ಣ ಅಭಿವೃದ್ಧಿಗೆ ಸೀಮಾಚಲ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.</p><p>ವೃದ್ಧಾಪ್ಯ ವೇತನವನ್ನು ನಿತೀಶ್ ಸರ್ಕಾರ ₹1100ಕ್ಕೆ ಹೆಚ್ಚಿಸಿದೆ. ನಾವು ಅದನ್ನು ₹2000ಕ್ಕೆ ಹೆಚ್ಚಿಸುತ್ತೇವೆ ಎಂದಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>