ಹೈದರಾಬಾದ್: ಕಳೆದ ಐದು ವರ್ಷಗಳಿಂದ ಅಂಬಾನಿ–ಅದಾನಿಯನ್ನು ಗುರಿಯಾಗಿಸಿಕೊಂಡು ಪ್ರಶ್ನೆ ಮಾಡುತ್ತಿದ್ದ ಶೆಹಜಾದಾ(ರಾಹುಲ್ ಗಾಂಧಿ) ಇದೀಗ ಏಕಾಏಕಿ ಪ್ರಶ್ನಿಸುವುದನ್ನು ನಿಲ್ಲಿಸಿದ್ದಾರೆ. ಈ ಬದಲಾವಣೆಗೆ ಕಾರಣವೇನೆಂದು ಕಾಂಗ್ರೆಸ್ ಸ್ಪಷ್ಟಪಡಿಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ತೆಲಂಗಾಣದ ವೇಮುಲವಾಡದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅಂಬಾನಿ–ಅದಾನಿಯನ್ನು ಗುರಿಯಾಗಿಸಿಕೊಂಡು ನಿಂದಿಸುವುದನ್ನು ಈ ಜನರು (ಕಾಂಗ್ರೆಸ್) ನಿಲ್ಲಿಸಿದ್ದಾರೆ. ತೆಲಂಗಾಣದ ಮಣ್ಣಿನಲ್ಲಿ ನಿಂತು ಕೇಳಲು ಇಷ್ಟಪಡುತ್ತೇನೆ, ಅಂಬಾನಿ–ಅದಾನಿಯಿಂದ ಎಷ್ಟು ಪಡೆದುಕೊಂಡಿದ್ದಿರಿ ಎಂಬುವುದನ್ನು ರಾಜಕುಮಾರನೇ(ರಾಹುಲ್ ಗಾಂಧಿ) ಘೋಷಿಸಲಿ. ರಾತ್ರೋರಾತ್ರಿ ಈ ಬದಲಾವಣೆಯಾಗಲು ಕಾಂಗ್ರೆಸ್ ಯಾವ ಒಪ್ಪಂದಕ್ಕೆ ಬಂದಿದೆ ಎಂದೂ ಹೇಳಲಿ’ ಎಂದರು.