ಮಹೇಶಿಂದರ್ ಮತ್ತು ಧರಂಪಾಲ್ ಅವರು ಇತ್ತೀಚೆಗೆ ಮೋಗಾ ಜಿಲ್ಲೆಯಲ್ಲಿ ಆಯೋಜಿಸಿದ್ದ ರ್ಯಾಲಿಯನ್ನು ಉದ್ದೇಶಿಸಿ ನವಜೋತ್ ಸಿಂಗ್ ಸಿಧು ಮಾತನಾಡಿದ್ದರು. ಇದರ ಬೆನ್ನಲ್ಲೇ, ಈ ಇಬ್ಬರಿಗೆ ಶೋಕಾಸ್ ನೋಟಿಸ್ ನೀಡಿದ್ದ ವಾರಿಂಗ್, ರ್ಯಾಲಿ ಆಯೋಜಿಸಿರುವ ಕುರಿತು ಸ್ಥಳೀಯ ನಾಯಕತ್ವಕ್ಕೆ ಏಕೆ ಮಾಹಿತಿ ನೀಡಿರಲಿಲ್ಲ ಎಂಬ ಬಗ್ಗೆ ಎರಡು ದಿನಗಳ ಒಳಗಾಗಿ ಉತ್ತರಿಸುವಂತೆ ಸೂಚಿಸಿದ್ದರು.