<p><strong>ಗುವಾಹಟಿ</strong>: ಖ್ಯಾತ ಗಾಯಕ ಜುಬಿನ್ ಗರ್ಗ್ ಸಾವಿನ ಕಾರಣದಿಂದಾಗಿ ಅಸ್ಸಾಂನಲ್ಲಿ ಈ ಬಾರಿ ದುರ್ಗಾ ಪೂಜೆಯ ಸಂಭ್ರಮ ಕಳೆಗುಂದಿದೆ. ದುರ್ಗಾ ಪೂಜೆಯ ಹಲವು ಆಯೋಜಕರು ಕೇವಲ ಪೂಜಾ ಕೈಂಕರ್ಯಗಳನ್ನಷ್ಟೇ ನಡೆಸಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ.</p>.<p>ಹಲವು ಪೂಜಾ ಸಮಿತಿಗಳ ಮುಖ್ಯಸ್ಥರು ಮಾತನಾಡಿ,‘ ಜುಬಿನ್ ಅವರು ಇತ್ತೀಚೆಗಷ್ಟೇ ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದು ಸರಿಯಲ್ಲ. ಆದರೆ, ವಾರ್ಷಿಕ ದುರ್ಗಾ ಪೂಜೆಯೂ ಬಹಳ ಮುಖ್ಯವಾಗಿರುವ ಕಾರಣ ಕೇವಲ ಪೂಜಾ ಕಾರ್ಯಕ್ರಮಗಳನ್ನಷ್ಟೇ ನಡೆಸಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ. </p>.<p>ಮಾಲಿಗಾಂವ್ ಕಾಳಿಬಡಿ ದುರ್ಗಾ ಪೂಜಾ ಸಮಿತಿಯು ಈ ಬಾರಿ ತನ್ನ ಅಮೃತ ಮಹೋತ್ಸವದ ಅದ್ದೂರಿ ಆಚರಣೆಗೆ ಸಿದ್ಧತೆ ನಡೆಸಿತ್ತು. ಆದರೆ, ಜುಬಿನ್ ಅವರ ನಿಧನದ ಕಾರಣದಿಂದಾಗಿ ನಿಗದಿಯಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ.</p>.<p>ಇತ್ತ ಗುವಾಹಟಿ ದುರ್ಗಾ ಪೂಜಾ ಸಮಿತಿ ಕೂಡ ಕೇವಲ ಪೂಜಾ ಕೈಂಕರ್ಯ ನಡೆಸುವುದಾಗಿ ಹೇಳಿದೆ. ಎಲ್ಲಾ ದುರ್ಗಾ ಪೂಜಾ ಪೆಂಡಾಲ್ಗಳಲ್ಲೂ ಜುಬಿನ್ ಅವರ ಗೌರವಾರ್ಥ ಅವರ ಫೋಟೋ ಇಟ್ಟು ಪೂಜೆ ಸಲ್ಲಿಸಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುವಾಹಟಿ</strong>: ಖ್ಯಾತ ಗಾಯಕ ಜುಬಿನ್ ಗರ್ಗ್ ಸಾವಿನ ಕಾರಣದಿಂದಾಗಿ ಅಸ್ಸಾಂನಲ್ಲಿ ಈ ಬಾರಿ ದುರ್ಗಾ ಪೂಜೆಯ ಸಂಭ್ರಮ ಕಳೆಗುಂದಿದೆ. ದುರ್ಗಾ ಪೂಜೆಯ ಹಲವು ಆಯೋಜಕರು ಕೇವಲ ಪೂಜಾ ಕೈಂಕರ್ಯಗಳನ್ನಷ್ಟೇ ನಡೆಸಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ.</p>.<p>ಹಲವು ಪೂಜಾ ಸಮಿತಿಗಳ ಮುಖ್ಯಸ್ಥರು ಮಾತನಾಡಿ,‘ ಜುಬಿನ್ ಅವರು ಇತ್ತೀಚೆಗಷ್ಟೇ ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದು ಸರಿಯಲ್ಲ. ಆದರೆ, ವಾರ್ಷಿಕ ದುರ್ಗಾ ಪೂಜೆಯೂ ಬಹಳ ಮುಖ್ಯವಾಗಿರುವ ಕಾರಣ ಕೇವಲ ಪೂಜಾ ಕಾರ್ಯಕ್ರಮಗಳನ್ನಷ್ಟೇ ನಡೆಸಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ. </p>.<p>ಮಾಲಿಗಾಂವ್ ಕಾಳಿಬಡಿ ದುರ್ಗಾ ಪೂಜಾ ಸಮಿತಿಯು ಈ ಬಾರಿ ತನ್ನ ಅಮೃತ ಮಹೋತ್ಸವದ ಅದ್ದೂರಿ ಆಚರಣೆಗೆ ಸಿದ್ಧತೆ ನಡೆಸಿತ್ತು. ಆದರೆ, ಜುಬಿನ್ ಅವರ ನಿಧನದ ಕಾರಣದಿಂದಾಗಿ ನಿಗದಿಯಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ.</p>.<p>ಇತ್ತ ಗುವಾಹಟಿ ದುರ್ಗಾ ಪೂಜಾ ಸಮಿತಿ ಕೂಡ ಕೇವಲ ಪೂಜಾ ಕೈಂಕರ್ಯ ನಡೆಸುವುದಾಗಿ ಹೇಳಿದೆ. ಎಲ್ಲಾ ದುರ್ಗಾ ಪೂಜಾ ಪೆಂಡಾಲ್ಗಳಲ್ಲೂ ಜುಬಿನ್ ಅವರ ಗೌರವಾರ್ಥ ಅವರ ಫೋಟೋ ಇಟ್ಟು ಪೂಜೆ ಸಲ್ಲಿಸಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>