<p><strong>ತಿರುವನಂತಪುರ</strong>: ತಿರುವಾಂಕೂರು ರಾಜಮನೆತನದ ಕೊನೆಯ ಆಡಳಿತಗಾರ ಹಾಗೂ ಮಹಿಳೆಯೊಬ್ಬರ ನಡುವೆ ಇದ್ದ ಸಂಬಂಧವನ್ನು ತನ್ನ ಕೃತಿಯಲ್ಲಿ ಉಲ್ಲೇಖಿಸಿದ್ದ ಲೇಖಕ, ಇತಿಹಾಸಕಾರ ಎಂ.ಜಿ.ಶಶಿಭೂಷಣ್ ಅವರಿಗೆ ಜೀವ ಬೆದರಿಕೆ ಕೇಳಿಬಂದಿದೆ.</p> <p>ಶಶಿಭೂಷಣ್ ಅವರ ಕೃತಿ ‘ಮಂಜುಪೋಯ ಶಂಕುಮುದ್ರ’ದಲ್ಲಿರುವ ಉಲ್ಲೇಖ ಕುರಿತು ಈಗ ಆಕ್ಷೇಪ ವ್ಯಕ್ತವಾಗಿದೆ. ಜೀವ ಬೆದರಿಕೆ ವ್ಯಕ್ತವಾಗಿರುವ ಸಂಬಂಧ ತಿರುವನಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. </p> <p>ಈ ಬೆಳವಣಿಗೆಯಿಂದ ಮಾನಸಿಕ ಒತ್ತಡದಲ್ಲಿರುವ ಲೇಖಕರು, ‘ಹೊಸ ಕೃತಿಯಲ್ಲಿ ಬರೆದಿರುವ ಅಂಶಗಳಿಗೆ ನಾನು ಬದ್ಧನಾಗಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.</p><p>ಫೆಬ್ರುವರಿ ತಿಂಗಳಲ್ಲಿ ಕೃತಿ ಬಿಡುಗಡೆಗೊಂಡಿತ್ತು. ತಿರುವಾಂಕೂರು ರಾಜಮನೆತನದ ಕೊನೆಯ ಆಡಳಿತಗಾರ, ಅವಿವಾಹಿತ ಶ್ರೀ ಚಿತಿರಾ ತಿರುನಾಳ್ ಬಾಲರಮಣವರ್ಮ ಅವರು ಮಹಿಳೆ ಜೊತೆಗೆ ಹೊಂದಿದ್ದರು ಎನ್ನಲಾದ ಸಂಬಂಧ ಕುರಿತು ಈ ಕೃತಿಯಲ್ಲಿ ಉಲ್ಲೇಖವಿದೆ.</p><p>ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯ ಚರ್ಚೆಯಾದ ಹಿಂದೆಯೇ, ನಿರ್ದಿಷ್ಟ ವಿವರವನ್ನು ದಾಖಲಿಸಿದ್ದಕ್ಕೆ ಕಾರಣ, ಅದಕ್ಕಿರುವ ಸಾಕ್ಷ್ಯಗಳನ್ನು ಲೇಖಕರು ತಿಳಿಸಿದ್ದರು. ‘ಬಾಲರಮಣವರ್ಮ ಅವರು ಮಹಿಳೆ ಜೊತೆಗೆ ಹೊಂದಿದ್ದ ಸಂಬಂಧ ಬಹಿರಂಗ ಸತ್ಯವೇ ಆಗಿತ್ತು’ ಎಂದೂ ಹೇಳಿದ್ದರು.</p><p>ಆದರೆ, ಕೃತಿಯಲ್ಲಿ ಈ ಅಂಶವನ್ನು ದಾಖಲಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಕೃತಿಯನ್ನು ಹಿಂಪಡೆಯಬೇಕು ಎಂಬ ಬೆದರಿಕೆ ಕೇಳಿಬಂದಿದೆ. ಆದರೆ, ಈ ಎಲ್ಲ ಬೆಳವಣಿಗೆ ಕುರಿತು ರಾಜಮನೆತನದವರು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ</strong>: ತಿರುವಾಂಕೂರು ರಾಜಮನೆತನದ ಕೊನೆಯ ಆಡಳಿತಗಾರ ಹಾಗೂ ಮಹಿಳೆಯೊಬ್ಬರ ನಡುವೆ ಇದ್ದ ಸಂಬಂಧವನ್ನು ತನ್ನ ಕೃತಿಯಲ್ಲಿ ಉಲ್ಲೇಖಿಸಿದ್ದ ಲೇಖಕ, ಇತಿಹಾಸಕಾರ ಎಂ.ಜಿ.ಶಶಿಭೂಷಣ್ ಅವರಿಗೆ ಜೀವ ಬೆದರಿಕೆ ಕೇಳಿಬಂದಿದೆ.</p> <p>ಶಶಿಭೂಷಣ್ ಅವರ ಕೃತಿ ‘ಮಂಜುಪೋಯ ಶಂಕುಮುದ್ರ’ದಲ್ಲಿರುವ ಉಲ್ಲೇಖ ಕುರಿತು ಈಗ ಆಕ್ಷೇಪ ವ್ಯಕ್ತವಾಗಿದೆ. ಜೀವ ಬೆದರಿಕೆ ವ್ಯಕ್ತವಾಗಿರುವ ಸಂಬಂಧ ತಿರುವನಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. </p> <p>ಈ ಬೆಳವಣಿಗೆಯಿಂದ ಮಾನಸಿಕ ಒತ್ತಡದಲ್ಲಿರುವ ಲೇಖಕರು, ‘ಹೊಸ ಕೃತಿಯಲ್ಲಿ ಬರೆದಿರುವ ಅಂಶಗಳಿಗೆ ನಾನು ಬದ್ಧನಾಗಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.</p><p>ಫೆಬ್ರುವರಿ ತಿಂಗಳಲ್ಲಿ ಕೃತಿ ಬಿಡುಗಡೆಗೊಂಡಿತ್ತು. ತಿರುವಾಂಕೂರು ರಾಜಮನೆತನದ ಕೊನೆಯ ಆಡಳಿತಗಾರ, ಅವಿವಾಹಿತ ಶ್ರೀ ಚಿತಿರಾ ತಿರುನಾಳ್ ಬಾಲರಮಣವರ್ಮ ಅವರು ಮಹಿಳೆ ಜೊತೆಗೆ ಹೊಂದಿದ್ದರು ಎನ್ನಲಾದ ಸಂಬಂಧ ಕುರಿತು ಈ ಕೃತಿಯಲ್ಲಿ ಉಲ್ಲೇಖವಿದೆ.</p><p>ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯ ಚರ್ಚೆಯಾದ ಹಿಂದೆಯೇ, ನಿರ್ದಿಷ್ಟ ವಿವರವನ್ನು ದಾಖಲಿಸಿದ್ದಕ್ಕೆ ಕಾರಣ, ಅದಕ್ಕಿರುವ ಸಾಕ್ಷ್ಯಗಳನ್ನು ಲೇಖಕರು ತಿಳಿಸಿದ್ದರು. ‘ಬಾಲರಮಣವರ್ಮ ಅವರು ಮಹಿಳೆ ಜೊತೆಗೆ ಹೊಂದಿದ್ದ ಸಂಬಂಧ ಬಹಿರಂಗ ಸತ್ಯವೇ ಆಗಿತ್ತು’ ಎಂದೂ ಹೇಳಿದ್ದರು.</p><p>ಆದರೆ, ಕೃತಿಯಲ್ಲಿ ಈ ಅಂಶವನ್ನು ದಾಖಲಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಕೃತಿಯನ್ನು ಹಿಂಪಡೆಯಬೇಕು ಎಂಬ ಬೆದರಿಕೆ ಕೇಳಿಬಂದಿದೆ. ಆದರೆ, ಈ ಎಲ್ಲ ಬೆಳವಣಿಗೆ ಕುರಿತು ರಾಜಮನೆತನದವರು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>