<p><strong>ನವದೆಹಲಿ</strong>: ಸದ್ಯ ಎದುರಾಗಿರುವ ಕೋವಿಡ್–19 ಸಾಂಕ್ರಾಮಿಕದ ಸನ್ನಿವೇಶದಲ್ಲಿ ಭಾರತ ತೆಗೆದುಕೊಂಡಿರುವ ಕ್ರಮಗಳನ್ನು ಜಗತ್ತು ಶ್ಲಾಘಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.</p>.<p>ರಾಜ್ಯಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಮಾತನಾಡಿದ ಪ್ರಧಾನಿ, 'ರಾಷ್ಟ್ರಪತಿಗಳ ಭಾಷಣವು ಸ್ಥೈರ್ಯ, ಭರವಸೆ ಮತ್ತು ಸಮರ್ಪಣಾ ಭಾವದಿಂದ ಕೂಡಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<p>'ರಾಷ್ಟ್ರಪತಿಯವರು ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದ ಸಮಾಜದ ಎಲ್ಲ ವರ್ಗದ ಜನರಿಗಾಗಿ ವಿವಿಧ ಕ್ರಮಗಳನ್ನು ಕೈಗೊಂಡಿದ್ದಾರೆ. ಇದು ನಮ್ಮಲ್ಲಿ ಸ್ಥೈರ್ಯ ಮತ್ತು ಭರವಸೆ ಮೂಡಿಸುತ್ತದೆ. ಅವರ ಮಾರ್ಗದರ್ಶನದಲ್ಲಿ ನಾವು ಇಂತಹ ಹೊಸ ಕ್ರಮಗಳನ್ನು ಕೈಗೊಳ್ಳುವುದನ್ನು ಮುಂದುವರಿಸುತ್ತೇವೆ' ಎಂದು ತಿಳಿಸಿದ್ದಾರೆ.</p>.<p>ಮುಂದುವರಿದು, 'ಕೋವಿಡ್–19 ಸಾಂಕ್ರಾಮಿಕವಾಗಿದೆ. ಮನುಕುಲವು ಕಳೆದ 100 ವರ್ಷಗಳಲ್ಲಿಯೇ ಇಂತಹ ಸಂಕಷ್ಟವನ್ನು ಕಂಡಿರಲಿಲ್ಲ. ಈ ಬಿಕ್ಕಟ್ಟು ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತಿದ್ದು, ಜನರಿಗೆ ತೊಂದರೆ ನೀಡುತ್ತಲೇ ಇದೆ. ಇಡೀ ದೇಶ ಮತ್ತು ಜಗತ್ತು ಇದರ ವಿರುದ್ಧ ಹೋರಾಟ ಮುಂದುವರಿಸಿದೆ' ಎಂದಿದ್ದಾರೆ.</p>.<p>'ಕೋವಿಡ್ ಆರಂಭವಾದಾಗ, ಭಾರತದಲ್ಲಿ ಏನಾಗಬಹುದು ಎಂದು ಚರ್ಚಿಸಲಾಗುತ್ತಿತ್ತು. ಭಾರತದಿಂದ ವಿಶ್ವದ ಮೇಲೆ ಆಗಬಹುದಾದ ಪರಿಣಾಮವೇನು ಎಂದೂ ಚರ್ಚಿಸಲಾಗಿತ್ತು. ಆದರೆ, ದೇಶದ 130 ಕೋಟಿ ಜನರ ಇಚ್ಛಾಶಕ್ತಿ, ಶಿಸ್ತು ಮತ್ತು ಪರಿಶ್ರಮದಿಂದಾಗಿಭಾರತದ ಕ್ರಮಗಳು ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿವೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.</p>.<p>ಲಸಿಕೆ ಪಡೆದುಕೊಂಡಿರುವ ನಾಗರಿಕರು ಕೇವಲ ತಮ್ಮನ್ನು ತಾವು ಸುರಕ್ಷಿತರನ್ನಾಗಿಸಿಕೊಂಡಿಲ್ಲ. ಬದಲಾಗಿ ಬೇರೆಯವರನ್ನೂರಕ್ಷಿಸಿದ್ದಾರೆ. ಹಲವು ಪ್ರತಿಭಟನೆಗಳ ನಡುವೆಯೂ, ಲಸಿಕೆ ಅಭಿಯಾನ ಯಶಸ್ವಿಯಾಗಿರುವುದು ಶ್ಲಾಘನೀಯ ಎಂದೂ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಸದ್ಯ ಎದುರಾಗಿರುವ ಕೋವಿಡ್–19 ಸಾಂಕ್ರಾಮಿಕದ ಸನ್ನಿವೇಶದಲ್ಲಿ ಭಾರತ ತೆಗೆದುಕೊಂಡಿರುವ ಕ್ರಮಗಳನ್ನು ಜಗತ್ತು ಶ್ಲಾಘಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.</p>.<p>ರಾಜ್ಯಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಮಾತನಾಡಿದ ಪ್ರಧಾನಿ, 'ರಾಷ್ಟ್ರಪತಿಗಳ ಭಾಷಣವು ಸ್ಥೈರ್ಯ, ಭರವಸೆ ಮತ್ತು ಸಮರ್ಪಣಾ ಭಾವದಿಂದ ಕೂಡಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<p>'ರಾಷ್ಟ್ರಪತಿಯವರು ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದ ಸಮಾಜದ ಎಲ್ಲ ವರ್ಗದ ಜನರಿಗಾಗಿ ವಿವಿಧ ಕ್ರಮಗಳನ್ನು ಕೈಗೊಂಡಿದ್ದಾರೆ. ಇದು ನಮ್ಮಲ್ಲಿ ಸ್ಥೈರ್ಯ ಮತ್ತು ಭರವಸೆ ಮೂಡಿಸುತ್ತದೆ. ಅವರ ಮಾರ್ಗದರ್ಶನದಲ್ಲಿ ನಾವು ಇಂತಹ ಹೊಸ ಕ್ರಮಗಳನ್ನು ಕೈಗೊಳ್ಳುವುದನ್ನು ಮುಂದುವರಿಸುತ್ತೇವೆ' ಎಂದು ತಿಳಿಸಿದ್ದಾರೆ.</p>.<p>ಮುಂದುವರಿದು, 'ಕೋವಿಡ್–19 ಸಾಂಕ್ರಾಮಿಕವಾಗಿದೆ. ಮನುಕುಲವು ಕಳೆದ 100 ವರ್ಷಗಳಲ್ಲಿಯೇ ಇಂತಹ ಸಂಕಷ್ಟವನ್ನು ಕಂಡಿರಲಿಲ್ಲ. ಈ ಬಿಕ್ಕಟ್ಟು ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತಿದ್ದು, ಜನರಿಗೆ ತೊಂದರೆ ನೀಡುತ್ತಲೇ ಇದೆ. ಇಡೀ ದೇಶ ಮತ್ತು ಜಗತ್ತು ಇದರ ವಿರುದ್ಧ ಹೋರಾಟ ಮುಂದುವರಿಸಿದೆ' ಎಂದಿದ್ದಾರೆ.</p>.<p>'ಕೋವಿಡ್ ಆರಂಭವಾದಾಗ, ಭಾರತದಲ್ಲಿ ಏನಾಗಬಹುದು ಎಂದು ಚರ್ಚಿಸಲಾಗುತ್ತಿತ್ತು. ಭಾರತದಿಂದ ವಿಶ್ವದ ಮೇಲೆ ಆಗಬಹುದಾದ ಪರಿಣಾಮವೇನು ಎಂದೂ ಚರ್ಚಿಸಲಾಗಿತ್ತು. ಆದರೆ, ದೇಶದ 130 ಕೋಟಿ ಜನರ ಇಚ್ಛಾಶಕ್ತಿ, ಶಿಸ್ತು ಮತ್ತು ಪರಿಶ್ರಮದಿಂದಾಗಿಭಾರತದ ಕ್ರಮಗಳು ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿವೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.</p>.<p>ಲಸಿಕೆ ಪಡೆದುಕೊಂಡಿರುವ ನಾಗರಿಕರು ಕೇವಲ ತಮ್ಮನ್ನು ತಾವು ಸುರಕ್ಷಿತರನ್ನಾಗಿಸಿಕೊಂಡಿಲ್ಲ. ಬದಲಾಗಿ ಬೇರೆಯವರನ್ನೂರಕ್ಷಿಸಿದ್ದಾರೆ. ಹಲವು ಪ್ರತಿಭಟನೆಗಳ ನಡುವೆಯೂ, ಲಸಿಕೆ ಅಭಿಯಾನ ಯಶಸ್ವಿಯಾಗಿರುವುದು ಶ್ಲಾಘನೀಯ ಎಂದೂ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>