ಉತ್ತರ ಪ್ರದೇಶದ ಶ್ರೀ ಕಲ್ಕಿ ಧಾಮ ದೇವಾಲಯ ನಿರ್ಮಾಣದ ಶಂಕುಸ್ಥಾಪನೆಯನ್ನು ನೇರವೇರಿಸಿ ಮಾತನಾಡಿದ ಅವರು, ಜನವರಿ 22ರಿಂದ ಹೊಸ ಯುಗ ಪ್ರಾರಂಭವಾಗಿದೆ ಎಂದು ಅಯೋಧ್ಯೆಯ ಬಾಲ ರಾಮ ಪ್ರಾಣ ಪ್ರತಿಷ್ಠಾಪನೆಯ ದಿನದಂದು ಹೇಳಿದ್ದ ಮಾತನ್ನು ಪುನರುಚ್ಚರಿಸಿದ್ದಾರೆ.
‘ಶ್ರೀ ರಾಮನ ಆಳ್ವಿಕೆಯು ಸಾವಿರ ವರ್ಷಗಳವರೆಗೆ ಪ್ರಭಾವ ಬೀರಿತ್ತು. ಹಾಗೆಯೇ, ಬಾಲ ರಾಮ ಪ್ರಾಣ ಪ್ರತಿಷ್ಠಾಪನೆಯೊಂದಿಗೆ ಮುಂದಿನ ಸಾವಿರ ವರ್ಷಗಳವರೆಗೆ ದೇಶಕ್ಕೆ ಹೊಸ ಪ್ರಯಾಣ ಪ್ರಾರಂಭಗೊಂಡಿದೆ. ಭಾರತವೆಂಬ ದೇಗುಲವನ್ನು ಮರುನಿರ್ಮಾಣಗೊಳಿಸುವ ಕರ್ತವ್ಯವನ್ನು ದೇವರು ನನಗೆ ನೀಡಿದ್ದಾನೆ’ ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕಲ್ಕಿ ಧಾಮ ಪೀಠಾಧೀಶ್ವರ ಆಚಾರ್ಯ ಪ್ರಮೋದ್ ಕೃಷ್ಣಂ ಅವರ ಸಮ್ಮುಖದಲ್ಲಿ ಪ್ರಧಾನಿ ಮೋದಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.