<p><strong>ಮುಂಬೈ (ಪಿಟಿಐ): </strong>ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ನಡೆಸಿದ್ದ ಉಪವಾಸಕ್ಕೂ ಈಗ ಅಣ್ಣಾ ಹಜಾರೆ ಅವರು ಉಪವಾಸವನ್ನು ಪ್ರತಿಭಟನೆಯ ಅಸ್ತ್ರವಾಗಿ ಬಳಸುತ್ತಿರುವುದಕ್ಕೂ ವ್ಯತ್ಯಾಸವಿದೆ ಎಂದು ಗಾಂಧಿ ಮರಿ ಮೊಮ್ಮಗ ತುಷಾರ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.<br /> <br /> ಗಾಂಧಿ ಉಪವಾಸಕ್ಕೆ ಎದುರಾಳಿಯನ್ನು ಮಿತ್ರನನ್ನಾಗಿ ಪರಿವರ್ತಿಸುವ ಉದ್ದೇಶವಿರುತ್ತಿತ್ತು. ಆದರೆ ಅಣ್ಣಾ ಒಬ್ಬ ಶತ್ರುವಿನ ವಿರುದ್ಧ ಉಪವಾಸ ಮಾಡುತ್ತಿದ್ದಾರೆ. ಅಣ್ಣಾ ರಾಷ್ಟ್ರವನ್ನು ಮುಸುಕಿರುವ ಹತಾಶೆಯ ಪ್ರತೀಕವಾಗಿದ್ದಾರೆ. ಆದರೆ ಅವರ ಆಂದೋಲನಕ್ಕೆ ಜನಪ್ರಿಯತೆಯ ಆಯಾಮ ಇದೆ ಎಂದು ತುಷಾರ್ ವಿಶ್ಲೇಷಿಸಿದ್ದಾರೆ.<br /> <br /> `ಸೋಮವಾರದಿಂದ ನಾವು ನೋಡುತ್ತಿರುವ ವಿದ್ಯಮಾನಗಳು ಪ್ರಜಾತಾಂತ್ರಿಕ ಹಕ್ಕುಗಳ ಬಗ್ಗೆ ಜನರ ಕಾಳಜಿಯನ್ನು ತೋರಿಸುತ್ತಿವೆ. ಸರ್ಕಾರ ಹಾಗೂ ಜನತೆ ನಡುವಿನ ಸಂಪರ್ಕವೇ ಇಲ್ಲವೆಂಬ ಭಾವವೂ ಇದರಲ್ಲಿ ಸೇರಿದೆ~ ಎಂದಿದ್ದಾರೆ.<br /> <br /> ಗಾಂಧಿ ಅವರು ಜೀವಂತ ಇದ್ದಿದ್ದರೆ, ಪರಿಸ್ಥಿತಿ ಇಷ್ಟು ವಿಷಮವಾಗಲು ಆಸ್ಪದವನ್ನೇ ನೀಡುತ್ತಿರಲಿಲ್ಲ. ಆರಂಭದಲ್ಲೇ ಅದನ್ನು ಚಿವುಟಿ ಹಾಕುವ ದಿಸೆಯಲ್ಲಿ ಸಕ್ರಿಯರಾಗುತ್ತಿದ್ದರು ಎಂದು ಹೇಳಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ): </strong>ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ನಡೆಸಿದ್ದ ಉಪವಾಸಕ್ಕೂ ಈಗ ಅಣ್ಣಾ ಹಜಾರೆ ಅವರು ಉಪವಾಸವನ್ನು ಪ್ರತಿಭಟನೆಯ ಅಸ್ತ್ರವಾಗಿ ಬಳಸುತ್ತಿರುವುದಕ್ಕೂ ವ್ಯತ್ಯಾಸವಿದೆ ಎಂದು ಗಾಂಧಿ ಮರಿ ಮೊಮ್ಮಗ ತುಷಾರ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.<br /> <br /> ಗಾಂಧಿ ಉಪವಾಸಕ್ಕೆ ಎದುರಾಳಿಯನ್ನು ಮಿತ್ರನನ್ನಾಗಿ ಪರಿವರ್ತಿಸುವ ಉದ್ದೇಶವಿರುತ್ತಿತ್ತು. ಆದರೆ ಅಣ್ಣಾ ಒಬ್ಬ ಶತ್ರುವಿನ ವಿರುದ್ಧ ಉಪವಾಸ ಮಾಡುತ್ತಿದ್ದಾರೆ. ಅಣ್ಣಾ ರಾಷ್ಟ್ರವನ್ನು ಮುಸುಕಿರುವ ಹತಾಶೆಯ ಪ್ರತೀಕವಾಗಿದ್ದಾರೆ. ಆದರೆ ಅವರ ಆಂದೋಲನಕ್ಕೆ ಜನಪ್ರಿಯತೆಯ ಆಯಾಮ ಇದೆ ಎಂದು ತುಷಾರ್ ವಿಶ್ಲೇಷಿಸಿದ್ದಾರೆ.<br /> <br /> `ಸೋಮವಾರದಿಂದ ನಾವು ನೋಡುತ್ತಿರುವ ವಿದ್ಯಮಾನಗಳು ಪ್ರಜಾತಾಂತ್ರಿಕ ಹಕ್ಕುಗಳ ಬಗ್ಗೆ ಜನರ ಕಾಳಜಿಯನ್ನು ತೋರಿಸುತ್ತಿವೆ. ಸರ್ಕಾರ ಹಾಗೂ ಜನತೆ ನಡುವಿನ ಸಂಪರ್ಕವೇ ಇಲ್ಲವೆಂಬ ಭಾವವೂ ಇದರಲ್ಲಿ ಸೇರಿದೆ~ ಎಂದಿದ್ದಾರೆ.<br /> <br /> ಗಾಂಧಿ ಅವರು ಜೀವಂತ ಇದ್ದಿದ್ದರೆ, ಪರಿಸ್ಥಿತಿ ಇಷ್ಟು ವಿಷಮವಾಗಲು ಆಸ್ಪದವನ್ನೇ ನೀಡುತ್ತಿರಲಿಲ್ಲ. ಆರಂಭದಲ್ಲೇ ಅದನ್ನು ಚಿವುಟಿ ಹಾಕುವ ದಿಸೆಯಲ್ಲಿ ಸಕ್ರಿಯರಾಗುತ್ತಿದ್ದರು ಎಂದು ಹೇಳಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>